Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಹೊಲಸು ಹೋಲಿಕೆ ಈ ಜನಕೆ

ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 11, 2026

ಬಸವಾದಿ ಶರಣರ ಹಿಂದೂ ಸಮಾವೇಶ ಬಹಿಷ್ಕರಿಸಲು ಡಾ.ಪಟ್ಟಣ ಕರೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಗುರುಗಳ ಋಣ ತೀರಿಸುವುದು ಅಸಾಧ್ಯ :ವಾಲಿಕಾರ
(ರಾಜ್ಯ ) ಜಿಲ್ಲೆ

ಗುರುಗಳ ಋಣ ತೀರಿಸುವುದು ಅಸಾಧ್ಯ :ವಾಲಿಕಾರ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ದೇವರಹಿಪ್ಪರಗಿ: ಗುರುಗಳ ಋಣ ತೀರಿಸಲು ಸಾಧ್ಯವಿಲ್ಲ. ಗುರುವಿನ ಉಪಕಾರ ಅಪಾರ. ಶಿಕ್ಷಕರು ಸಚ್ಚಾರಿತ್ರ ಸಮಾಜದ ನಿರ್ಮಾತೃಗಳು. ತಮ್ಮಲ್ಲಿರುವ ಜ್ಞಾನವನ್ನು ಮಕ್ಕಳಿಗೆ ಬೋಧಿಸಿ ಅವರ ಬದುಕನ್ನು ಕಟ್ಟಿಕೊಟ್ಟ ಶಿಕ್ಷಕರ ಸೇವೆ ಶ್ಲಾಘನೀಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ಪಟ್ಟರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ದೇವರಹಿಪ್ಪರಗಿ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ದೇವರಹಿಪ್ಪರಗಿ ಇವರ ಆಶ್ರದಲ್ಲಿ ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಶಿಕ್ಷಕ ಸ್ಥಾನ ಪವಿತ್ರವಾದದ್ದು. ಹಗಲಿರುಳು ಅಧ್ಯಯನ ಮಾಡಿ ಮಕ್ಕಳಿಗೆ ಜ್ಞಾನವಂತರನ್ನಾಗಿ ಮಾಡಿ ಭವಿಷ್ಯ ರೂಪಿಸುವ ಮೂಲಕ ಶಿಕ್ಷಕರು ಸ್ಮರಣೀಯ ಸಾಲಿನಲ್ಲಿ ಇದ್ದಾರೆ ಎಂದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಜಿ.ಎಸ್.ಬೇವನೂರು ಮಾತನಾಡಿ, ನಿವೃತ್ತಿ ಜೀವನದಲ್ಲಿ ಸಾಮಾಜಿಕ. ಶೈಕ್ಷಣಿಕ ಹಾಗೂ ಅಧ್ಯಾತ್ಮಿಕ ಜೀವನಕ್ಕೆ ಮಹತ್ವ ನೀಡಬೇಕು. ಜೀವನ ಪೂರ್ತಿ ಬೋಧಿಸಿದ ತಾವು ಈಗ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಲಹೆ, ಮಾರ್ಗದರ್ಶನ ನೀಡಬೇಕೆಂದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷ ಎ.ಎಚ್.ವಾಲಿಕಾರ ಮಾತನಾಡಿ, ನಿವೃತ್ತ ಶಿಕ್ಷಕರಾದ ತಮಗೆ ಸನ್ಮಾನ ಮಾಡುವ ಆವಕಾಶ ದೊರಕಿರುವದು ನಮ್ಮೆಲ್ಲರ ಅದೃಷ್ಟ . ಯಾವುದೇ ಬೇದವಿಲ್ಲದೆ ಮಾನವೀಯ ಸದ್ಗುಣಗಳಿಂದ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಜ್ಞಾನ ದಾಸೋಹ ಮಾಡಿದ ಕೀರ್ತಿ ತಮಗೆ ಸಲ್ಲುತ್ತದೆ ಎಂದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಸಿ.ತಳಕೇರಿ. ಡಾ.ಬಿ.ಆರ್. ಅಂಬೇಡ್ಕರ ಸುಧಾರಣಾ ಸಮಿತಿ ಅಧ್ಯಕ್ಷ ಕಾಶಿನಾಥ ತಳಕೇರಿ. ತತ್ವಪದ ಗಾಯಕ ಮಹೆತಾಬ ಕಾಗವಾಡ. ಶಿಕ್ಷಣ ಸಂಯೋಜಕ ಎಸ್.ಆಯ್.ರಾಂಪೂರ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದು ಮೇಲಿನಮನಿ ಮಾತನಾಡಿದರು
ಎಮ್.ಎಚ್.ಪಟೇಲ. ಎಸ್.ಜಿ.ತಾವರಖೇಡ. ಕೆ.ಎಂ.ನಂದಿ. ಲಕ್ಷ್ಮಣ ಸೋನ್ನದ. ಸಿಂಗೆ ವೇದಿಕೆಯಲ್ಲಿದ್ದರು.
ನಿವೃತ್ತ ಶಿಕ್ಷಕರಾದ ಎಸ್.ಎ.ಬಾಗವಾನ (ಮಣೂರ), ರಾಮಚಂದ್ರ ನಾಯಕ(ಮಣೂರ), ಎಲ್.ವಾಯ್.ಹರಿಜನ( ದೇವೂರ ಎಲ್.ಟಿ), ಪರಶುರಾಮ ಬೆನಕನಹಳ್ಳಿ (ದೇವರ ಎಲ್.ಟಿ) ಡಿ.ಎ.ಇನಾಮದಾರ(ಜಾಲವಾದ), ಎಸ್.ಎಮ್.ಬಿರಾದಾರ (ಕೋರವಾರ), ಅಡಿವೆಪ್ಪ ಮೇಟಿ (ದೇವೂರ ಎಲ್.ಟಿ), ಶಬ್ಬೀರಅಹಮ್ಮದ ಮನಿಯಾರ(ಕೊಂಡಗೂಳಿ), ಶಿವನಗೌಡ ಪಾಟೀಲ (ಬೂದಿಹಾಳಡೋಣಿ). ಶ್ರೀಶೈಲ ಯಾಳವಾರ(ಬೋಮ್ಮನಜೋಗಿ). ಅಶೋಕ ಚಂಡಕಿ (ಚಿಕ್ಕರೂಗಿ), ಎಮ್.ಎಸ್.ಮಠಪತಿ (ಹರನಾಳ), ಸಲೀಮ್ ಕಾಟಿಕ(ಕೊಂಡಗೂಳಿ ), ಅಮೃತಾಬಾಯಿ ಕರಾಬಿ (ಪಡಗಾನೂರ), ಗುರಪ್ಪ ಹೊಕ್ಕುಂಡಿ (ತಿಳಗೋಳ ), ಜಾನಪ್ಪ ಹರಿಜನ(ಪಡಗಾನೂರ ), ಮಲಕಪ್ಪ ಹಚಡದ(ಚಿಕ್ಕರೂಗಿ), ಬಿ.ಡಿ.ಪಾಟೀಲ( ಬೊಮ್ಮನಜೋಗಿ), ಎ.ಎಮ್.ಚೌಧರಿ(ಬೊಮ್ಮನಜೋಗಿ), ಗುರುಬಸಪ್ಪ ಕೆಂಬಾವಿ(ಗAಗನಳ್ಳಿ) ಇವರುಗಳನ್ನು ಸನ್ಮಾನಿಸಲಾಯಿತು.
ಶಿಕ್ಷಕರಾದ ಆರ್.ಎಂ.ಕುಲಕರ್ಣಿ. ಎಸ್.ವಿ. ಕೋಟೀನ್. ಶಿವಶರಣ ಪೂಜಾರಿ, ಎನ್.ಎಸ್.ಹಿರೇಮಠ, ಬಿ.ಜಿ.ಪಾಟೀಲ. ವೈ..ಜಿ.ತಾವರಖೇಡ, ಪ್ರಹ್ಲಾದ ಕುಲಕರ್ಣಿ, ಬಿ.ಜಿ.ಬಡಿಗೇರ. ಎನ್.ಎಸ್. ಹರವಾಳ ರವೀಂದ್ರ ಕೋಟಿನ್, ಮಲ್ಲಿಕಾರ್ಜುನ ತಳಕೇರಿ. ಬಸವರಾಜ ನಾಗರಾಳ, ಅಣ್ಣಾರಾಯ ಬಜಂತ್ರಿ, ಎಸ್.ಡಿ.ಮುಳಸಾವಳಗಿ. ದಾನು ರಾಠೋಡ. ಎಮ್ ಹಳ್ಳಿ. ಎಮ್.ಜಿ.ಯಂಕAಚಿ, ರೇಣುಕಾ ಇಂಡಿ, ಪುಷ್ಪಾವತಿ ರೂಗಿ ಗೋಲ್ಲಾಳ ಬಿರಾದಾರ ಇದ್ದರು.

BIJAPUR NEWS patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಹೊಲಸು ಹೋಲಿಕೆ ಈ ಜನಕೆ

ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 11, 2026

ಬಸವಾದಿ ಶರಣರ ಹಿಂದೂ ಸಮಾವೇಶ ಬಹಿಷ್ಕರಿಸಲು ಡಾ.ಪಟ್ಟಣ ಕರೆ

ಗ್ರಾಮಒನ್ ಫ್ರಾಂಚೈಸಿಗೆ ಅರ್ಜಿ ಆಹ್ವಾನ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಹೊಲಸು ಹೋಲಿಕೆ ಈ ಜನಕೆ
    In ಭಾವರಶ್ಮಿ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 11, 2026
    In ದಿನಪತ್ರಿಕೆ
  • ಬಸವಾದಿ ಶರಣರ ಹಿಂದೂ ಸಮಾವೇಶ ಬಹಿಷ್ಕರಿಸಲು ಡಾ.ಪಟ್ಟಣ ಕರೆ
    In (ರಾಜ್ಯ ) ಜಿಲ್ಲೆ
  • ಗ್ರಾಮಒನ್ ಫ್ರಾಂಚೈಸಿಗೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಜೂ.೧೨ ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಮೈಸೂರು ವಿವಿಯ ವಿವಿಧ ಕೋರ್ಸ್ಗಳ ಪ್ರವೇಶಕ್ಕಾಗಿ ಆನ್‌ಲೈನ್ ಅರ್ಜಿ ಆಹ್ವಾನ
    In Uncategorized
  • ಕೋರವಾರ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಸಮವಸ್ತ್ರ ವಿತರಣೆ
    In (ರಾಜ್ಯ ) ಜಿಲ್ಲೆ
  • ಸಕಾಲಕ್ಕೆ ವಿವಿಧ ಪ್ರಮಾಣ ಪತ್ರಗಳನ್ನು ವಿತರಿಸಿ :ಡಿಸಿ ಡಾ.ಆನಂದ ಕೆ
    In (ರಾಜ್ಯ ) ಜಿಲ್ಲೆ
  • ಜೂ.೧೬ ರಂದು ವಿವಿಧ ಹುದ್ದೆಗಳ ಭರ್ತಿಗೆ ನೇರ ಸಂದರ್ಶನ
    In (ರಾಜ್ಯ ) ಜಿಲ್ಲೆ
  • ಮೋದಿ ಸರ್ಕಾರಕ್ಕೆ 12 ವರ್ಷ:ಹೆಚ್ ಡಿ ಕೋಟೆಯಲ್ಲಿ ಬಿಜೆಪಿ ವಿಶೇಷ ಪೂಜೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.