ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪರಿಸರ ರಕ್ಷಣೆಯನ್ನೇ ಉಸಿರಾಗಿಸಿಕೊಂಡಿದ್ದ ಪರಿಸರ ಪ್ರೇಮಿ ದಿ.ಉದಯ ನಾವಲಗಿ ಅವರ ಸ್ಮರಣೆ ಹಾಗು ಪರಿಸರ ದಿನಾಚರಣೆಯನ್ನು ನನ್ನ ಗಿಡ-ನನ್ನ ಭೂಮಿ ಸಂಸ್ಥೆಯ ವತಿಯಿಂದ ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಾ ಮುನ್ನಡೆದಿದ್ದು, ಈ ಅಭಿಯಾನದ ಅಂಗವಾಗಿ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಪದವಿ ಮಹಾವಿದ್ಯಾಲಯದ ಆವರಣದಲ್ಲಿ ೩೩೩ ಸಸಿಗಳನ್ನು ಏಕಕಾಲಕ್ಕೆ ನೆಡಲಾಯಿತು.
ಡೊಮನಾಳದಲ್ಲಿ ಹಸಿರು ಕ್ರಾಂತಿಯನ್ನೇ ಮಾಡಿ ಆ ಪ್ರದೇಶವನ್ನು ಹಸಿರು ಸಿರಿಯನ್ನಾಗಿ ಮಾಡಿರುವ ಎನ್.ಡಿ. ಪಾಟೀಲ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಪರಿಸರ ರಕ್ಷಣೆ ಸಂದೇಶ ಸಾರಿದ ಅವರು, ಪರಿಸರದ ಉಳಿವಿನಲ್ಲಿ ನಮ್ಮ ಉಳಿವು ಅಡಗಿದೆ, ಪರಿಸರ ರಕ್ಷಣೆ ಒಂದು ಕರ್ತವ್ಯ ಅಷ್ಟೇ ಅಲ್ಲ ಅದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು, ಪರಿಸರ ರಕ್ಷಣೆ ಹಾಗೂ ಸಸಿ ನೆಡುವುದು ಅಪೂರ್ವ ಕಾರ್ಯ, ಈ ಕಾರ್ಯ ಕೈಗೊಂಡು ನೋಡಿ ಆತ್ಮತೃಪ್ತಿ ದೊರಕುತ್ತದೆ ಎಂದರು.
ನನ್ನ ಗಿಡ ನನ್ನ ಭೂಮಿ ಸಂಘಟನೆ ಸಂಚಾಲಕ ಬಸವರಾಜ ಬೈಚಬಾಳ ಮಾತನಾಡಿ, ನಮ್ಮ ಸಂಘಟನೆಯ ಹೆಸರಿನಂತೆಯೇ ಭೂಮಿ ಹಾಗೂ ಪರಿಸರ ರಕ್ಷಣೆ ಕಾರ್ಯವನ್ನು ನಿತ್ಯ ಕೈಗೊಳ್ಳಲಾಗುತ್ತಿದೆ, ಪರಿಸರ ರಕ್ಷಣೆಗೆ ಇನ್ನೊಂದು ಹೆಸರಾಗಿದ್ದ ದಿ.ಉದಯ ನಾವಲಗಿ ಅವರ ಸ್ಮರಣಾರ್ಥ ನೂರಾರು ಸಸಿಗಳನ್ನು ನೆಡುವ ಸಂಕಲ್ಪ ಮಾಡಲಾಗಿದೆ ಎಂದರು.
ಯುವ ಮುಖಂಡ ಉಮೇಶ ಕಾರಜೋಳ
ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ತುಕಾರಾಮ ಚಂಚಲಕರ,
ವಲಯ ತಹಶೀಲ್ದಾರ ಚನಗೊಂಡ, ಭಾಗ್ಯವಂತ, ಆರ್.ಎಫ್.ಓ ಸಂತೋಷ ಆಜೂರ, ಮಾಜಿ ಅಧ್ಯಕ್ಷ ಮಿಲಿಂದ ಚಂಚಲಕರ, ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಶರಣು ಸಬರದ, ಪ್ರಮುಖರಾದ ರಾಜು ಬಿರಾದಾರ, ಗುರುರಾಜ ಕರಂಭಟನಾಳ, ಎಸ್.ಎಲ್.ಇಂಗಳೇಶ್ವರ, ಜಯರಾಮ, ಆರತಿ ಪಾಟೀಲ,ಸುಜಾತಾ ಹಿರೇಮಠ, ಚಿದಾನಂದ ಔರಂಗಾಬಾದ್, ವಿಜಯ ಭೋಸಲೆ, ಶಶಿಧರ ರೂಢಗಿ, ವಿನಾಯಕ ಕಾಳೆ, ಅಶ್ವಥ್ ರೆಬಿನಾಳ, ಯಲ್ಲಪ್ಪ ಮಾಳಿ, ಸಂಜು ಗುನ್ನಾಪೂರ, ಶಿವಪುತ್ರ ಬಣಜಿಗೇರ,ಶಿವಯೋಗಿ ವಾಲೀಕಾರ, ಶ್ರೀಶೈಲ ವಾಘಮೋರೆ, ಸಂಗಮೇಶ ಔದಿ, ಬಾಬು ಶಿರಶ್ಯಾಡ,
ಡಾ.ಡಿ.ಎನ್. ಧರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿರೇಶ ಮುದುಕಾಮಠ ಸ್ವಾಗತಿಸಿದರು. ಬಸವರಾಜ ಯಾದವಾಡ ಕಾರ್ಯಕ್ರಮ ನಿರೂಪಿಸಿದರು.

