ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಾವು ಆರೋಗ್ಯಕರ ಜೀವನವನ್ನು ನಡೆಸಲು ನಮ್ಮನ್ನು ಸದೃಢವಾಗಿ ಮತ್ತು ಸಕ್ರೀಯವಾಗಿಡಲು ನಾವು ಆರೋಗ್ಯಕರ ಆಹಾರ ಪದ್ದತಿಗಳನ್ನು ಅನುಸರಿಸಬೇಕು. ನಿಯಮಿತವಾಗಿ ದೈಹಿಕ ಕ್ರೀಡೆಗಳು ಅಥವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಆರ್ಟ ಆಫ್ ಗೀವಿಂಗ್ ಫೌಂಡೇಶನದ ಯುವ ಸಂಚಾಲಕಿ ಶಿಫಾ ಜಮಾದಾರ ಅಭಿಪ್ರಾಯಪಟ್ಟರು.
ನಗರದ ಡಾ. ಬಿ.ಅರ್. ಅಂಬೇಡ್ಕರ ಜಿಲ್ಲಾ ವಾಲಿಬಾಲ ಕ್ರೀಡಾಂಗಣದಲ್ಲಿ ಆರ್ಟ ಆಫ್ ಗೀವಿಂಗ್ ಫೌಂಡೇಶನದ ವತಿಯಿಂದ ‘ವಿಶ್ವ ವಾಲಿಬಾಲ ದಿನಾಚರಣೆ’ ಉದ್ಘಾಟಿಸಿ ಮಾತನಾಡುತ್ತಾ, ವಾಲಿಬಾಲ ಕೇವಲ ದೈಹಿಕ ಶಕ್ತಿಯ ಕ್ರೀಡೆಯಲ್ಲ ಬದಲಾಗಿ ಆರ್ಟ ಆಫ್ ಗೀವಿಂಗ್ದ ನಿಜವಾದ ಸಾರವನ್ನು ಸಾಕಾರಗೊಳಿಸುವ ಆಟ, ಪ್ರತಿಯೊಬ್ಬ ಆಟಗಾರನು ನಿಸ್ವಾರ್ಥನಾಗಿರಬೇಕು. ತನ್ನ ಪ್ರಯತ್ನಗಳು ಕೌಶಲ್ಯ ಮತ್ತು ಧೃಢಸಂಕಲ್ಪವನ್ನು ವೈಯಕ್ತಿಕ ಲಾಭಕ್ಕಾಗಿ ಅಲ್ಲ, ಬದಲಾಗಿ ಇಡೀ ತಂಡದ ಗೆಲವಿಗಾಗಿ ಆರ್ಪಿಸಬೇಕು. ಪ್ರತಿಪಾಸ, ಪ್ರತಿ ಸೇವ್ ಮತ್ತು ಪ್ರತಿಯೊಂದು ಪಾಯಿಂಟ್ ನಂಬಿಕೆ, ಸಂಹನ, ಸಹಯೋಗ ಶಿಸ್ತು ಮತ್ತು ತನ್ನಿಗಿಂತ ಮೊದಲು ಇತರರ ಬಗ್ಗೆ ಯೋಚಿಸಬೇಕು. ಎಲ್ಲರೂ ಬೆಳೆದು ಒಟ್ಟಿಗೆ ಗೆದ್ದಾಗ ನಿಜವಾದ ಯಶಸ್ಸನ್ನು ಸಾದಿಸಲಾಗುತ್ತದೆ ಎಂದು ಆಟಗಾರರಿಗೆ ನೆನಪಿಸುವ ಮೂಲಕ ವಾಲಿಬಾಲ ಈ ಮೌಲ್ಯಗಳನ್ನು ಸುಂದರವಾಗಿ ಪ್ರದರ್ಶಿಸುತ್ತದೆ ಎಂದರು.
ಜಿಲ್ಲಾ ವಾಲಿಬಾಲ ತರಬೇತಿದಾರ ರಫಿಕ ನದಾಫ ಮಾತನಾಡಿ, ಶಾಲೆಗಳಲ್ಲಿ ಮಕ್ಕಳ ವಿವಿಧ ಆಟಗಳು ಮತ್ತು ಕ್ರೀಡೆಗಳಲ್ಲಿ ಭಾಗವಹಿಸಲು ದೈಹಿಕ ಶಿಕ್ಷಣ ಸಮಯಗಳಿಗೆ ಅವರಿಗೆ ಯಾವುದೇ ಕ್ರೀಡೆಯ ಬಗ್ಗೆ ಉತ್ಸಾಹವಿದ್ದರೆ ನಾವು ಅವರನ್ನು ಪ್ರೋತ್ಸಾಹಿಸಬೇಕು ಮತ್ತು ಬೆಂಬಲಿಸಬೇಕು ದೈಹಿಕ ಆರೋಗ್ಯಕ್ಕೆ ವಾಲಿಬಾಲ್ ಉತ್ತಮ ಕ್ರೀಡೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಡಾ.ಜಾವಿದ ಜಮಾದಾರ ವಹಿಸಿದ್ದರು.
ತರಬೇತಿದಾರರಾದ ಶಂಕರ ಲಡಂಗಿ, ಶರಣು ಕೂಳಶಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಾಲಿಬಾಲ ಕ್ರೀಡೆಗೆ ಹೆಚ್ಚಿನ ಉತ್ತೇನ ನೀಡಲು ಆರ್ಟ ಆಫ್ ಗೀವಿಂಗ್ ಫೌಂಡೇಶನದ ಪರವಾಗಿ ಆಟಗಾರರಿಗೆ ವಾಲಿಬಾಲ ಕಿಟ್ಗಳನ್ನು ವಿತರಿಸಲಾಯಿತು.

