ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಗುರುಗಳ ಋಣ ತೀರಿಸಲು ಸಾಧ್ಯವಿಲ್ಲ. ಗುರುವಿನ ಉಪಕಾರ ಅಪಾರ. ಶಿಕ್ಷಕರು ಸಚ್ಚಾರಿತ್ರ ಸಮಾಜದ ನಿರ್ಮಾತೃಗಳು. ತಮ್ಮಲ್ಲಿರುವ ಜ್ಞಾನವನ್ನು ಮಕ್ಕಳಿಗೆ ಬೋಧಿಸಿ ಅವರ ಬದುಕನ್ನು ಕಟ್ಟಿಕೊಟ್ಟ ಶಿಕ್ಷಕರ ಸೇವೆ ಶ್ಲಾಘನೀಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ಪಟ್ಟರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ದೇವರಹಿಪ್ಪರಗಿ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ದೇವರಹಿಪ್ಪರಗಿ ಇವರ ಆಶ್ರದಲ್ಲಿ ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಶಿಕ್ಷಕ ಸ್ಥಾನ ಪವಿತ್ರವಾದದ್ದು. ಹಗಲಿರುಳು ಅಧ್ಯಯನ ಮಾಡಿ ಮಕ್ಕಳಿಗೆ ಜ್ಞಾನವಂತರನ್ನಾಗಿ ಮಾಡಿ ಭವಿಷ್ಯ ರೂಪಿಸುವ ಮೂಲಕ ಶಿಕ್ಷಕರು ಸ್ಮರಣೀಯ ಸಾಲಿನಲ್ಲಿ ಇದ್ದಾರೆ ಎಂದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಜಿ.ಎಸ್.ಬೇವನೂರು ಮಾತನಾಡಿ, ನಿವೃತ್ತಿ ಜೀವನದಲ್ಲಿ ಸಾಮಾಜಿಕ. ಶೈಕ್ಷಣಿಕ ಹಾಗೂ ಅಧ್ಯಾತ್ಮಿಕ ಜೀವನಕ್ಕೆ ಮಹತ್ವ ನೀಡಬೇಕು. ಜೀವನ ಪೂರ್ತಿ ಬೋಧಿಸಿದ ತಾವು ಈಗ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಲಹೆ, ಮಾರ್ಗದರ್ಶನ ನೀಡಬೇಕೆಂದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷ ಎ.ಎಚ್.ವಾಲಿಕಾರ ಮಾತನಾಡಿ, ನಿವೃತ್ತ ಶಿಕ್ಷಕರಾದ ತಮಗೆ ಸನ್ಮಾನ ಮಾಡುವ ಆವಕಾಶ ದೊರಕಿರುವದು ನಮ್ಮೆಲ್ಲರ ಅದೃಷ್ಟ . ಯಾವುದೇ ಬೇದವಿಲ್ಲದೆ ಮಾನವೀಯ ಸದ್ಗುಣಗಳಿಂದ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಜ್ಞಾನ ದಾಸೋಹ ಮಾಡಿದ ಕೀರ್ತಿ ತಮಗೆ ಸಲ್ಲುತ್ತದೆ ಎಂದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಸಿ.ತಳಕೇರಿ. ಡಾ.ಬಿ.ಆರ್. ಅಂಬೇಡ್ಕರ ಸುಧಾರಣಾ ಸಮಿತಿ ಅಧ್ಯಕ್ಷ ಕಾಶಿನಾಥ ತಳಕೇರಿ. ತತ್ವಪದ ಗಾಯಕ ಮಹೆತಾಬ ಕಾಗವಾಡ. ಶಿಕ್ಷಣ ಸಂಯೋಜಕ ಎಸ್.ಆಯ್.ರಾಂಪೂರ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದು ಮೇಲಿನಮನಿ ಮಾತನಾಡಿದರು
ಎಮ್.ಎಚ್.ಪಟೇಲ. ಎಸ್.ಜಿ.ತಾವರಖೇಡ. ಕೆ.ಎಂ.ನಂದಿ. ಲಕ್ಷ್ಮಣ ಸೋನ್ನದ. ಸಿಂಗೆ ವೇದಿಕೆಯಲ್ಲಿದ್ದರು.
ನಿವೃತ್ತ ಶಿಕ್ಷಕರಾದ ಎಸ್.ಎ.ಬಾಗವಾನ (ಮಣೂರ), ರಾಮಚಂದ್ರ ನಾಯಕ(ಮಣೂರ), ಎಲ್.ವಾಯ್.ಹರಿಜನ( ದೇವೂರ ಎಲ್.ಟಿ), ಪರಶುರಾಮ ಬೆನಕನಹಳ್ಳಿ (ದೇವರ ಎಲ್.ಟಿ) ಡಿ.ಎ.ಇನಾಮದಾರ(ಜಾಲವಾದ), ಎಸ್.ಎಮ್.ಬಿರಾದಾರ (ಕೋರವಾರ), ಅಡಿವೆಪ್ಪ ಮೇಟಿ (ದೇವೂರ ಎಲ್.ಟಿ), ಶಬ್ಬೀರಅಹಮ್ಮದ ಮನಿಯಾರ(ಕೊಂಡಗೂಳಿ), ಶಿವನಗೌಡ ಪಾಟೀಲ (ಬೂದಿಹಾಳಡೋಣಿ). ಶ್ರೀಶೈಲ ಯಾಳವಾರ(ಬೋಮ್ಮನಜೋಗಿ). ಅಶೋಕ ಚಂಡಕಿ (ಚಿಕ್ಕರೂಗಿ), ಎಮ್.ಎಸ್.ಮಠಪತಿ (ಹರನಾಳ), ಸಲೀಮ್ ಕಾಟಿಕ(ಕೊಂಡಗೂಳಿ ), ಅಮೃತಾಬಾಯಿ ಕರಾಬಿ (ಪಡಗಾನೂರ), ಗುರಪ್ಪ ಹೊಕ್ಕುಂಡಿ (ತಿಳಗೋಳ ), ಜಾನಪ್ಪ ಹರಿಜನ(ಪಡಗಾನೂರ ), ಮಲಕಪ್ಪ ಹಚಡದ(ಚಿಕ್ಕರೂಗಿ), ಬಿ.ಡಿ.ಪಾಟೀಲ( ಬೊಮ್ಮನಜೋಗಿ), ಎ.ಎಮ್.ಚೌಧರಿ(ಬೊಮ್ಮನಜೋಗಿ), ಗುರುಬಸಪ್ಪ ಕೆಂಬಾವಿ(ಗAಗನಳ್ಳಿ) ಇವರುಗಳನ್ನು ಸನ್ಮಾನಿಸಲಾಯಿತು.
ಶಿಕ್ಷಕರಾದ ಆರ್.ಎಂ.ಕುಲಕರ್ಣಿ. ಎಸ್.ವಿ. ಕೋಟೀನ್. ಶಿವಶರಣ ಪೂಜಾರಿ, ಎನ್.ಎಸ್.ಹಿರೇಮಠ, ಬಿ.ಜಿ.ಪಾಟೀಲ. ವೈ..ಜಿ.ತಾವರಖೇಡ, ಪ್ರಹ್ಲಾದ ಕುಲಕರ್ಣಿ, ಬಿ.ಜಿ.ಬಡಿಗೇರ. ಎನ್.ಎಸ್. ಹರವಾಳ ರವೀಂದ್ರ ಕೋಟಿನ್, ಮಲ್ಲಿಕಾರ್ಜುನ ತಳಕೇರಿ. ಬಸವರಾಜ ನಾಗರಾಳ, ಅಣ್ಣಾರಾಯ ಬಜಂತ್ರಿ, ಎಸ್.ಡಿ.ಮುಳಸಾವಳಗಿ. ದಾನು ರಾಠೋಡ. ಎಮ್ ಹಳ್ಳಿ. ಎಮ್.ಜಿ.ಯಂಕAಚಿ, ರೇಣುಕಾ ಇಂಡಿ, ಪುಷ್ಪಾವತಿ ರೂಗಿ ಗೋಲ್ಲಾಳ ಬಿರಾದಾರ ಇದ್ದರು.

