ಸಾರ್ಥಕ ಗೆಳೆಯರ ಬಳಗದಿಂದ ೧ ದಿನದ ಪ್ರಸಾದ ವ್ಯವಸ್ಥೆಗೆ ಸಜ್ಜು
ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ರಾಜ್ಯದ ಪ್ರಮುಖ ಮಠಗಳಲ್ಲಿ ಒಂದಾದ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠದ ಶ್ರೀ ಖಾಸ್ಗತೇಶ್ವರ ಜಾತ್ರೋತ್ಸವವು ಜುಲೈ ೧೯ ರಿಂದ ೨೯ ರವರೆಗೆ ವಿಜೃಂಭಣೆಯಿಂದ ಜರುಗಲಿದೆ.
ಈ ಜಾತ್ರೋತ್ಸವದಲ್ಲಿ ಒಂದು ದಿನದ ಪ್ರಸಾದ ವ್ಯವಸ್ಥೆ ಭಕ್ತಾದಿಗಳ ಕುರಿತು ಮಾಡಲು ಮುಂದಾಗಿದ್ದ ೧೯೮೬ ನೇ ಸಾಲಿನಲ್ಲಿ ಶ್ರೀ ಖಾಸ್ಗತೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದ ಈ ಸಾರ್ಥಕ ಗೆಳೆಯರ ಬಳಗ ರವಿವಾರರಂದು ಶ್ರೀಗಳಿಗೆ ಭೆಟ್ಟಿ ನೀಡಿ ತಾವು ಮಾಡಲಿರುವ ಎರಡನೇ ಸಲದ ಪ್ರಸಾದದ ವ್ಯವಸ್ಥೆ ಕುರಿತು ಶ್ರೀಗಳಿಗೆ ತಿಳಿಸಿದರು.
ಶ್ರೀ ಖಾಸ್ಗತೇಶ್ವರ ಜಾತ್ರೋತ್ಸವ ಕುರಿತು ಸಪ್ತಭಜನೆಯು ಜುಲೈ ೧೯ ರಂದು ಪ್ರಾರಂಭಗೊಳ್ಳಲಿದ್ದು ೨೬ ರಂದು ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ ಜರುಗಲಿದೆ ಅಂದೇ ಶ್ರೀ ಮಠದ ವತಿಯಿಂದ ಮಹಾಪ್ರಸಾದ ಜರುಗುವದೆಂದು ಶ್ರೀಗಳು ತಿಳಿಸಿದರು.
ಜುಲೈ ೨೭ ರಂದು ಆನೆ ಅಂಬಾರಿ ಮೇಲೆ ಶ್ರೀ ಖಾಸ್ಗತೇಶ್ವರರ ಹಾಗೂ ಶ್ರೀ ವಿರಕ್ತಶ್ರೀಗಳ ಉತ್ಸವ ಮೂರ್ತಿಗಳ ಭವ್ಯ ಮೆರವಣಿಗೆ ಜರುಗುವದಲ್ಲದೇ ಅಂದೇ ಸಾಯಂಕಾಲ ಶ್ರೀ ಖಾಸ್ಗತೇಶ್ವರರ ಮಹಾ ರಥೋತ್ಸವ ಜರುಗಲಿದೆ. ೨೯ ರಂದು ಕಳಸ ಇಳಿಸುವ ಕಾರ್ಯಕ್ರಮದೊಂದಿಗೆ ಜಾತ್ರೋತ್ಸವ ಮಂಗಲಗೊಳ್ಳಲಿದೆ ಎಂದು ಮಠದ ಶ್ರೀಗಳಾದ ಸಿದ್ದಲಿಂಗದೇವರು ಸಾರ್ಥಕ ಗೆಳೆಯರ ಬಳಗಕ್ಕೆ ಜುಲೈ ೨೫ ರಂದು ಪ್ರಸಾದ ವ್ಯವಸ್ಥೆ ಮಾಡಲು ಸೂಚಿಸಿದರು.
ಈ ಸಮಯದಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವರಿಯಾದ ವೇ|| ಮುರುಘೇಶ ವಿರಕ್ತಮಠ, ಸಾರ್ಥಕ ಗೆಳೆಯರ ಬಳಗದ ಸನೀಲ ಪಾಟೀಲ, ಪ್ರಕಾಶ ನಿಡಗುಂದಿ, ಕಾಶೀನಾಥ ಸಜ್ಜನ, ಮಹಾಂತೇಶ ಸರಶೆಟ್ಟಿ, ಅಶೋಕ ಪಾಟೀಲ, ಅಪ್ಪು ಗೋನಾಳ, ವಿಶ್ವನಾಥ ಬಡದಾಳಿ, ನಾರಾಯಣ ಸುಬೇದಾರ, ಶಶಿಕಾಂತ ದೇಶಪಾಂಡೆ, ರಮೇಶ ಸಾಲಂಕಿ, ರಾಮಸ್ವರೂಪ ಅಗರವಾಲ, ರಾಘವೇಂದ್ರ ಅಗಡಿ, ಕಿರಣ ನಿಡಗುಂದಿ, ಸತ್ಯನಾರಾಯಣ ತಾಳಪಲ್ಲೆ ಮೊದಲಾದವರು ಶ್ರೀಗಳ ಆಶೀರ್ವಾದ ಪಡೆದು ತಾವು ಮಾಡುವ ಪ್ರಸಾದದ ವ್ಯವಸ್ಥೆಗೆ ಅನುಮತಿ ಕೋರಿದರು.

