ಶಾಲೆಗೊಂದು ಸಸಿ ವಿತರಣಾ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಆರ್ ನಡುಗಡ್ಡಿ ಸಲಹೆ
ಉದಯರಶ್ಮಿ ದಿನಪತ್ರಿಕೆ
ಇಂಡಿ: ಆಧುನಿಕ ತಂತ್ರಜ್ಞಾನದ ಕಾಲದಲ್ಲಿ ಮನುಷ್ಯ ನಿಸರ್ಗ ನಾಶ ಮಾಡುತ್ತಿದ್ದಾನೆ ಸುಂದರ ಪರಿಸರ ನಿರ್ಮಾಣವಾಗಬೇಕಾದರೆ ಶಾಲೆಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೆ ಒಂದು ಮರ ಪೋಷಣೆ ಮಾಡುವ ಅರಿವು ಮೂಡಿಸಿ ಒಂದು ಮರ ದತ್ತು ನೀಡಬೇಕೆಂದು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಆರ್ ನಡುಗಡ್ಡಿ ಹೇಳಿದರು
ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇಂಡಿ ಘಟಕ ಮತ್ತು ಸಹಕಾರಿ ನೌಕರರ ಬ್ಯಾಂಕಿನ ನಿರ್ದೇಶಕ ಅಲ್ಲಾಭಕ್ಷ ವಾಲಿಕಾರ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶಾಲೆಗೊಂದು ಸಸಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಸಾಪ ನಿಕಟ ಪೂರ್ವ ಅಧ್ಯಕ್ಷ ಕಾಂತು ಇಂಡಿ, ತಾಲೂಕಿನ ಎಲ್ಲ ಶಾಲೆಗಳಿಗೆ ಸಸಿ ಕೊಟ್ಟಂತಹ ಅಲ್ಲಾಭಕ್ಷ್ ವಾಲಿಕಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಜಯರಾಮ ಚವ್ಹಾಣ ಮಾತನಾಡಿ ಹಸಿರು ನಮ್ಮ ಉಸಿರು ಎಂದು ಹೇಳಿದರು.
ಎಂ ಎಂ ವಾಲಿಕಾರ್, ವೈ ಟಿ ಪಾಟೀಲ್, ಎಸ್ ವ್ಹಿ ಹರಳಯ್ಯ, ಅಲ್ತಾಫ್ ಬೋರಾಮಣಿ, ಜಗದೀಶ್ ಚವಡಿಹಾಳ, ಆನಂದ್ ಕೆಂಭಾವಿ, ಎ ಎಂ ಹೊಸೂರ್, ಡಿ ಎಸ್ ಕಣ್ಮಸ್, ಎಂ ಡಿ ಕಂಠಿಕಾರ್, ಟಿ ಕೆ ಪೂಜಾರಿ, ಎ ಸಿ ಬಡಿಗೇರ್, ಎ ಎಸ್ ಬಡಿಗೇರ, ಬಿ ಎಸ್ ಸೋನ್ನದ, ಪಿಜಿ ಕಲ್ಮನಿ, ಮೋಹನ್ ಕಟಟತದೊಂಡ, ರವಿ ಬಿರಾದಾರ್ ಮತ್ತು ಎಲ್ಲ ಶಾಲೆಯ ಮುಖ್ಯೋಪಾಧ್ಯರು ಮತ್ತಿತರಿದ್ದರು.

