ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಪಟ್ಟಣದ ಹೊರವಲಯದಲ್ಲಿರುವ ಲಿಂ. ಸಾಧು ಶಿವಪ್ಪಜ್ಜನ ಆಶ್ರಮದಲ್ಲಿ ಶುಕ್ರವಾರ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿದ್ದ ಭಜನೆ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ಜರುಗಿತು.
ಬೆಳಗ್ಗೆ ಸಾಧು ಶಿವಪ್ಪಜ್ಜನ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ನಡೆಯಿತು.
ಕನಮಡಿ, ತಿಕೋಟಾ, ಸುತ್ತಲಿನ ಗ್ರಾಮಗಳ ಭಜನಾ ತಂಡಗಳಿಂದ ಬೆಳಗಿಂದ ಸಾಯಂಕಾಲದ ವರೆಗೆ ಭಜನೆ, ಸಂಗೀತ ಕಾರ್ಯಕ್ರಮ ನಡೆಯಿತು. ಪಟ್ಟಣದ ನೂರಾರು ಭಕ್ತರು ಭಾಗವಹಿಸಿದ್ದರು.
ಮಾಣಿಕ ಬಿ. ಕುಂಬಾರ, ಜಗದೀಶ ಎಂ. ಕುಂಬಾರ, ಈಶ್ವರ ಕುಂಬಾರ, ಫರ್ಣೇಕರ್, ನಾಗೇಶ ಹಿರೇಮಠ, ಪ್ರೊ.ಬಿ.ಎಸ್.ಬೆಳಗಲಿ, ಮಲ್ಲಿಕಾರ್ಜುನ ಸಾಹು ಕುರ್ಪಿ, ಪಟ್ಟಣದ ಮುಖಂಡರು, ಯುವಕರು, ನೂತನ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

