ಉದಯರಶ್ಮಿ ದಿನಪತ್ರಿಕೆ
ಅಥಣಿ: ರಾಜ್ಯದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಅಥಣಿ ಪಟ್ಟಣಕ್ಕೆ ಆಗಮಿಸಿದ ಸಚಿವ ಲಕ್ಷ್ಮಣ ಸವದಿ ಅವರಿಗೆ ಅಭಿಮಾನಿಗಳು ಮತ್ತು ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದರು.
ಶನಿವಾರ ಅಥಣಿ ಪಟ್ಟಣದ ಪ್ರವೇಶ ದ್ವಾರದಲ್ಲಿ ಸಾವಿರಾರು ಕಾರ್ಯಕರ್ತರು ಜಮಾಯಿಸಿದ್ದು ಸಚಿವರ ಕಾರು ಆಗಮಿಸುತ್ತಿದ್ದಂತೆ ಡೊಳ್ಳು, ಬ್ಯಾಂಡ್, ವಾದ್ಯಗಳೊಂದಿಗೆ ಲಕ್ಷ್ಮಣ ಸವದಿ ಜೈ ಕಾರ ಘೋಷಣೆಗಳು ಮೊಳಗಿದವು.
ಹೂವಿನಿಂದ ಸ್ವಾಗತ: ಅಭಿಮಾನಿಗಳು ಸಚಿವರ ಮೇಲೆ ಹೂವಿನ ಸುರಿಮಳೆ ಸುರಿಸಿದರು ಮಹಿಳೆಯರು ಆರತಿ ಬೆಳಗಿ, ಕುಂಕುಮ ಇಟ್ಟು ಬರಮಾಡಿಕೊಂಡರು. ವಿಶೇಷವಾಗಿ 21 ಅಡಿ ಉದ್ದದ ಬೃಹತ ಹೂವಿನ ಹಾರವನ್ನು ಸಚಿವರ ಕುತ್ತಿಗೆಗೆ ಹಾಕಿ ಗೌರವಿಸಲಾಯಿತು. ಈ ದೃಶ್ಯ ನೋಡಲು ಜನಸ್ತೋಮವೇ ನೆರೆದಿತ್ತು.
ಕಾರ್ಯಕರ್ತರಲ್ಲಿ ಸಂಭ್ರಮ
ಪ್ರಮಾಣವಚನದ ಬಳಿಕ ಮೊದಲ ಬಾರಿ ತಮ್ಮ ಕ್ಷೇತ್ರಕ್ಕೆ ಬಂದ ಸಚಿವರನ್ನು ನೋಡಲು ಅಥಣಿ ತಾಲೂಕಿನ ಮೂಲೆ ಮೂಲೆಗಳಿಂದ ಜನರು ಆಗಮಿಸಿದ್ದರು ನೂತನ ಸಚಿವರಿಗೆ ಶುಭಾಶಯ ಕೋರಿ ಸಿಹಿ ಹಂಚಲಾಯಿತು ಪಟಾಕಿ ಸಿಡಿಸಿ, ಶಾಲು ಹೊದಿಸಿ ಸಚಿವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮಣ ಸವದಿ ಅವರ ಅಭಿಮಾನಿ ವಿವೇಕ ನಾರಗೊಂಡ ಮಾತನಾಡಿ, ಲಕ್ಚ್ಮಣ ಸವದಿ ಸಾಹೇಬರು ಸಚಿವರಾಗಿರುವುದು ಅಥಣಿ ಕ್ಷೇತ್ರದ ಅದೃಷ್ಟ ಅವರ ನಾಯಕತ್ವದಲ್ಲಿ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಕಾಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಮುಖಂಡರಾದ ಶಿವರುದ್ರ ಗೂಳಪ್ಪನ್ನವರ,ರಾಮನಗೌಡ ಪಾಟೀಲ,ಆಶೀಫ ತಾಂಬೊಳಿ,ಪ್ರದೀಪ ನಂದಗಾಂವ ಸೇರಿದಂತೆ ತಾಲೂಕಿನ ಅಭಿಮಾನಿಗಳು ಭಾಗವಹಿಸಿದ್ದರು.

