Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 19, 2026

ಕ್ಯಾಂಪಸ್ ಸಂದರ್ಶನದಲ್ಲಿ ೯೪ ವಿದ್ಯಾರ್ಥಿಗಳು ಆಯ್ಕೆ

ಸರ್ಕಾರಿ ಶಾಲಾ ಮಕ್ಕಳಿಗೆ ರೂ.೧ ಲಕ್ಷ ವೆಚ್ಚದ ನೋಟಬುಕ್ ವಿತರಣೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»700 ಎಕರೆ ಕೃಷಿ ಜಮೀನಿಗೆ ಸರ್ಕಾರಿ ಬೀಳು ನಮೂದು :ರೈತರು ಅಳಲು
(ರಾಜ್ಯ ) ಜಿಲ್ಲೆ

700 ಎಕರೆ ಕೃಷಿ ಜಮೀನಿಗೆ ಸರ್ಕಾರಿ ಬೀಳು ನಮೂದು :ರೈತರು ಅಳಲು

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಕೇಳುತ್ತಿಲ್ಲ ಚಿಕ್ಕನಂದಿ, ಹತ್ವಾಳು ರೈತರ ಗೋಳು | ಅನಿರ್ದಿಷ್ಟಾವಧಿ ಧರಣಿಗೆ ನಿರ್ಧಾರ

ಉದಯರಶ್ಮಿ ದಿನಪತ್ರಿಕೆ

ಎಚ್ ಡಿ ಕೋಟೆ :ಕಳೆದ 40-50 ವರ್ಷಗಳಿಂದಲೂ ಅದೇ ಭೂಮಿಯಲ್ಲಿ ವ್ಯವಸಾಯ ಮಾಡಿಕೊಂಡು ಬರುತ್ತಿದ್ದೇವೆ. ಆರ್ ಟಿ ಸಿ ಕೂಡ ನಮ್ಮ ಹೆಸರಿನಲ್ಲಿ ಇದೆ. ಆದರೆ ಪಹಣಿಯಲ್ಲಿ ಸರಕಾರಿ ಬೀಳು ಭೂಮಿ ಎಂದು ನಮೂದಾಗಿದೆ. ಇದರಿಂದ ನಮಗೆ ಯಾವುದೇ ಸರಕಾರಿ ಸೌಲಭ್ಯಗಳು ಸಿಗುತ್ತಿಲ್ಲ. ಬ್ಯಾಂಕ್ ಗಳಿಂದ ಸಾಲ ಪಡೆಯಲು ಆಗುತ್ತಿಲ್ಲ. ನಮ್ಮ ಹೆಸರಿಗೆ ಭೂಮಿ ಇದ್ದರೂ ಇಲ್ಲದಂತಾಗಿದೆ. ಖಾತೆಯಲ್ಲಿ ಸರಕಾರಿ ಬೀಳು ತೆಗೆದುಹಾಕಿ ಬದಲಾವಣೆ ಮಾಡಿ ಕೊಡುವಂತೆ ಸಂಬಂಧಪಟ್ಟ ಇಲಾಖೆ, ಸ್ಥಳೀಯ ಶಾಸಕರು, ಅಧಿಕಾರಿಗಳಿಗೆ ಮನವಿ ಮಾಡುತ್ತಾ ಬಂದಿದ್ದರೂ ಏನು ಪ್ರಯೋಜನವಾಗಿಲ್ಲ ಎಂದು ತಾಲೂಕಿನ ಚಿಕ್ಕನಂದಿ, ಹತ್ವಾಳು ರೈತರು ಅಳಲು ತೋಡಿಕೊಳ್ಳುತ್ತಾರೆ.
ತಾಲೂಕಿನ ಹಂಪಾಪುರ ಹೋಬಳಿ ವ್ಯಾಪ್ತಿಗೆ ಸೇರಿದ ಚಿಕ್ಕನಂದಿ, ಹತ್ವಾಳು ಗ್ರಾಮದ ವ್ಯಾಪ್ತಿಯಲ್ಲಿ ಸುಮಾರು 700 ಎಕರೆ ಕೃಷಿ ಜಮೀನು ಸಕಾರಣವಿಲ್ಲದೆ ಸರ್ಕಾರಿ ಬೀಳು ಎಂದು ಸಮುದಾಗಿರುವುದರಿಂದ ಉಂಟಾಗಿರುವ ಗೋಳು ರೈತರ ನೆಮ್ಮದಿ ಹಾಳು ಮಾಡಿದೆ. 1991ರಲ್ಲಿ ಅಂದಿನ ಸರ್ಕಾರ, ಕಂದಾಯ ಬಾಕಿಯಿಂದಾದ ಹಾಗೂ ಬೀಳು ಬಿದ್ದ ಜಮೀನುಗಳನ್ನು ಸ್ವಾಧೀನಾನುಭವದಲ್ಲಿರುವ ಹಾಗೂ ಅವರ ವಂಶಸ್ಥರ ಹೆಸರಿಗೆ ರೆಸ್ಟೋರ್ ಮಾಡಿಕೊಡುವಂತೆ ಆದೇಶ ಹೊರಡಿಸಿತ್ತು. ಆಗಿದ್ದ ತಹಸೀಲ್ದಾರ್, ಕಂದಾಯಾಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಕಾರ್ಯರೂಪಕ್ಕೆ ಬರಲಿಲ್ಲ. 2004ರಲ್ಲಿ ಸರ್ಕಾರ 6 ತಿಂಗಳ ಕಾಲಾವಕಾಶ ನೀಡಿ ಮತ್ತೆ ರೆಸ್ಟೋರ್‌ಗೆ ಆದೇಶಿಸಿತ್ತು . ಆದರೆ ಆಗಿನ ತಹಸೀಲ್ದಾರ್ ಕೂಡ ಕಾರ್ಯರೂಪಕ್ಕೆ ತರುವ ಕೆಲಸ ಮಾಡಲಿಲ್ಲ. ನಂತರದ ದಿನಗಳಲ್ಲಿ ಈ ಕ್ಷೇತ್ರದ ಯಾವ ಚುನಾಯಿತ ಸಂಸದರಾಗಲೀ, ಶಾಸಕರಾಲೀ ಈ ರೈತರ ನೆರವಿಗೆ ಬರಲಿಲ್ಲ. ಸರ್ಕಾರದ ಗಮನ ಸೆಳೆಯಲಿಲ್ಲ. ಹೀಗಾಗಿ ಅವರ ಹೆಸರಿನಲ್ಲಿ ಖಾತೆ ಇದ್ದರೂ ಸರ್ಕಾರಿ ಬೀಳು ಎಂದು ನಮೂದಾಗಿರುವುದರಿಂದ, ನಮಗೆ ಸರ್ಕಾರದಿಂದ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ ಅಂತಾರೆ ಹತ್ವಾಳು ರೈತರು.
ಈ ಸಂಬಂಧ ಕರ್ನಾಟಕ ಭೂ ಹಕ್ಕು ವೇದಿಕೆ ರೈತರ ಜೊತೆಗಿನ ಸಂವಾದಕ್ಕೆ ವೇದಿಕೆ ಕಲ್ಪಿಸಿಕೊಟ್ಟಿತ್ತು. ಈ ವೇಳೆ ರೈತರು ತಮ್ಮ ಅಳಲು ಬಿಚ್ಚಿಟ್ಟರು. ಸರ್ಕಾರಿ ಬೀಳು ತೆಗೆದುಹಾಕಿ ಕೊಡುವಂತೆ ತಹಸೀಲ್ದಾರ್, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಗೆ ಮನವಿ ಪತ್ರ ಕೊಟ್ಟಿದ್ದೇವೆ. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಶಾಸಕ ಅನಿಲ್ ಚಿಕ್ಕಮಾದು ಅವರ ಗಮನಕ್ಕೂ ಕೂಡ ತಂದಿದ್ದೇವೆ. ಆದರೆ ಅವರು ಕೂಡ ಕ್ರಮ ಕೈಗೊಂಡಿಲ್ಲ ಎಂದು ರೈತ ಸುಬ್ಬಣ್ಣ ಆರೋಪ ಮಾಡುತ್ತಾರೆ.
ಈ ವೇಳೆ ರಾಮಾಚಾರಿ, ಸಣ್ಣಸ್ವಾಮಿ, ಸುಬ್ಬಣ್ಣ, ಶಿವಕುಮಾರ್, ರಾಜಣ್ಣ, ಚಿಕ್ಕಶೆಟ್ಟಿ, ಶಿವಪ್ಪ ಸೇರಿದಂತೆ ಚಿಕ್ಕನಂದಿ, ಹತ್ವಾಳು ಗ್ರಾಮಸ್ಥರು ಉಪಸ್ಥಿತರಿದ್ದರು.

“ತಹಸೀಲ್ದಾರ್ ಕಳಿಸಿದ ವರದಿ ಜಿಲ್ಲಾಧಿಕಾರಿ ಕಚೇರಿಯಲ್ಲೋ ಹುಣಸೂರಿನ ಉಪವಿಭಾಗಾಧಿಕಾರಿ ಕಚೇರಿಯಲ್ಲೋ ಯಾವ ಮೂಲೆಯಲ್ಲಿ ಬಿದ್ದು ನಿದ್ರಿಸುತ್ತಿವೆಯೋ ಗೊತ್ತಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳಿಸಿದ್ದಾರೋ ಇಲ್ಲವೋ ಇದಕ್ಕೂ ಖಚಿತ ಮಾಹಿತಿ ಲಭ್ಯವಿಲ್ಲ. ತಾಲೂಕು ಕಚೇರಿಯಲ್ಲಿ ವಿಚಾರಿಸಿದರೆ ಒಂದೊಂದು ಹೇಳಿಕೆ. ಡಿಸಿಗೆ ಕಳಿಸಿದ್ದೇವೆ ಹುಣಸೂರು ಎಸಿಗೆ ಕಳಿಸಿದ್ದೇವೆ ಅಂತ ಸಬೂಬು ಹೇಳುತ್ತಾರೆ. ನಮಗೂ ತಾಳ್ಮೆ ಇಲ್ಲದಂತಾಗಿದೆ. ಹೀಗಾಗಿ ಶೀಘ್ರದಲ್ಲೇ ತಾಲೂಕು ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಮಾಡುತ್ತೇವೆ.”

– ಸಣ್ಣಸ್ವಾಮಿ, ಹತ್ವಾಳು ರೈತರು

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 19, 2026

ಕ್ಯಾಂಪಸ್ ಸಂದರ್ಶನದಲ್ಲಿ ೯೪ ವಿದ್ಯಾರ್ಥಿಗಳು ಆಯ್ಕೆ

ಸರ್ಕಾರಿ ಶಾಲಾ ಮಕ್ಕಳಿಗೆ ರೂ.೧ ಲಕ್ಷ ವೆಚ್ಚದ ನೋಟಬುಕ್ ವಿತರಣೆ

ವಿದ್ಯಾರ್ಥಿಗಳಲ್ಲಿ ಸಂಶೋಧನಾ ಆಸಕ್ತಿ & ಅಭಿರುಚಿ ಬೆಳೆಸಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 19, 2026
    In ದಿನಪತ್ರಿಕೆ
  • ಕ್ಯಾಂಪಸ್ ಸಂದರ್ಶನದಲ್ಲಿ ೯೪ ವಿದ್ಯಾರ್ಥಿಗಳು ಆಯ್ಕೆ
    In (ರಾಜ್ಯ ) ಜಿಲ್ಲೆ
  • ಸರ್ಕಾರಿ ಶಾಲಾ ಮಕ್ಕಳಿಗೆ ರೂ.೧ ಲಕ್ಷ ವೆಚ್ಚದ ನೋಟಬುಕ್ ವಿತರಣೆ
    In (ರಾಜ್ಯ ) ಜಿಲ್ಲೆ
  • ವಿದ್ಯಾರ್ಥಿಗಳಲ್ಲಿ ಸಂಶೋಧನಾ ಆಸಕ್ತಿ & ಅಭಿರುಚಿ ಬೆಳೆಸಿ
    In (ರಾಜ್ಯ ) ಜಿಲ್ಲೆ
  • ರುದ್ರಪ್ಪ ಲಮಾಣಿಗೆ ಸಚಿವ ಸ್ಥಾನ ನೀಡಲು ಬಂಜಾರಾ ಸಮಾಜ ಆಗ್ರಹ
    In (ರಾಜ್ಯ ) ಜಿಲ್ಲೆ
  • 700 ಎಕರೆ ಕೃಷಿ ಜಮೀನಿಗೆ ಸರ್ಕಾರಿ ಬೀಳು ನಮೂದು :ರೈತರು ಅಳಲು
    In (ರಾಜ್ಯ ) ಜಿಲ್ಲೆ
  • ಜೂನ್ 20-21ರಂದು ಪತಂಜಲಿ ಯೋಗ ತರಬೇತಿ
    In (ರಾಜ್ಯ ) ಜಿಲ್ಲೆ
  • ಈರುಳ್ಳಿ ಖರೀದಿ-ಮಾರಾಟಕ್ಕೆ ಅಂತರಾಷ್ಟ್ರೀಯ ಮಾರುಕಟ್ಟೆ
    In (ರಾಜ್ಯ ) ಜಿಲ್ಲೆ
  • ಅತ್ಯವಶ್ಯಕತೆನುಸಾರ ಬೋರ್ ವೆಲ್ ಕೊರೆಯಿಸಿ
    In (ರಾಜ್ಯ ) ಜಿಲ್ಲೆ
  • ಸರ್ಕಾರಿ ಐ.ಟಿ.ಐ ಸಂಸ್ಥೆಯಲ್ಲಿ ಪ್ರವೇಶಾತಿ :ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.