Author: editor.udayarashmi@gmail.com

ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ & ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗೆ ಚುನಾವಣಾ ಆಯೋಗ ನೋಟಿಸ್ ಜಾರಿ ನವದೆಹಲಿ: ಪ್ರಧಾನಿಯೊಬ್ಬರ ವಿರುದ್ಧ ಮೊದಲ ಬಾರಿಗೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ದೂರನ್ನು ದಾಖಲಿಸಿಕೊಂಡಿರುವ ಚುನಾವಣಾ ಆಯೋಗ, ರಾಜಸ್ಥಾನದ ಬನ್ಸ್ವಾರಾದಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿಭಜನೆ ಮತ್ತು ಮಾನಹಾನಿಕರ ಭಾಷಣ ಮಾಡಿದ್ದಾರೆ ಎಂಬ ಪ್ರತಿಪಕ್ಷದ ಆರೋಪದ ಮೇಲೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಗುರುವಾರ ನೋಟಿಸ್ ಜಾರಿ ಮಾಡಿದೆ. ಹಾಗೆಯೇ, ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ಬಿಜೆಪಿ ಸಲ್ಲಿಸಿರುವ ದೂರಿನ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಇಬ್ಬರೂ ಎಐಸಿಸಿ ಅಧ್ಯಕ್ಷರಿಗೂ ಪ್ರತ್ಯೇಕ ನೋಟಿಸ್ ನೀಡಿದೆ.ಏಪ್ರಿಲ್ 21 ರಂದು ಬನ್ಸ್ವಾರಾದಲ್ಲಿ ಮೋದಿ ಅವರು ಮಾಡಿದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್, ಸಿಪಿಐ, ಸಿಪಿಐ (ಎಂಎಲ್) ಮತ್ತು ನಾಗರಿಕ ಸಮಾಜ ಗುಂಪುಗಳು ಸಲ್ಲಿಸಿದ ದೂರುಗಳಿಗೆ ಸೋಮವಾರದೊಳಗೆ ಪ್ರತಿಕ್ರಿಯೆ ನೀಡಲು ಚುನಾವಣಾ ಆಯೋಗವು ನಡ್ಡಾ ಅವರಿಗೆ ಕಳುಹಿಸಿದ ನೋಟಿಸ್‌ನಲ್ಲಿ ಕೋರಿದೆ. ಕಾಂಗ್ರೆಸ್ ಜನರ ಸಂಪತ್ತನ್ನು…

Read More

ವಿಜಯಪುರ: ನಗರ ಸ್ಲಂ – ಸ್ವಸಹಾಯ ಸಂಘಗಳ ಒಕ್ಕೂಟ (ರಿ ), ವಿಜಯಪುರ ನಗರ ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟ (ರಿ ), ವಿಜಯಪುರ ನಗರ ಗೃಹ ಕಾರ್ಮಿಕರ ಯೂನಿಯನ್(ರಿ ), ನಗರ ಅಸಂಘಟಿತ ಯುವತಿಯರ ಒಕ್ಕೂಟ, ಪ್ರಗತಿಪರ ಸಂಘಟನೆಗಳ ಒಕ್ಕೂಟ ಇವರ ಸಹಯೋಗದಲ್ಲಿ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಕೊಲೆ ಆಗುತ್ತಿರುವುದನ್ನು ಖಂಡಿಸಿ ನಗರದ ಅಂಬೇಡ್ಕರ ವೃತ್ತದಿಂದ ಗಾಂಧಿ ವೃತದವರಿಗೆ ಮಹಿಳೆಯರು ಪಂಜಿನ ಮೆರವಣಿಗೆ ನಡೆಸಿದರು.ಈ ಸಂದರ್ಭದಲ್ಲಿ ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿದ ಶ್ರೀಮತಿ ನಿರ್ಮಲಾ ಹೊಸಮನಿ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವೆಸಗಿ ಅವರನ್ನು ಕೊಲೆ ಮಾಡುವುದು ಈಗ ಹೆಚ್ಚಾಗಿದೆ. ಅಂತಹ ದುಷ್ಕರ್ಮಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.ಇದೇ ಸಂದರ್ಭದಲ್ಲಿ ದಲಿತ ಮುಖಂಡ ಶ್ರೀನಾಥ ಪೂಜಾರಿ ಮಾತನಾಡಿ, ಹೆಣ್ಣು ಮಕ್ಕಳು ಎಂದರೆ ಆ ದುಷ್ಕರ್ಮಿಗಳಿಗೆ ಆಟ ಆಡುವ ವಸ್ತುವಾಗಿದ್ದಾರೆ. ಯಾರು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಮಾಡುತ್ತಾರೋ ಅಂಥವರನ್ನು ಗುರುತಿಸಿ ಅಂಥವರಿಗೆ ಕಠಿಣ ಶಿಕ್ಷೆಗೆ…

Read More

ಮುದ್ದೇಬಿಹಾಳ: ತಾಳಿಕೋಟೆ ತಾಲೂಕಿನ ಕೊಣ್ಣೂರ ಗ್ರಾಮಸ್ಥರ ಬಹು ದಿನಗಳ ಬೇಡಿಕೆಯಾದ ಕೊಣ್ಣೂರ-ಹೂವಿನಹಿಪ್ಪರಗಿ ಕೂಡುವ ರಸ್ತೆ ಕಾಮಗಾರಿ ಕೈಗೊಳ್ಳುವಂತೆ ಆಗ್ರಹಿಸಿ ಕೊಣ್ಣೂರ ಗ್ರಾಮದ ರೈತರು, ಹಿರಿಯರು, ಹೋರಾಟಗಾರರು, ಮುಖಂಡರು ಶಾಸಕ ಸಿ.ಎಸ್.ನಾಡಗೌಡರಿಗೆ ಮನವಿ ಮಾಡಿಕೊಂಡರು.ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಶಾಸಕರ ನಿವಾಸದಲ್ಲಿ ಈ ಬಗ್ಗೆ ಮನವಿ ಮಾಡಿಕೊಂಡರು.ಮನವಿಗೆ ಸ್ಪಂದಿಸಿದ ಶಾಸಕರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳದಲ್ಲಿಯೇ ದೂರವಾಣಿಯ ಮೂಲಕ ಮಾತನಾಡಿ, ಶೀಘ್ರವಾಗಿ ಕಾಮಗಾರಿಯನ್ನು ಅನುಷ್ಠಾನಗೊಳಿಸುವದಾಗಿ ಭರವಸೆಯನ್ನು ನೀಡಿದರು.ಈ ವೇಳೆ ಅಸ್ಕಿ ಫೌಂಡೇಶನ ಅಧ್ಯಕ್ಷ ಸಿ.ಬಿ.ಅಸ್ಕಿ, ಗ್ರಾಮದ ಹಿರಿಯ ಮುಖಂಡರಾದ ಬಸವರಾಜ ಹಡಲಗೇರಿ, ನಿವೃತ ಶಿಕ್ಷಕ ಉ.ಉ.ಅಸ್ಕಿ, ಬಾಲನಗೌಡ ಬಿರಾದಾರ, ಚಂದ್ರಶೇಖರ ಇಂಗಳಗಿ, ಸುಭಾಸ ತಾಳಿಕೋಟಿ, ಗಂಗಣ್ಣ ಬಡಿಗೇರ, ಮಕ್ತುಮಸಾಬ ಅವಟಿ, ಮಶ್ಯಾಕ ಅವಟಿ, ರಮೇಶ ಕೊಟಗಿ, ಬಸನಗೌಡ ಪಾಟೀಲ, ಬಾಪೂಗೌಡ ನೀರಲಗಿ, ಮಂಜುನಾಥ ಶಿನ್ನೂರ, ಸಿದ್ದಪ್ಪ ಶಿರಕನಳ್ಳಿ, ಮಾಂತಗೌಡ ಏವೂರ, ಅಭಿಷೇಕ ಹಡಲಗೇರಿ, ಶ್ರೀಕಾಂತ ಅಸ್ಕಿ, ಪ್ರಕಾಶ ಅಸ್ಕಿ, ವೀರೇಶ ಅಸ್ಕಿ ಸೇರಿದಂತೆ ಮತ್ತೀತರರು ಭಾಗಿಯಾಗಿದ್ದರು.

Read More

ವಿಜಯಪುರ: ಪುರಪ್ರವೇಶ ಮಾಡಿದ ಕಂಬಿ ಮಲ್ಲಯ್ಯನಿಗೆ ಗುರುವಾರ ನಗರದ ಇಬ್ರಾಹಿಂಪುರದಲ್ಲಿ ಗ್ರಾಮಸ್ಥರು ‍‌ಭವ್ಯ ಸ್ವಾಗತ ಕೋರಿ ಭಕ್ತಿಭಾವದಿಂದ ಬರಮಾಡಿಕೊಂಡರು.ಯುಗಾದಿ ಹಬ್ಬಕ್ಕೂ ಮುನ್ನ ಇಲ್ಲಿಂದ ಮಲ್ಲಯ್ಯನ ಕಂಬಿಗಳ ಸಮೇತ ಶ್ರೀಶೈಲಕ್ಕೆ ತೆರಳಲಾಗಿತ್ತು. ಪಾತಾಳಗಂಗೆಯಲ್ಲಿ ಕಂಬಿಗಳಿಗೆ ಪೂಜೆ ಮಾಡಿಕೊಂಡು ಮರಳಿ ಬಂದ ಹಿನ್ನೆಲೆಯಲ್ಲಿ ಇಂದು ಗ್ರಾಮಸ್ಥರು ಹಾಗೂ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಸೇವಾ ಸಮಿತಿಯವರು ಮಲ್ಲಯ್ಯನ ಕಂಬಿಗಳನ್ನು ಗ್ರಾಮದಲ್ಲಿ ಅದ್ಧೂರಿಯಿಂದ ಬರಮಾಡಿಕೊಂಡರು.ಪುರಪ್ರವೇಶ ಮಾಡಿದ ಮಲ್ಲಯ್ಯನ ಕಂಬಿಗಳನ್ನು ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಇರಿಸಲಾಯಿತು. ನಂತರ ದೇವಸ್ಥಾನದ ಅರ್ಚಕ ಓಂಕಾರ ಮಠಪತಿ ಅವರು ಕಂಬಿ ಮಲ್ಲಯ್ಯನಿಗೆ ಪೂಜೆ ನೆರವೇರಿಸಿದರು. ಸುಮಂಗಲೆಯರು ಭಕ್ತಿಭಾವದಿಂದ ಆರುತಿ ಬೆಳಗಿದರು.ಕಂಬಿಮಲ್ಲಯ್ಯ ಪುರಪ್ರವೇಶ ಮಾಡಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಇಂದು ಹಬ್ಬದ ಸಂಭ್ರಮ ಮನೆ ಮಾಡಿತ್ತು.ಮಹಾನಗರ ಪಾಲಿಕೆ ಸದಸ್ಯ ಕುಮಾರ ಗಡಗಿ, ಗ್ರಾಮದ ಹಿರಿಯರಾದ ಗಿರಮಲ್ಲಪ್ಪ ನುಚ್ಚಿ, ಸೂರ್ಯಕಾಂತ ಗಡಗಿ, ಶಿವಸಂಗಪ್ಪ ಹಳ್ಳಿ, ಅಪ್ಪುಗೌಡ ಪಾಟೀಲ ಸೇರಿದಂತೆ ಸಹಸ್ರಾರು ಜನ ಭಕ್ತರು ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಆಗಮಿಸಿ ಕಂಬಿ ಮಲ್ಲಯ್ಯನ ದರ್ಶನ ಪಡೆದರು.ಕಂಬಿ ಮಲ್ಲಯ್ಯನ ದರ್ಶನಕ್ಕೆ…

Read More

ಇಂಡಿ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ವೈ.ಟಿ.ಪಾಟೀಲ ಆಯ್ಕೆಯಾಗಿದ್ದಾರೆ.ಪ್ರಧಾನ ಕಾರ್ಯದರ್ಶಿಯಾಗಿ ಅಲ್ಪಾಫ್ ಬೋರಾಮಣಿ, ಉಪಾಧ್ಯಕ್ಷರಾಗಿ ಸಿ.ಎಸ್.ಝಳಕಿ, ಮಹಿಳಾ ಉಪಾಧ್ಯಕ್ಷರಾಗಿ ಶ್ರೀಮತಿ ಜೆ.ಎಸ್.ತೆಲಗ ಆಯ್ಕೆಯಾದರು.ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಇಂಡಿ ತಾಲೂಕಾ ಕನಕದಾಸ ನೌಕರರ ಸಂಘದ ಅಧ್ಯಕ್ಷ ಬಿ.ಎಸ್. ಪಾಟೀಲ ಹಾಗೂ ಸರ್ವ ಸದಸ್ಯರು, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷ ಬಿ.ಟಿ.ಗೌಡರ, ಇಂಡಿ ತಾಲೂಕಿನ ನಿಕಟಪೂರ್ವ ಅಧ್ಯಕ್ಷ ಎಸ್.ವಿ.ಹರಳಯ್ಯ, ಪ್ರಧಾನ ಕಾರ್ಯದರ್ಶಿ ಎಂ.ಎನ್. ನೇದಲಗಿ, ಶಿಕ್ಷಕರ ಸೊಸೈಟಿಯ ಅಧ್ಯಕ್ಷ ಪಿ.ಎಸ್.ಚಾಂದಕವಟೆ, ಚಡಚಣ ತಾಲೂಕಿನ ಕಸಾಪ ಅಧ್ಯಕ್ಷ ಎಸ್.ಎಲ್.ಮಾನೆ ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಿದರು.ಸಭೆಯಲ್ಲಿ ರಾಯಣ್ಣ ಇವಣಗಿ, ತಾಲೂಕಿನ ಶಿಕ್ಷಕರ ಹಾಗೂ ಕನಕದಾಸ ನೌಕರರ ಸಂಘದ ಸರ್ವ ಸದಸ್ಯರು ಪಾಲ್ಗೊಂಡಿದ್ದರು.

Read More

ದೇವರಹಿಪ್ಪರಗಿ: ತೋಳದ ದಾಳಿಗೆ ಸಿಲುಕಿ ೧೩ ಕುರಿಮರಿಗಳು ಬಲಿಯಾದ ಘಟನೆ ದೇವೂರ ಗ್ರಾಮದ ಜಮೀನಿನಲ್ಲಿ ಜರುಗಿದೆ.ತಾಲ್ಲೂಕಿನ ದೇವೂರ ಗ್ರಾಮದ ಹೊರವಲಯದಲ್ಲಿ ಬುಧವಾರ ಈ ಘಟನೆ ಜರುಗಿದ್ದು, ಘಟನೆಯಲ್ಲಿ ದೇವರಹಿಪ್ಪರಗಿ ನಿವಾಸಿ ಗೊಲ್ಲಾಳಪ್ಪ ಹೊನ್ನಮಿಸಿ ಎಂಬುವವರಿಗೆ ಸೇರಿದ ಕುರಿಮರಿಗಳು ಬಲಿಯಾಗಿವೆ.ಕುರಿ ಮೇಯಿಸಿಕೊಂಡು ಬಂದು ರಾತ್ರಿ ಕುರಿದೊಡ್ಡಿಯಲ್ಲಿ ಕುರಿಗಳು ಹಾಗೂ ಮರಿಗಳನ್ನು ಪ್ರತ್ಯೇಕವಾಗಿ ಇರಿಸಲಾಗಿತ್ತು. ನಡುರಾತ್ರಿಯಲ್ಲಿ ಮರಿಗಳ ಮೇಲೆ ದಾಳಿ ಮಾಡಿದ ತೋಳ ಅಂದಾಜು ೧ ಲಕ್ಷ.ರೂ. ಮೌಲ್ಯದ ೧೩ ಕುರಿಗಳನ್ನು ಕೊಂದಿದೆ.

Read More

ದೇವರಹಿಪ್ಪರಗಿ: ಕನ್ನಡದ ಪ್ರಥಮ ಮಹಿಳಾ ಕವಿಯತ್ರಿಯಾಗಿ, ವಚನ ಸಾಹಿತ್ಯಕ್ಕೆ ತನ್ನದೆಯಾದ ಕೊಡುಗೆ ನೀಡಿದ ಶಿವಶರಣೆ ಅಕ್ಕಮಹಾದೇವಿ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದ್ದಾರೆ ಎಂದು ಬಸವ ಶರಣ ಸಂಗಮ ಸಮಿತಿ ಅಧ್ಯಕ್ಷ ಸಂಗಣ್ಣ ತಡವಲ್ ಹೇಳಿದರು.ಪಟ್ಟಣದ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಬಸವಶರಣ ಸಂಗಮ ಸಮಿತಿ ಅಡಿಯಲ್ಲಿ ಅಕ್ಕಮಹಾದೇವಿ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ಚೈತ್ರ ಮಾಸದ ಚಿತ್ತಾ ನಕ್ಷತ್ರದ ದವನದ ಹುಣ್ಣಿಮೆಯ ದಿನ ಶಿವಶರಣೆ ಅಕ್ಕಮಹಾದೇವಿ ಮಹಾಮಾತೆ ಜನಿಸಿ, ಶರಣ ಚಳುವಳಿಯ ಮುಂಚೂಣಿಯಲ್ಲಿ ಕಲ್ಯಾಣ ಕ್ರಾಂತಿಯ ಜೊತೆಗೆ ಇಡೀ ತಮ್ಮ ಬದುಕನ್ನು ಹೋರಾಟದಲ್ಲಿ ಕೊನೆಗಾಣಿಸಿದವರು. ಅವರ ಜೀವನ, ಸಾಧನೆ, ರಚಿಸಿದ ವಚನಗಳ ಸಾರವನ್ನು ನಾವು ಅರಿತುಕೊಂಡು ಮುನ್ನಡೆಯೋಣ ಎಂದರು.ವಚನ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಜೆ.ಆರ್.ಬಿರಾದಾರ, ಕಸಾಪ ತಾಲ್ಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ, ಕೆ.ಎಮ್.ನಂದಿ, ಗೋಲ್ಲಾಳ ಬಿರಾದಾರ, ನಿಂಗು ಜಡಗೊಂಡ, ಮಲ್ಲು ಹಳಿಮನಿ, ಕಾಶೀನಾಥ ರಾಮಗೊಂಡ, ಕಾಸಪ್ಪ ಕುಂಬಾರ, ಹನುಮೇಶ ನಂದ್ಯಾಳ, ಶ್ರೇಯಾ, ರಾಣಿ ಸೇರಿದಂತೆ ಮಕ್ಕಳು ಇದ್ದರು.

Read More

ಮದುವೆ ಮಂಟಪದಲ್ಲಿ ಮತದಾನ ಜಾಗೃತಿ! ಇಂಡಿ: ತಾಲೂಕು ಸ್ವೀಪ್ ಸಮಿತಿ ವತಿಯಿಂದ ಗುರುವಾರ ಮತದಾನ ಜಾಗೃತಿ ಕುರಿತು ವಿನೂತನವಾಗಿ ಮಾಹಿತಿ ಪ್ರಚುರಪಡಿಸಿದರು.ಇಂಡಿ ನಗರದ ಕಲ್ಯಾಣ ಮಂಟಪದಲ್ಲಿ ಜರುಗಿದ ಹಳ್ಳಿ ರವರ ಮದುವೆ ಸಮಾರಂಭದಲ್ಲಿ ತಾಲೂಕು ಸ್ವೀಪ್ ಸಮಿತಿಯ ಮತದಾರರ ಜಾಗೃತಿ ಕರ ಪತ್ರಗಳನ್ನು ವಧು-ವರರಿಗೆ ನೀಡಿ ಮದುವೆಗೆ ಆಗಮಿಸಿದ ಎಲ್ಲ ಜನರಿಗೆ ಮೇ ೦೭, ೨೦೨೪ ರಂದು ಜರುಗುವ ಮತದಾನ ದಿನದಂದು ಪ್ರತಿಜ್ಙಾವಂತ ಮತದಾರರು ತಪ್ಪದೇ ಕಡ್ಡಾಯವಾಗಿ ತಮ್ಮ-ತಮ್ಮ ಮತಕೇಂದ್ರಗಳಿಗೆ ತೆರಳಿ ಮತದಾನ ಮಾಡಲು ಸ್ವೀಪ್ ಸಮಿತಿ ಸದಸ್ಯರು ವಿನಂತಿಸಿದರು.ಈ ಸಂದರ್ಭದಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಮತಗಟ್ಟೆಗಳನ್ನು ಮದುವೆ ಮಂಟಪದಂತೆ ಶೃಂಗರಿಸಿ, ಮತದಾರರ ಹಿತದೃಷ್ಠಿಯಿಂದ ಮತದಾನ ಕೇಂದ್ರದಲ್ಲಿ ಕೈಗೊಂಡ ಅಗತ್ಯ ಮೂಲಭೂತ ಸೌಕರ್ಯ ಹಾಗೂ ಸೌಲಭ್ಯಗಳ ಸಾರ್ವಜನಿಕರಿಗೆ ಕುರಿತು ಮನವರಿಕೆ ಮಾಡಿಕೊಟ್ಟರು.ಮತದಾರರಿಗೆ ಹೆಚ್ಚಿನ ಮಾಹಿತಿಗಾಗಿ ಕರಪತ್ರದಲ್ಲಿ ನೀಡಿದ ಮಾಹಿತಿಗಳು ಮತದಾರರ ಪಟ್ಟಿಯಲ್ಲಿ ಹೆಸರು ನೋಡಲು ವಿ.ಎಚ್.ಅ ಆಪ್, ಮತದಾರರ ಚೀಟಿ ಇಲ್ಲದಿದ್ದ ಪಕ್ಷದಲ್ಲಿ ಬೇಕಾದ ದಾಖಲೆಗಳು, ಸಹಾಯವಾಣಿ, ದೂರು ನಿರ್ವಹಣಾ ಸಂಖ್ಯೆ,…

Read More

ಇಂಡಿ: ಎರಡು ಬಾರಿ ಪ್ರಧಾನಿಯಾಗಿ, ಮೂರು ಬಾರಿ ಗುಜರಾತ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ನರೇಂದ್ರ ಮೋದಿ ಅವರ ನಾಯಕತ್ವ ದೇಶದ ಭದ್ರತೆ ವಿಚಾರದಲ್ಲಿ ಅನಿವಾರ್ಯವಾಗಿದೆ ಎಂದು ವಿಜಯಪುರ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ ಹೇಳಿದರು.ವಾರ್ಡ ನಂ,೧೨ರಲ್ಲಿ ಬಿಜೆಪಿ ವಿಜಯಪೂರ ಲೋಕಸಭಾ ಅಭ್ಯರ್ಥಿ ರಮೇಶ ಜಿಗಜಿಣಗಿಯವರ ಪರವಾಗಿ ತಯಾಚನೆ ಮಾಡಿ ಮಾತನಾಡಿದರು.ಸಂಸದ ರಮೇಶ ಜಿಗಜಿಣಗಿ ಸರ್ವಜನಾಂಗವನ್ನು ಪ್ರೀತಿ, ವಿಶ್ವಾದಿಂದ ಕಾಣುವ ಹೃದಯವಂತ ರಾಜಕಾರಣಿ, ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ದಿಪರ ಕೆಲಸ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣ, ರೈಲ್ವೇ ಓರ್ ಬ್ರೀಜ್, ನೀರಾವರಿ ಯೋಜನೆಗಳು , ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಸೇರಿದಂತೆ ಸಾಕಷ್ಟು ಯೋಜನೆಗಳ ಹೊಳೆಯನ್ನೆ ಹರಿಸಿದ್ದಾರೆ. ಕಾರಣ ಅವರಿಗೆ ಇದೊಂದು ಬಾರಿ ಅರ್ಶೀವಾದ ಮಾಡಬೇಕು ಎಂದು ಮನವಿ ಮಾಡಿದರು.ಅನೀಲಗೌಡ ಬಿರಾದಾರ, ಸಿದ್ದಲಿಂಗ ಹಂಜಗಿ, ದೇವೇಂದ್ರ ಕುಂಬಾರ, ಶಿವು ಬಗಲಿ, ಅಶೋಕಗೌಡ ಬಿರಾದಾರ, ಮಹೇಶ ಹೂಗಾರ, ಸುನಂದಾ ಗಿರಣಿವಡ್ಡರ, ವಿಜಯಲಕ್ಷ್ಮಿ ರೂಗಿಮಠ, ಅನುಸುಯ್ಯಾ ಮದರಿ, ಸುನೀಲ ಕಾಲೇಬಾಗ,…

Read More

ಕಲಕೇರಿ: ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಮಹಾಶಕ್ತಿಕೇಂದ್ರ ಕಲಕೇರಿಯ ಹಿರೇಮಠ ಮತ್ತು ಗದ್ದಿಗೆಮಠ ಗುರುಹಿರಿಯರಿಗೆ ಬಿಜೆಪಿ ಪಕ್ಷದ ಕರಪತ್ರಗಳನ್ನು ನೀಡುವ ಮೂಲಕ ವಿಜಯಪುರ ಲೋಕಸಭಾ ಚುನಾವಣೆಯ ಪ್ರಚಾರವನ್ನು ಆರಂಭಿಸಿದರು.ವಿಜಯಪುರ ಲೋಕಸಭಾ ಮೀಸಲು ಕ್ಷೇತ್ರದ ಅಭ್ಯರ್ಥಿ ಹಿರಿಯ ರಾಜಕಾರಣಿಗಳಾದ ರಮೇಶ ಜಿಗಜಿಣಗಿ ಅವರ ಪರವಾಗಿ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಉಪಾಧ್ಯಕ್ಷರು, ದೇವರ ಹಿಪ್ಪರಗಿ ಮಂಡಲ ಉಪಾಧ್ಯಕ್ಷರು, ಯುವ ಮೋರ್ಚಾ ಅಧ್ಯಕ್ಷರು, ಮಹಾಶಕ್ತಿ ಕೇಂದ್ರದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಗ್ರಾಮದ ಪ್ರಮುಖ ಬಜಾರದಲ್ಲಿ ಮತ್ತು ಮನೆ ಮನೆಗೆ ತೆರಳಿ ಬಿಜೆಪಿ ಪಕ್ಷದ ಕರಪತ್ರಗಳನ್ನು ನೀಡಿ ಮತಯಾಚನೆ ಸಂಪರ್ಕ ಅಭಿಯಾನ ಪ್ರಾರಂಭ ಮಾಡಿದರು.ಈ ವೇಳೆ ಪಕ್ಷದ ಮುಖಂಡರುಗಳು ಮತ್ತು ಪದಾಧಿಕಾರಿಗಳಾದ ಪ್ರಭುಗೌಡ ಬಿರಾದಾರ ಅಸ್ಕಿ, ಸುಧಾಕರ ಅಡಕಿ, ಅಪ್ಪು ದೇಸಾಯಿ, ಸೋಮಶೇಖರ್ ಸಜ್ಜನ, ಕಿರಣ್‌ಕುಮಾರ್ ದೇಸಾಯಿ, ಪ್ರಕಾಶ ಯರನಾಳ, ಪವನಕುಮಾರ್ ನಾಡಗೌಡ, ಮಡಿವಾಳಪ್ಪ ಹೂಗಾರ, ಶಿವಾನಂದ್ ಗಣೇಶಮಠ, ಅಶೋಕ ವಡ್ಡರ, ಸುನೀಲ್ ಬಡಿಗೇರ, ಸುನೀಲ್ ಕಲಕೇರಿ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು…

Read More