ಇಂಡಿ ತಾಲೂಕು ಬರಗಾಲ ಪ್ರದೇಶವೆಂದು ಘೋಷಿಸಲು ಆಗ್ರಹ
ಉದಯರಶ್ಮಿ ದಿನಪತ್ರಿಕೆ
ಇಂಡಿ: ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆಯ ವತಿಯಿಂದ ಇಂಡಿ ತಾಲೂಕು ಬರಗಾಲ ಪ್ರದೇಶವೆಂದು ಸಾರಬೇಕೆಂದು ಆಗ್ರಹಿಸಿ ಮಂಗಳವಾರ ನಗರದಲ್ಲಿ ಕರ್ನಾಟಕ ರೈತ ಸಂಘದ ಅಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನೆಗೆ ಬಿಜೆಪಿ, ಜೆಡಿ ಎಸ್, ಬಸವ ಸಮಿತಿ, ಕೆ ಎಸ್ ಆರ್ ಪಕ್ಷ ತಮ್ಮ ಬೆಂಬಲ ಸೂಚಿಸಿದವು.
ರೈತ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಬಿ.ಕಂಬೋಗಿ, ಮಾಜಿ ಶಾಸಕ ರವಿಕಾಂತ ಪಾಟೀಲ, ಪ್ರಾಂತ ಸಮಿತಿಯ ಭೀಮರಾಯ ಪೂಜಾರಿ, ಬಿಜೆಪಿ ತಾಲೂಕಾ ಅಧ್ಯಕ್ಷ ಹಣಮಂತರಾಯಗೌಡ ಪಾಟೀಲ, ಜೆಡಿ ತಾಲೂಕಾ ಅಧ್ಯಕ್ಷ ಬಿ.ಡಿ.ಪಾಟೀಲ ಶಂಕರಗೌಡ ಪಾಟೀಲ, ಬಾಳು ಮುಳಜಿ, ಮರೆಪ್ಪ ಗಿರಣಿವಡ್ಡರ ಮಾತನಾಡಿ, ಇಂಡಿ ತಾಲೂಕು ಬರಗಾಲ ಪ್ರದೇಶವೆಂದು ಸಾರಬೇಕು. ಮಳೆಯಿಲ್ಲದೆ ಬೇಳೆ ಸರಿಯಾಗಿ ಬೆಳೆದಿಲ್ಲ. ಮಳೆ ಸರಿಯಾಗಿ ಆಗದ ಕಾರಣ ರೈತರು ಅತೀವ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಇಂಡಿ ತಾಲೂಕನ್ನು ಬರ ಪೀಡಿತವೆಂದು ಘೋಷಿಸಬೇಕು, ಬರದಿಂದ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು, ಬೆಳೆ ಸಮೀಕ್ಷೆ ತ್ವರಿತವಾಗಿ ಮತ್ತು ಪಾರದರ್ಶಕವಾಗಿ ನಡೆಯಬೇಕು. ರೈತರಿಗೆ ಬೆಳೆ ವಿಮೆ ಹಾಗೂ ಸರಕಾರದ ಪರಿಹಾರವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಶ್ರೀಕಾಂತ ಪಾಟೀಲ,ಶಂಕರಗೌಡ ಬಿರಾದಾರ, ಅನೀಲಗೌಡ ಬಿರಾದಾರ, ಮುನ್ನು ನಾಯ್ಕ, ಲಕ್ಷ್ಮಣ ಬಡಿಗೇರ, ಗುರುನಾಥ ಬಗಲಿ, ಹುಲಪ್ಪ ವಠಾರ, ಮಹೇಶ ಶಿವಗದಿಗಿ, ಬಸವರಾಜ ಹಂಚಿಗೆ, ಮಲ್ಲು ಸಾವಕಾರ, ಶಿವಾನಂದ ಯಡಹಳ್ಳಿ, ದೀಪ ಮಾರ್ನೂರ, ಅಶೋಕ ಜಾಧವ, ದುರ್ಗಪ್ಪ ಬೂದಿಹಾಳ ಏನು ಹಿಪ್ಪರಗಿ, ಮುತ್ತುರಾಜ ಹೊನಗೊಂಡ ಮಲ್ಲುಗೌಡ ಬಿರಾದಾರ ಮತ್ತಿತರಿದ್ದರು.
ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟ ಇವರಿಗೆ ಮನವಿ ಸಲ್ಲಿಸಿದರು.

