ಮತಗಟ್ಟೆ ಪರಿಷ್ಕರಣೆ (ಎಸ್ಐಆರ್) ಬಿ.ಎಲ್.ಎಗಳ ವಿಶೇಷ ಸಭೆಯಲ್ಲಿ ಸಂಸದ ರಮೇಶ ಜಿಗಜಿಣಗಿ ಕರೆ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪ್ರಧಾನಿ ಮೋದಿಯವರ ೧೨ ವರ್ಷಗಳ ಸಾಧನೆಯನ್ನು ಜನಸಾಮಾನ್ಯರಿಗೆ ತಿಳಿಸುವುದರ ಜೊತೆಗೆ ಮತಗಟ್ಟೆ ಪರಿಷ್ಕರಣೆ ಕುರಿತಂತೆ ಬಿ.ಎಲ್.ಎ ಗಳು ವಿಶೇಷ ಜವಾಬ್ದಾರಿ ವಹಿಸುವುದು ಅಗತ್ಯವಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಪಟ್ಟಣದ ಮಲ್ಲಯ್ಯ ದೇವಸ್ಥಾನದ ಸಭಾಭವನದಲ್ಲಿ ಶನಿವಾರ ಜರುಗಿದ ಮತಗಟ್ಟೆ ಪರಿಷ್ಕರಣೆ (ಎಸ್ಐಆರ್) ಬಿ.ಎಲ್.ಎಗಳ ವಿಶೇಷಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಜಗತ್ತಿನ ಎಲ್ಲ ದೇಶಗಳ ನಾಯಕರು ಭಾರತದ ಕುರಿತು ಉತ್ತಮ ಅಭಿಪ್ರಾಯ ವ್ಯಕ್ತಪಡಿಸುವಲ್ಲಿ ಪ್ರಧಾನಿ ಮೋದಿ ಅವರು ಕೈಗೊಂಡ ಅಭಿವೃದ್ಧಿಪರ ವಿಚಾರ ಹಾಗೂ ನಿರ್ಧಾರಗಳೇ ಕಾರಣ. ದೇಶ ಹಾಗೂ ದೇಶದ ಜನತೆ ಮುಖ್ಯ ಎನ್ನುವ ಮೂಲಕ ಅವರ ಧೃಡ ಹಾಗೂ ಅಚಲ ನಿರ್ಧಾರಗಳು ಇಂದು ನಾವು ಶಾಂತಿ, ಸಹನೆಯಿಂದ ಜೀವಿಸಲು ಕಾರಣವಾಗಿದೆ ಎಂದರು.
ಮಾಜಿಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಮಾತನಾಡಿ, ಜಗಮೆಚ್ಚುವ ರೀತಿಯಲ್ಲಿ ದೇಶದ ಆಡಳಿತವನ್ನು ನಿರ್ವಹಿಸಿ ಬಲಾಢ್ಯ ಭಾರತದ ಕನಸು ಸಾಕಾರಗೊಳಿಸಲು ಪ್ರಯತ್ನಿಸುತ್ತಿರುವ ನಮ್ಮ ಹೆಮ್ಮೆಯ ಪ್ರಧಾನಿ ಅವರ ಸಾಧನೆಗಳನ್ನು ಮನೆಮನೆಗೆ ತಲುಪಿಸೋಣ ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಮೇಶ ಮಸಬಿನಾಳ ಮಾತನಾಡಿ, ಪ್ರಧಾನಿ ಮೋದಿ ಆಡಳಿತದ ಸಾಧನೆಗಳ ಕುರಿತು ವಿವರಣೆ ನೀಡಿದರು. ಮತಗಟ್ಟೆ ಪರಿಷ್ಕರಣೆ (ಎಸ್ಐಆರ್)ಯಲ್ಲಿ ಬಿ.ಎಲ್.ಎಗಳ ಪಾತ್ರದ ಕುರಿತು ಅನೀಲ ಜಮಾದಾರ ಹಾಗೂ ಜಿಲ್ಲಾ ಒಬಿಸಿ ಅಧ್ಯಕ್ಷ ಸಿದ್ದು ಬುಳ್ಳಾ ಮಾಹಿತಿ ನೀಡಿದರು.
ಬಿಜೆಪಿ ಮಂಡಲ ಅಧ್ಯಕ್ಷ ಅವ್ವಣ್ಣ ಗ್ವಾತಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಈರಣ್ಣಾ ರಾವೂರ, ಸಾಬು ಮಾಶ್ಯಾಳ ಹಾಗೂ ಪ್ರಕಾಶ ದೊಡಮನಿ, ಭೀಮನಗೌಡ ಲಚ್ಯಾಣ ಮಾತನಾಡಿದರು.
ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ(ಅಸ್ಕಿ), ಜಿಲ್ಲಾ ಘಟಕದ ಎಸ್ಸಿ ಮೋರ್ಚಾ ಅಧ್ಯಕ್ಷ ಮಂಜುನಾಥ ಮಿಸೆ, ಮಂಡಲ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಬಿರಾದಾರ, ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಾವೂದ್ ಇನಾಮದಾರ, ಸಿದ್ರಾಮಯ್ಯ ಮಠ, ಸೋಮು ದೇವೂರ, ಆಕಾಶ ಕಬ್ಬಿನ, ಜಗದೀಶ ಚವ್ಹಾಣ, ಶರಣು ದಳವಾಯಿ, ರಮೇಶ ಹಂಚಲಿ, ಭೀಮಸಿಂಗ ರಾಠೋಡ ಇದ್ದರು.

