Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 19, 2026

ಕ್ಯಾಂಪಸ್ ಸಂದರ್ಶನದಲ್ಲಿ ೯೪ ವಿದ್ಯಾರ್ಥಿಗಳು ಆಯ್ಕೆ

ಸರ್ಕಾರಿ ಶಾಲಾ ಮಕ್ಕಳಿಗೆ ರೂ.೧ ಲಕ್ಷ ವೆಚ್ಚದ ನೋಟಬುಕ್ ವಿತರಣೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸರ್ಕಾರಿ ಶಾಲಾ ಮಕ್ಕಳಿಗೆ ರೂ.೧ ಲಕ್ಷ ವೆಚ್ಚದ ನೋಟಬುಕ್ ವಿತರಣೆ
(ರಾಜ್ಯ ) ಜಿಲ್ಲೆ

ಸರ್ಕಾರಿ ಶಾಲಾ ಮಕ್ಕಳಿಗೆ ರೂ.೧ ಲಕ್ಷ ವೆಚ್ಚದ ನೋಟಬುಕ್ ವಿತರಣೆ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಬಬಲೇಶ್ವರ: ಹಿಂದುಳಿದ ಹಳ್ಳಿಯ ಸಾಮಾನ್ಯ ಕುಟುಂಬದ ಚೆನ್ನಬಸಪ್ಪ ಅಂಬಲಿ, ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ, ನಿರಂತರ ತೀವ್ರಗಾಮಿ ಚಟುವಟಿಕೆಗಳನ್ನು ನಡೆಸಿ, ಹಲವಾರು ಬಾರಿ ಜೈಲುವಾಸ ಅನುಭವಿಸಿ, ಸ್ವಾತಂತ್ರ್ಯಾನಂತರವೂ ಕಾಂಗ್ರೆಸ್ ನಲ್ಲಿ ಸಕ್ರಿಯರಾಗಿ ಕೆಪಿಸಿಸಿ ಅಧ್ಯಕ್ಷ ಚುನಾವಣೆಯಲ್ಲಿ ಧಿಮಂತ ನಾಯಕ ಎಸ್.ನಿಜಲಿಂಗಪ್ಪನವರನ್ನು ಸೋಲಿಸಿದ ಹೆಗ್ಗಳಿಕೆ ಹೊಂದಿದ್ದಾರೆ ಎಂದು ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ಹೇಳಿದರು.
ಬಬಲೇಶ್ವರ ತಾಲ್ಲೂಕಿನ ಅರ್ಜುಣಗಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಅಂಬಲಿ ಕುಟುಂಬದವರು ₹ 1 ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಅತೀ ಬರಗಾಲ ಬಿದ್ದು ಜನರಿಗೆ ಆಹಾರ ಕೊರತೆಯಾದಾಗ ತಮ್ಮ ಮನೆಯ ದವಸ-ಧಾನ್ಯಗಳಿಂದ ಜನರಿಗೆ ಅಂಬಲಿ ತಯಾರಿಸಿ ನೀಡಿದ್ದರಿಂದ ’ಬಣಜಿಗೇರ’ ಎಂಬ ಇವರ ಮನೆತನದ ಹೆಸರು ’ಅಂಬಲಿ’ಯಾಗಿ ಬದಲಾವಣೆಯಾಯಿತು. ಅದೇ ಕುಟುಂಬದ ಚೆನ್ನಬಸಪ್ಪ ಬಾಲಕನಾಗಿದ್ದಾಗಲೇ ಕಂದಾಯ ವಸೂಲಿಗೆ ಬಂದಿದ್ದ ಮಾಮಲೆದಾರರನ್ನು ತರಾಟೆಗೆ ತೆಗೆದುಕೊಂಡು “ಬರಗಾಲದಿಂದ ಜನ ಸಾಯುತ್ತಿದ್ದಾರೆ. ಇಂಥಹ ಕೆಟ್ಟ ಸ್ಥಿತಿಯಲ್ಲಿ ನಿಮಗೆ ಕಂದಾಯ ಕೊಡಬೇಕೆ?” ಎಂದಿದ್ದರು. ಅಲ್ಲಿಂದ ಆರಂಭಗೊಂಡ ಅವರ ಹೋರಾಟ ದೇಶಕ್ಕೆ ಸ್ವಾತಂತ್ರ್ಯ ಬರುವವರೆಗೂ ನಿರಂತರವಾಗಿತ್ತು. ಹೋರಾಟಗಾರರೊಂದಿಗೆ ಭೂಗತರಾಗಿ, ಮಿಂಚನಾಳ, ಜುಮನಾಳ, ಮುಳವಾಡ ರೈಲ್ವೆ ನಿಲ್ದಾಣಗಳನ್ನು ಧ್ವಂಸಗೊಳಿಸಿ, ಬ್ರಿಟಿಷರಿಗೆ ಬಿಜಾಪುರ ಜಿಲ್ಲೆಯಲ್ಲಿ ಉಗ್ರ ಪ್ರತಿರೋಧ ಒಡ್ಡಿದ್ದರು ಎಂದರು.
ಮುಂಬೈ ಪ್ರಾಂತ್ಯದಲ್ಲಿ ಬಾದಾಮಿ, ಬೀಳಗಿಯಿಂದ ನಂತರ ಮೈಸೂರು ರಾಜ್ಯದಲ್ಲಿ ತಿಕೋಟಾದಿಂದ ಶಾಸನಸಭೆಗೆ ಆಯ್ಕೆಯಾಗಿದ್ದ ಇವರು, ನಿಜಲಿಂಗಪ್ಪನವರ ಮಂತ್ರಿಮಂಡಲದಲ್ಲಿ ಸೇರ್ಪಡೆಯಾಗುವ ಮುಂಚೆಯೇ ಪಾರ್ಶ್ಚುವಾಯುಗೆ ತುತ್ತಾಗಿ, ಮಂತ್ರಿಯಾಗದೆ ಉಳಿದರು. ಇಂದು ನಾವು ಅನುಭವಿಸುವ ಸ್ವಾತಂತ್ರ್ಯ ಅಂಬಲಿ ಚೆನ್ನಬಸಪ್ಪನವರಂತಹ ನಿಸ್ವಾರ್ಥ ಹೋರಾಟಗಾರರ ಫಲ. ಇವರನ್ನು ನಾವು ಮರೆತಿದ್ದೇವೆ ಎಂದು ಹೇಳಿದರು.
ಕ್ಷೇತ್ರಶಿಕ್ಷಣಾಧಿಕಾರಿ ಬಸವರಾಜ ತಳವಾರ ಮಾತನಾಡಿ, ಅಂಬಲಿ ಕುಟುಂಬದ ಆದರ್ಶವನ್ನು ಈಗೀನ ತಲೆಮಾರಿನವರು ಮುಂದುವರೆಸಿದ್ದು, ಈ ವರ್ಷದಿಂದ ಇನ್ನು ಮುಂದೆ ಪ್ರತಿವರ್ಷವೂ ಒಂದು ಲಕ್ಷ ರೂಪಾಯಿಗಳನ್ನು ವ್ಯಯಿಸಿ, ತಮ್ಮ ಅರ್ಜುಣಗಿ ಗ್ರಾಮದ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲತೆಗಳನ್ನು ಕಲ್ಪಿಸುತ್ತಿರುವುದು ಮಾದರಿ. ಇದನ್ನು ಉಳಿದ ಹಳ್ಳಿಗಳಲ್ಲಿ ಬೇರೆಯವರು ಅನುಸರಿಸಬೇಕು ಎಂದರು.
ಪ್ರಾಚಾರ್ಯ ಎಲ್.ಪಿ.ಹುಣಶಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶೇಖರ ಅಂಬಲಿ, ಪ್ರೊ.ಸುರೇಶ ಅಂಬಲಿ, ರಮೇಶ ದೇಸಾಯಿ, ಮಲ್ಲು ಕೆಂಪವಾಡ, ಶೇಖಪ್ಪ ದೇಸಾಯಿ, ಚೆನ್ನಬಸಪ್ಪ ಅಂಬಲಿ, ರಫೀಕ ಸೋನಾರ, ಉಮಾಕಾಂತ ತಡಾಕಿ, ಸಿದ್ದರಾಯ ಜಂಗಮಶೆಟ್ಟಿ, ರಮೇಶ ತಂಬಾಕ್, ಮಲ್ಲೇಶಿ ಮೋಟಗಿ, ಎಸ್.ಎಸ್.ಮಠಪತಿ, ಸಿದರಾಯ ಅಥಣಿ ಮತ್ತಿತರರು ಗ್ರಾಮಸ್ಥರು ಉಪಸ್ಥಿತರಿದ್ದರು.
ನಿರ್ಮಲಾ ದೊಡಮನಿ ಹಾಗೂ ವನಜಾಕ್ಷಿ ಬಡಿಗೇರ ನಿರೂಪಿಸಿದರು, ರಮೇಶ ಕುಂಬಾರ ಸ್ವಾಗತಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 19, 2026

ಕ್ಯಾಂಪಸ್ ಸಂದರ್ಶನದಲ್ಲಿ ೯೪ ವಿದ್ಯಾರ್ಥಿಗಳು ಆಯ್ಕೆ

ವಿದ್ಯಾರ್ಥಿಗಳಲ್ಲಿ ಸಂಶೋಧನಾ ಆಸಕ್ತಿ & ಅಭಿರುಚಿ ಬೆಳೆಸಿ

ರುದ್ರಪ್ಪ ಲಮಾಣಿಗೆ ಸಚಿವ ಸ್ಥಾನ ನೀಡಲು ಬಂಜಾರಾ ಸಮಾಜ ಆಗ್ರಹ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 19, 2026
    In ದಿನಪತ್ರಿಕೆ
  • ಕ್ಯಾಂಪಸ್ ಸಂದರ್ಶನದಲ್ಲಿ ೯೪ ವಿದ್ಯಾರ್ಥಿಗಳು ಆಯ್ಕೆ
    In (ರಾಜ್ಯ ) ಜಿಲ್ಲೆ
  • ಸರ್ಕಾರಿ ಶಾಲಾ ಮಕ್ಕಳಿಗೆ ರೂ.೧ ಲಕ್ಷ ವೆಚ್ಚದ ನೋಟಬುಕ್ ವಿತರಣೆ
    In (ರಾಜ್ಯ ) ಜಿಲ್ಲೆ
  • ವಿದ್ಯಾರ್ಥಿಗಳಲ್ಲಿ ಸಂಶೋಧನಾ ಆಸಕ್ತಿ & ಅಭಿರುಚಿ ಬೆಳೆಸಿ
    In (ರಾಜ್ಯ ) ಜಿಲ್ಲೆ
  • ರುದ್ರಪ್ಪ ಲಮಾಣಿಗೆ ಸಚಿವ ಸ್ಥಾನ ನೀಡಲು ಬಂಜಾರಾ ಸಮಾಜ ಆಗ್ರಹ
    In (ರಾಜ್ಯ ) ಜಿಲ್ಲೆ
  • 700 ಎಕರೆ ಕೃಷಿ ಜಮೀನಿಗೆ ಸರ್ಕಾರಿ ಬೀಳು ನಮೂದು :ರೈತರು ಅಳಲು
    In (ರಾಜ್ಯ ) ಜಿಲ್ಲೆ
  • ಜೂನ್ 20-21ರಂದು ಪತಂಜಲಿ ಯೋಗ ತರಬೇತಿ
    In (ರಾಜ್ಯ ) ಜಿಲ್ಲೆ
  • ಈರುಳ್ಳಿ ಖರೀದಿ-ಮಾರಾಟಕ್ಕೆ ಅಂತರಾಷ್ಟ್ರೀಯ ಮಾರುಕಟ್ಟೆ
    In (ರಾಜ್ಯ ) ಜಿಲ್ಲೆ
  • ಅತ್ಯವಶ್ಯಕತೆನುಸಾರ ಬೋರ್ ವೆಲ್ ಕೊರೆಯಿಸಿ
    In (ರಾಜ್ಯ ) ಜಿಲ್ಲೆ
  • ಸರ್ಕಾರಿ ಐ.ಟಿ.ಐ ಸಂಸ್ಥೆಯಲ್ಲಿ ಪ್ರವೇಶಾತಿ :ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.