ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಉನ್ನತ ಶಿಕ್ಷಣ ಗುರಿಯು ಕೇವಲ ವಿದ್ಯಾರ್ಥಿಗಳು ವಿಷಯ ಜ್ಞಾನ, ಅಂಕ ಮತ್ತು ಪದವಿ ಪಡೆಯುವದಕ್ಕಾಗಿ ಸಿಮೀತಗೊಳ್ಳಬಾರದು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳಲ್ಲಿ ವಿಷಯ ಜ್ಞಾನದೊಂದಿಗೆ ಕಲಿತ ವಿಷಯಗಳ ಪ್ರಾಯೋಗಿಕ ಅಳವಡಿಕೆ, ಸೃಜನಾತ್ಮಕತೆ ಮತ್ತು ಕ್ರಿಯಾಶೀಲತೆಯೊಂದಿಗೆ ಆಯ್ಕೆ ಮಾಡಿಕೊಂಡ ಯಾವುದೇ ವಿಷಯದ ಮೇಲೆ ಸಂಶೋಧನೆ ಕೈಗೊಳ್ಳಬೇಕು. ವಿದ್ಯಾರ್ಥಿದೆಸೆಯಲ್ಲಿಯೇ ಸಂಶೋಧನೆಯಲ್ಲಿ ಆಸಕ್ತಿ, ಅಭಿರುಚಿ ಮತ್ತು ಹೊಸ ವಿಷಯಗಳತ್ತ ಬೆಳಕು ಚೆಲ್ಲುವಂತೆ ಪ್ರೇರೇಪಿಸಬೆಕಾಗಿರುವುದು ಇಂದಿನ ಅಗತ್ಯತೆಯಾಗಿದೆ ಎಂದು ವಿಜಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಎಂ.ಎಸ್.ಖೊದ್ನಾಪೂರ ಅವರು ಅಭಿಪ್ರಾಯಪಟ್ಟರು.
ಅವರು ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಎ.ಎಸ್.ಪಾಟೀಲ ಸ್ವಾಯತ್ತ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ “ಪ್ರಾಜೆಕ್ಟ್ ರಿಪೋರ್ಟ ಮೌಖಿಕ ಸಂದರ್ಶನ” ವಿದ್ಯಾರ್ಥಿಗಳ ಸಂಶೋಧನಾ ಕೌಶಲ್ಯಗಳನ್ನು ಮೌಲ್ಯೀಕರಿಸಿ ಮಾತನಾಡುತ್ತಿದ್ದರು.
ಇಂದಿನ ಜಗತ್ತು ಹೊಸತನ, ನಾವಿನ್ಯತೆ, ಸಂಶೋಧನೆ ಮತ್ತು ಅನ್ವೇಷಣೆಗೆ ಆಹ್ವಾನ ಮತ್ತು ಅವಕಾಶಗಳನ್ನು ನೀಡುತ್ತಿದೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಸುಪ್ತ ಪ್ರತಿಭೆ, ಜ್ಞಾನ, ಕ್ರೀಯಾಶೀಲತೆ ಮತ್ತು ಸೃಜನಾತ್ಮಕತೆ, ವೈಚಾರಿಕತೆ, ಚಿಂತನಾಶಕ್ತಿ, ವಿಷಯ ಮಂಡನಾ ಕಲೆ, ಕೌಶಲ್ಯಗಳನ್ನು ಹೊರಹಾಕಲು ಹಾಗೂ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳ್ಳಲು ಉತ್ತಮ ವೇದಿಕೆಯನ್ನು ಕಲ್ಪಿಸಬೇಕು. ಸಂಶೋಧನೆಯು ಗುಣಾತ್ಮಕವಾಗಿದ್ದು, ಅದು ಸದಾ ಸಮುದಾಯಕ್ಕೆ ಏನನ್ನಾದರೂ ಕೊಡುಗೆ ನೀಡುವಂತಿರಬೇಕು. ಸಂಶೋಧನೆಯಿಂದ ಹೊರಹೊಮ್ಮುವ ಫಲಿತಾಂಶವು ಸಮಾಜಕ್ಕೆ ಪ್ರಯೋಜನಕಾರಿ ಮತ್ತು ಸರ್ಕಾರ, ಸಂಘ-ಸAಸ್ಥೆ, ವಾಣಿಜ್ಯ-ವ್ಯಾಪಾರ ಮತ್ತು ಇನ್ನಿತರ ಸಂಸ್ಥೆಗಳಿಗೆ ಭವಿಷ್ಯಕ್ಕೆ ದಾರಿದೀಪವಾಗಿರಬೇಕು. ಅಂದಾಗ ಕೈಗೊಂಡ ಸಂಶೋಧನೆಯ ಉದ್ಧೇಶ ಮತ್ತು ಗುರಿಯು ನಿಜಕ್ಕೂ ಅರ್ಥಪೂರ್ಣವಾಗುತ್ತದೆ. ಪ್ರತಿ ವಿದ್ಯಾರ್ಥಿಯು ತಾವು ಸಂಶೋಧನೆಗಾಗಿ ಆಯ್ದುಕೊಂಡ ವಿಷಯದ ಮೇಲೆ ನಿರ್ಧಿಷ್ಟ ಉದ್ದೇಶಗಳನ್ನು ರೂಪಿಸಿಕೊಂಡು ಅಧ್ಯಯನ ಮಾಡುತ್ತಾ, ಹಿಂದಿನ ಸಂಶೋಧನೆ ಬಗ್ಗೆ ಪರಿಶೀಲಿಸಿ, ಸಮೀಕ್ಷೆ ಕೈಗೊಂಡು ಅಗತ್ಯ ಪ್ರಾಥಮಿಕ ಮತ್ತು ಅನುಷಂಗಿಕ ಮೂಲಗಳಿಂದ ಮಾಹಿತಿ ಸಂಗ್ರಹಣೆ, ದತ್ತಾಂಶ ವಿಶ್ಲೇಷಣೆ ಮತ್ತು ಸಂಖ್ಯಾಶಾಸ್ತ್ರದ ಪದ್ಧತಿಗಳ ಅಳವಡಿಸಿಕೊಂಡು ಸಂಶೋಧನೆಯನ್ನು ಪರಿಮಾಣಾತ್ಮಕ ಮತ್ತು ಗುಣಾತ್ಮಕವನ್ನಾಗಿ ಕೈಗೊಂಡು ಸಾಮಾಜಿಕ ಕೊಡುಗೆ ನೀಡವಂತಾಗಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಬಿ.ಕಮತಿ, ಪರೀಕ್ಷಾ ನಿಯಂತ್ರಣಾಧಿ ಡಾ. ಭಾರತಿ ಮಠ, ವಾಣಿಜ್ಯಶಾಸ್ತç ಪ್ರಾಧ್ಯಾಪಕ ಪ್ರೊ. ವಿಜಯ ತಳವಾರ ಇನ್ನಿತರರು ಸಹ ಉಪಸ್ಥಿತರಿದ್ದರು.
ಮೌಖಿಕ ಸಂದರ್ಶನದಲ್ಲಿ ಬಿ.ಕಾಂ ಅಂತಿಮ ವರ್ಷದ ಎಲ್ಲ ವಿದ್ಯಾರ್ಥಿಗಳ ಕೈಗೊಂಡ ಪ್ರಾಜೆಕ್ಟ ರಿಪೋರ್ಟ ಮೌಖಿಕ ಸಂದರ್ಶನದಲ್ಲಿ ಉತ್ತಮ ರೀತಿಯಿಂದ ವಿಷಯ ಮಂಡನೆ ಮತ್ತು ಸಂವಹನ ಕಲೆಯನ್ನು ಅಭಿವ್ಯಕ್ತಪಡಿಸಿದರು.

