ಬಬಲೇಶ್ವರದಲ್ಲಿ ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಯುವಕರು ವೃತ್ತಿಪರ ಕ್ರೀಡಾಪಟುಗಳಾಗಲು ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.
ಬುಧವಾರ ಬಬಲೇಶ್ವರದಲ್ಲಿ ದಿ. ಶ್ರೀ ಬಿ. ಎಂ. ಪಾಟೀಲ ಅವರ ಸ್ಮರಣಾರ್ಥ ಶಾಂತವೀರ ಕ್ರಿಕೆಟ್ ಕ್ಲಬ್ ಮತ್ತು ಶ್ರೀ ಸುನೀಲಗೌಡ ಪಾಟೀಲ ಅಭಿಮಾನಿ ಬಳಗದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಬಬಲೇಶ್ವರ ಪ್ರೀಮಿಯರ್ ಲೀಗ್ ಸೀಸನ್-2 ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರಧಾನ ಮಾಡಿ ಅವರು ಮಾತನಾಡಿದರು.
ಯುವಕರು ದೇಶದ ಅಮೂಲ್ಯ ಸಂಪತ್ತು. ಈ ಯುವಕರು ದೈಹಿಕ ಮತ್ತು ಮಾನಸಿಕವಾಗಿ ಸದೃಢರನ್ನಾಗಿ ಮಾಡಿ ಉತ್ತಮ ಆರೋಗ್ಯ ಹೊಂದಲು ಕ್ರೀಡೆಗಳು ಬಹುಪಯೋಗಿಯಾಗಿವೆ. ಹೀಗಾಗಿ ಬಬಲೇಶ್ವರ ಪ್ರೀಮಿಯರ್ ಲೀಗ್ ಕ್ರಿಕೆಟ್ ಸೇರಿದಂತೆ ನಾನಾ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಸ್ಪೋರ್ಟ್ಸ್ ಅಕ್ಯಾಡೆಮಿ ಮೂಲಕವೂ ಮಕ್ಕಳಿಗೆ ಬಾಲ್ಯದಿಂದಲೇ ಕ್ರಿಕೆಟ್, ಫುಟಬಾಲ, ಹಾಕಿ, ಬಾಸ್ಕೆಟ್ ಬಾಲ್, ಟೆನಿಕಾಯ್ಟ್, ಬ್ಯಾಡ್ಮಿಂಟನ್, ಟೆನಿಸ್ ಸೇರಿದಂತೆ ನಾನಾ ಕ್ರೀಡೆಗಳ ತರಬೇತಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿ. ಪಂ. ಮಾಜಿ ಅಧ್ಯಕ್ಷ ಎಸ್. ವಿ. ಪಾಟೀಲ, ಯುವಕರಿಗೆ ವ್ಯಸನಮುಕ್ತರಾಗಿ ಸದೃಢ ಆರೋಗ್ಯ ಹೊಂದಲು ಸುನೀಲಗೌಡ ಪಾಟೀಲ ಅವರು ಕಾರ್ಯೊನ್ಮುಖರಾಗಿದ್ದಾರೆ. ಯುವಕರ ಭವಿಷ್ಯದ ಬಗ್ಗೆ ಅಪಾರ ಕಾಳಜಿ ಹೊಂದಿರುವ ಅವರು, ಸಮಾಜಮುಖಿ ಚಟುವಟೆಗಳ ಕಡೆಗೆ ಯುವಕರನ್ನು ತೊಡಗಿಸುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರುದ್ರಯ್ಯ ನಂದಿಕೋಲಮಠ ಸ್ವಾಮೀಜಿ, ಮುಖಂಡರಾದ ಈರನಗೌಡ ಬಿರಾದಾರ, ಸಚೀನ ಕಲಾವಂತ, ಡಾ. ಮಹಾಂತೇಶ ಕನ್ನೂರ, ಆನಂದ ಬೂದಿಹಾಳ, ಪ್ರಕಾಶ ಜಾಲಗೇರಿ, ಚನ್ನಬಸಪ್ಪ ಕೋಟ್ಯಾಳ, ಸಿದರಾಯ ಆಡಿನ್, ಪರಶುರಾಮ ಪಡಗಾರ, ಆನಂದ ಬೂದಿಹಾಳ, ಹಣಮಂತ ಬಡಚಿ, ರಾಜಗುರು ಉಳ್ಳಾಗಡ್ಡಿ, ಸಂತೋಷ ರಾಂಪುರ, ರಾಜೇಶ ತಂಬಾಕೆ, ಸುನೀಲ ಸಿಂಗಾಡೆ, ಸಚೀನ ಉಳ್ೞಾಗಡ್ಡಿ, ಬಾಳೇಶ ಉಳ್ಳಾಗಡ್ಡಿ, ಅಕ್ಷಯ ಮೆಡೆಗಾತ, ಹೇಮಂತ ಭೋವಿ, ಸದ್ದಾಂ ಮುಜಾವರ, ನವೀನ ಇಮನದ, ಬಸವರಾಜ ಲೋಕುರಿ, ಶ್ರೀಶೈಲ, ಸಿಪಿಐ ರಮೇಶ ಅವಜಿ, ಪಿ.ಎಸ್.ಐ ಬಸವರಾಜ ಬಿ. ಮಳೆಪ್ಪನವರ, ನಾನಾ ಕ್ರಿಕೆಟ್ ತಂಡಗಳ ಆಟಗಾರರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಈ ಪಂದ್ಯಾವಳಿಯಲ್ಲಿ ಗೇಮ್ ಚೇಂಜರ್ ಜೈನಾಪುರ ಚಾಂಪಿಯನ್ ತಂಡವಾಗಿ ಹೊರ ಹೊಮ್ಮಿದರೆ, ಶಾಂತವೀರ ಕ್ರಿಕೆಟ್ ಕ್ಲಬ್ ಬಬಲೇಶ್ವರ ರೂ. ರನ್ನರ್ ಅಪ್ ಸ್ಥಾನ ಪಡೆಯಿತು. ಪಾಟೀಲ ಪ್ಯಾಂಥರ್ಸ್ ಹಳ್ಳಿ ತೃತೀಯ ಹಾಗೂ ಮಂಗಳೂರು ಟೈಟನ್ಸ್ ನಾಲ್ಕನೇ ಸ್ಥಾನ ಪಡೆದವು.

