ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪೌರ ಸೇವಾ ನೌಕರರು ಹಲವಾರು ಸಮಸ್ಯೆಗಳ ಮಧ್ಯಯೂ ಸರಕಾರದಿಂದ ನೀಡುವ ಸೌಲಭ್ಯಗಳು ಮುಟ್ಟದಿದ್ದರು ಕೂಡಾ ಇಡೀ ತಮ್ಮ ಜೀವನುದ್ದಕ್ಕೂ ಸೂರ್ಯ ಹುಟ್ಟವ ಮುನ್ನ ಬಿದಿಗಿಳಿದು ಜನರ ಸೇವೆಗಾಗಿ ನಿಂತವರು ಪೌರ ಕಾರ್ಮಿಕರು ಈ ದೇಶದ ಆಸ್ತಿಯಾಗಿದ್ದಾರೆ. ಇವರ ಸಮಸ್ಯೆಗಳ ಈಡೇರಿಕೆ ಸಿಎಂ ಅವರ ಜೊತೆಗೆ ಚರ್ಚಿಸಿ ಪರಿಹರಿಸವುದಾಗಿ ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.
ಸಿಂದಗಿ ನಗರದ ಗುಂದಗಿ ಪಂಕ್ಷನ್ ಹಾಲ್ನಲ್ಲಿ ನಡೆದ ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘ (ರಿ) ಬೆಂಗಳೂರು ವಿಜಯಪುರ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಮತ್ತು ಮಾನ್ಯ ರಾಜ್ಯಾಧ್ಯಕ್ಷರಿಗೆ ಸನ್ಮಾನ ಸಮಾರಂಭ ಹಾಗೂ ರಾಜ್ಯ ಪರಿಷತ್ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಪೌರ ಕಾರ್ಮಿಕರ ಮಗನಿಗೆ ಮಂತ್ರಿಸ್ಥಾನ ನೀಡಿದ ಕಾಂಗ್ರೆಸ್ ಸರಕಾರ ಪೌರ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂಧಿಸುತ್ತದೆ. ಪೌರ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆ, ಸೇವಾ ಭದ್ರತೆ ಹಾಗೂ ಮೂಲಭೂತ ಸೌಲಭ್ಯಗಳ ಕುರಿತು ಸಿಎಂ ಜೊತೆ ಚರ್ಚಿಸಿ ಸರಕಾರದ ಗಮನ ಸೆಲೆಯುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಮನಗೂಳಿ ಸಂಸ್ಥಾನ ಹಿರೇಮಠ ಅಭಿನವ ಸಂಗನಬಸವ ಶಿವಾಚಾರ್ಯರು ಆಶೀರ್ವಚನ ನೀಡಿ, ಪೌರ ಕಾರ್ಮಿಕರೆಂದರೆ ದೇವರು ಇದ್ದ ಹಾಗೆ. ಅವರನ್ನು ಕಸವನ್ನಾಗಿ ನೋಡದೇ ದೇವರನ್ನಾಗಿ ಕಾಣಬೇಕು. ಅವರಿಲ್ಲದಿದ್ದರೆ ಇಲ್ಲದಿದ್ದರೆ ಊರು ಅಶುತ್ವವಾಗುತ್ತಿತ್ತು. ಪೌರ ಕಾರ್ಮಿಕರೆ ಸ್ವಚ್ಚತೆ ಮಾಡಬೇಕೆನ್ನುವ ಭಾವನೆಯಿಂದ ಹೊರಬಂದು ಕಾರ್ಮಿಕರ ಜೊತೆ ಕೈಜೋಡಿಸಬೇಕು. ಅಲ್ಲದೆ ಪೌರ ಸೇವಾ ನೌಕರರು ಹಲವು ವರ್ಷಗಳಿಂದ ಹೊರ ಗುತ್ತಿಗೆಯಿಂದ ಕಾರ್ಯನಿರ್ವಹಿಸುತ್ತಿದೆ. ಅವರನ್ನು ಖಾಯಂಗೊಳಿಸುವ ಕಾರ್ಯ ಮಾಡಿ ಎಂದು ರಾಜ್ಯಧ್ಯಕ್ಷರಿಗೆ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರಾಜ್ಯಾಧ್ಯಕ್ಷೆ ಶ್ರೀಮತಿ ಶೈಲಾ ಕೆ.ಡಿ, ವಿಜಯಪುರ ಯೋಜನಾ ನಿರ್ದೇಶಕ ಬದರುದ್ದೀನ ಸೌದಾಗರ ಮಾತನಾಡಿದರು. ಜಿಲ್ಲಾಧ್ಯಕ್ಷ ಭೀಮಾಶಂಕರ ಕಾಂಬಳೆ, ಶ್ರೀಕಾಂತ ಪಡಶೆಟ್ಟಿ, ಪೌರಾಯುಕ್ತ ರವಿ ಶಿರಗುಪ್ಪಿ, ಮಲ್ಲನಗೌಡ ಬಿರಾದಾರ, ನಿಕಿಲೇಶ ಪಾಟೀಲ, ಶಿವಾನಂದ ಪೂಜಾರಿ, ವಸಂತ ಪವಾರ, ಪ್ರತಾಪ ಕೊಡಗೆ, ಪ್ರೀತಿ ಗಡೇದ, ಬಾಬಾಸಾಹೇಬ ತಾವಸೆ, ಎಚ್.ಎಸ್.ಚಿತ್ತರಗಿ, ವೀರೇಶ ಹಟ್ಟಿ, ರಘು ನಡುವಿನಮನಿ, ಪ್ರಶಾಂತ ಸಿ, ಅಪ್ರೋಜ ಅಹ್ಮದಪಟೇಲ, ಮಾಜಿ ಪುರಸಭೆ ಅಧ್ಯಕ್ಷ ಬಾಷಾಸಾಬ ತಾಂಬೊಳಿ, ಆರ್.ಎಸ್.ಶಿವಯೋಗಿಮಠ, ಪ್ರವೀಣ ಸೋನಾರ, ಶಮಶುದ್ದೀನ್ ಮೂಲಿಮನಿ, ಪರಶುರಾಮ ಬನಸೋಡೆ, ಸುರೇಶ ಅಮರಣ್ಣವರ, ಸುರೇಶ ಬಾಗೇವಾಡಿ, ಜಗದೀಶ ದೊಡಮನಿ, ಸಚೀನ ಮೋರಟಗಿ, ನಬೀರಸೂಲ ಉಸ್ತಾದ, ಲಾಲಸಾಬ ಮನಿಯಾರ, ಮಿನಾಕ್ಷಿ ಶಿರಗುಪ್ಪಿ, ರಮೇಶ ಬಳ್ಳಾರಿ, ಮಹೇಂದ್ರ ತಿಮ್ರಾಣಿ, ಚೇತನಕುಮಾರ, ರಾಘವೇಂದ್ರ ಭರಮಣ್ಣವರ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು. ಜಿಲ್ಲಾ ಜಾಗೃತಿದಳ ಸದಸ್ಯ ರಾಜಶೇಖರ ಕೂಚಬಾಳ ಸ್ವಾಗತಿಸಿದರು. ಶಿಕ್ಷಕ ಅಶೋಕ ಬಿರಾದಾರ ನಿರೂಪಿಸಿದರು. ಡಾ.ಪ್ರಕಾಶ ರಾಗರಂಜಿನಿ, ಭಾಗ್ಯ ಬಬಲೇಶ್ವರ ಹಾಗೂ ಸಂಗಡಿಗರು ಪ್ರಾರ್ಥಿಸಿದರು.

