Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಶಿರಸಂಗಿ ಲಿಂಗರಾಜ ಮಹಾರಾಜರು ಎರಡನೇ ಬಸವಣ್ಣ

ಆಧ್ಯಾತ್ಮ ಭಾರತೀಯರ ಉಸಿರು :ಸಂಗಮೇಶ ಬಬಲೇಶ್ವರ

ಬಿಎಲ್ಡಿಇ ರಘುಕುಲ ಸಮನ್ವಯ ಶಾಲೆ ಶೈಕ್ಷಣಿಕ ಒಡಂಬಡಿಕೆಗೆ ಸಹಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಆಲಮೇಲದಲ್ಲಿ ನಡೆದ ವೈಭವದ ಕಾರ ಹುಣ್ಣಿಮೆ
(ರಾಜ್ಯ ) ಜಿಲ್ಲೆ

ಆಲಮೇಲದಲ್ಲಿ ನಡೆದ ವೈಭವದ ಕಾರ ಹುಣ್ಣಿಮೆ

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಆಲಮೇಲ: ಜಿಲ್ಲೆಯಲ್ಲಿಯೇ ಆಲಮೇಲ ಪಟ್ಟಣ ದಲ್ಲಿ ಸಾಂಸ್ಕೃತಿಕ ಜಾನಪದ ಕಲೆ ಜಾತ್ರೆ ಹಬ್ಬ ಹರಿದಿನಗಳನ್ನು ವಿಶಿಷ್ಟವಾಗಿ ಆಚರಿಸಲಾ ಗುತ್ತಿದ್ದು, ಕಾರಹುಣ್ಣಿಮೆಯನ್ನು ಸೋಮವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಕಾರಹುಣ್ಣಿಮೆಯಂದು ಪಟ್ಟಣದ ಪ್ರಮುಖ ಮನೆತನಗಳಾದ ದೇಶಮುಖ ಮತ್ತು ದೇಶಪಾಂಡೆ ಮನೆಗಳಿಂದ ಎತ್ತುಗಳ ಬಂಡಿ ಓಡಸಿ ಕರಿ ಹರಿಯಲಾಯಿತು. ಈ ಪದ್ಧತಿ ಹಿಂದಿನಿಂದಲು ನಡೆಸಿಕೊಂಡು ಬಂದಿರುವುದು ವಿಶೇಷವಾಗಿದೆ.
ಮೀಸಲು ಕರಿ: ಕಾರಹುಣ್ಣಿಮೆಯಂದು ಬೆಳ್ಳಗೆ ಹಳ್ಳಕ್ಕೆ ತೆರಳಿ ಎತ್ತು ಮತ್ತು ಬಂಡಿಯನ್ನು ತೊಳೆದು ಕೊಂಡು ಬೇವಿನ ತಪ್ಪಲಗಳಿಂದ ಶೃಂಗರಿಸಲಾಯಿತು. ನಂತರ ದೇಶಮುಖರ ಸಮ್ಮುಖದಲ್ಲಿ ಸಂಜೆ ಎತ್ತಿನ ಬಂಡಿಯ ಓಟ ಕರಿಹರೆಯುವ ಸಂಪ್ರದಾಯ ನಡೆಯಿತು. ಇಲ್ಲಿ ದೇಶಪಾಂಡೆ ಮತ್ತು ದೇಶಮುಖರ ಮನೆತನದ ಲಕ್ಷ್ಮೀ ಬಂಡೆಗಳ ಕರಿ ಹರಿಯುತ್ತವೆ. ಇದಕ್ಕೂ ಪೂರ್ವದಲ್ಲಿ ಕರಿ ಹರಿಯುವ ಓಟದಲ್ಲಿ ಪಾಲ್ಗೊಳ್ಳುವ ಚಿಟ್ಟ ಬಂಡಿ ಮತ್ತು ಎತ್ತುಗಳನ್ನು ಬಣ್ಣ ತೋರಣಗಳಿಂದ ಅಲಂಕಾರಿಸಲಾಗಿತ್ತು. ಎರಡು ಬಂಡಿಗಳನ್ನು ಸಕಲ ವಾದ್ಯ ವೈಭವಗಳೊಂದಿಗೆ ಗ್ರಾಮದ ದೇವರಾದ ಶ್ರೀಗಾಲಿಸಾಬ ದರ್ಗಾದ ಎದುರು ತರಲಾಯಿತು. ಬಳಿಕ ಎರಡೂ ಬಂಡಿಗಳು ದರ್ಗಾದ ಮುಂದೆ ಐದು ಸುತ್ತು ಓಡಿಸಿದ ನಂತರ ಮನೆಗೆ ತೆರಳುವಾಗ ದೇಶಮುಖರ ಲಕ್ಷ್ಮೀ ಬಂಡಿ ದಕ್ಷಿಣ ದಿಕ್ಕಿನಲ್ಲಿರುವ ದೇವರ ಅಗಸಿಗೆ ಬೇವಿನ ತೋರಣ ಹಿಡಿದು ಕರಿ ಹರಿಯಲಾಯಲಾಯಿತು.
ಸಾಂಪ್ರದಾಯದಂತೆ ದೇಶಮುಖರ ಬಂಡೆಗೆ ಶ್ರೀಮಂತ ಲಾವಟೆ ಅವರು ಎತ್ತುಗಳನ್ನು ಕಟ್ಟಿದರು. ಬಂಡಿ ಮೇಲೆ ಬಸವರಾಜ ಹೊಸಮನಿ, ದೇಶಪಾಂಡೆ ಬಂಡೆಗೆ ಮಹಿಬೂಬ ಸೌದಾಗರ ಅವರು ಎತ್ತುಗಳು ಕಟ್ಟಿದರು. ಬಂಡಿ ಮೇಲೆ ಈರಣ್ಣ ಗುರಕಾರ ನಿಂತಿದ್ದರು. ದೇಶಮುಖರ ಬಂಡೆಗೆ ಗ್ರಾಮದ ವಾಲಿಕಾರರು ಕೈಯಲ್ಲಿ ತಲವಾರು ಹಾಗೂ ಬಡಿಗಿಗಳನ್ನು ಹಿಡಿದು ಬಂಡೆಗೆ ಕಾವಲು ರಕ್ಷಣೆ ನೀಡಿದರು. ಸಂಜೆ ಎರಡು ಬಂಡೆಗಳು ಬರುವಕಿಂತ ಪೂರ್ವದಲ್ಲಿ 20 ಕ್ಕೂ ಹೆಚ್ಚು ಚಿಕ್ಕ ಬಂಡೆಗಳನ್ನು ಓಡಿಸಲಾಯಿತು.
ಈ ಬಂಡಿ ಸ್ಪರ್ಧೆ ಮತ್ತು ಕರಿಹರಿಯುವ ಸಂಭ್ರಮವನ್ನು ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ಸೇರಿ ವೀಕ್ಷಿಸಿದರು.

BIJAPUR NEWS patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಶಿರಸಂಗಿ ಲಿಂಗರಾಜ ಮಹಾರಾಜರು ಎರಡನೇ ಬಸವಣ್ಣ

ಆಧ್ಯಾತ್ಮ ಭಾರತೀಯರ ಉಸಿರು :ಸಂಗಮೇಶ ಬಬಲೇಶ್ವರ

ಬಿಎಲ್ಡಿಇ ರಘುಕುಲ ಸಮನ್ವಯ ಶಾಲೆ ಶೈಕ್ಷಣಿಕ ಒಡಂಬಡಿಕೆಗೆ ಸಹಿ

ಜುಲೈ ೧೯ ರಿಂದ ೨೯ ರವರೆಗೆ ಶ್ರೀ ಖಾಸ್ಗತೇಶ್ವರ ಜಾತ್ರೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಶಿರಸಂಗಿ ಲಿಂಗರಾಜ ಮಹಾರಾಜರು ಎರಡನೇ ಬಸವಣ್ಣ
    In (ರಾಜ್ಯ ) ಜಿಲ್ಲೆ
  • ಆಧ್ಯಾತ್ಮ ಭಾರತೀಯರ ಉಸಿರು :ಸಂಗಮೇಶ ಬಬಲೇಶ್ವರ
    In (ರಾಜ್ಯ ) ಜಿಲ್ಲೆ
  • ಬಿಎಲ್ಡಿಇ ರಘುಕುಲ ಸಮನ್ವಯ ಶಾಲೆ ಶೈಕ್ಷಣಿಕ ಒಡಂಬಡಿಕೆಗೆ ಸಹಿ
    In (ರಾಜ್ಯ ) ಜಿಲ್ಲೆ
  • ಜುಲೈ ೧೯ ರಿಂದ ೨೯ ರವರೆಗೆ ಶ್ರೀ ಖಾಸ್ಗತೇಶ್ವರ ಜಾತ್ರೆ
    In (ರಾಜ್ಯ ) ಜಿಲ್ಲೆ
  • ಆಲಮೇಲದಲ್ಲಿ ನಡೆದ ವೈಭವದ ಕಾರ ಹುಣ್ಣಿಮೆ
    In (ರಾಜ್ಯ ) ಜಿಲ್ಲೆ
  • ಶೀತಲೀಕರಣ ಕೇಂದ್ರ, ಉಗ್ರಾಣ ನಿರ್ಮಾಣಕ್ಕೆ ಶಾಸಕರ ಭರವಸೆ
    In (ರಾಜ್ಯ ) ಜಿಲ್ಲೆ
  • ಕವಿ, ಕಲಾವಿದರು ಸಂಸ್ಕ್ರತಿಯನ್ನು ಉಳಿಸಬೇಕು :ರಾಜುಗೌಡ
    In (ರಾಜ್ಯ ) ಜಿಲ್ಲೆ
  • ೫ ವರ್ಷದೊಳಗಿನ ಮಗುವಿಗೆ ಪೋಲಿಯೊ ಲಸಿಕೆ ಹಾಕಿಸಿ :ಅವಜಿ
    In (ರಾಜ್ಯ ) ಜಿಲ್ಲೆ
  • ಬಿಡುವೆನೆಂದರೂ ಬಿಡದಿ ಮಾಯೆ..
    In ವಿಶೇಷ ಲೇಖನ
  • ಮೂಢನಂಬಿಕೆ ಸಮಾಜದ ಮೌನ ಶತ್ರು
    In ವಿಶೇಷ ಲೇಖನ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.