ವರದಿ: ಸಿದ್ರಾಮ್ ಎಮ್ ಇಟ್ಟಿ
ಜಮಖಂಡಿ: ” ರಸ್ತೆ ಮಧ್ಯೆ ಕುಸಿದಿರುವ ಸೇತುವೆ ನವೀಕರಣ ಮಾಡಿ ಪುಣ್ಯ ಕಟ್ಕೊಳ್ಳಿ “
ತಾಲೂಕಿನ ತುಬಚಿ ಗ್ರಾಮದಿಂದ ಜಮಖಂಡಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಮಾರ್ಗ ಮಧ್ಯದಲ್ಲಿ ಸೇತುವೆಯು ಕುಸಿದು ಹೋಗಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಾಗಿದೆ. ಕಳೆದ ವರ್ಷ ಸಪ್ಟಂಬರ್ 5ರಂದು ಕುಸಿದು ಸೇತುವೆ ಇನ್ನು ನವೀಕರಣಗೊಂಡಿಲ್ಲ. ರಸ್ತೆ ಪಕ್ಕದ ಮಣ್ಣು ಅಗೆದು ಗುಂಡಿ ಮುಚ್ಚಿರುವ ಅಧಿಕಾರಿಗಳು ಬೇಜವಾಬ್ದಾರಿ ಕೆಲಸ ಮಾಡುತ್ತಿದ್ದಾರೆ. ಆದರೆ ಮತ್ತು ಮಂಗಳವಾರ ಮಳೆಯಿಂದ ಮತ್ತಷ್ಟು ಸೇತುವೆ ಸಂಪೂರ್ಣ ಕುಸಿದು ಹೋಗಿದೆ ಸ್ವಲ್ಪ ರಸ್ತೆ ಪಕ್ಕಕ್ಕೆ ವಾಹನ ತೆಗೆದುಕೊಂಡರೆ ವಾಹನ ಪಲ್ಟಿ ಯಾಗುವುದು ಗ್ಯಾರಂಟಿ. ರಸ್ತೆ ತುಂಬಾ ತಿರುವು- ಮುರುವು ಇರುವುದರಿಂದ ವಾಹನ ಸವಾರರಿಗೆ ಮತ್ತಷ್ಟು ಭಯ ಹೆಚ್ಚಿಸಿದೆ.
ಜಮಖಂಡಿ ತಾಲೂಕಿನ ತುಬಚಿ ಹಾಗೂ ಅಥಣಿ ತಾಲೂಕಿನ ಅನೇಕ ಗ್ರಾಮಗಳಿಂದ ಜಮಖಂಡಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯು ಡಾಂಬರೀಕರಣವಾಗಿ ಸುಮಾರು ವರ್ಷಗಳ ಪೂರ್ಣಗೊಳ್ಳದಿದ್ದರೂ ಈ ರಸ್ತೆಯು ಸಂಪೂರ್ಣ ಕಿತ್ತು ಹೋಗಿದ್ದರೂ ಅಧಿಕಾರಿಗಳು ಇದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ಈಗ ಈ ರಸ್ತೆಯ ಮಧ್ಯದಲ್ಲಿ ಕಳೆದ ದಿನಗಳ ಹಿಂದೆ ಅತಿಯಾದ ಮಳೆಗೆ ಸೇತುವೆಯು ಕುಸಿದು ಹೋಗಿದ್ದು, ರಸ್ತೆಯ ಮೇಲೆ ಸಂಚಾರ ಮಾಡುವುದು ಪ್ರಾಣಕ್ಕೆ ಸಂಚಕಾರ ತಂದು ಕೊಡುವಂತಾಗಿದೆ. ಈ ರಸ್ತೆಯ ಮೇಲೆ ಪ್ರತಿನಿತ್ಯ ಸಾವಿರಾರು ವಾಹನಗಳು ಅನೇಕ ಶಾಲಾ ವಾಹನಗಳು ಸಂಚಾರ ಮಾಡುತ್ತಿದ್ದರೂ ಅಧಿಕಾರಿಗಳಿಗೆ ಇದರ ಬಗ್ಗೆ ಕಾಳಜಿ ಇಲ್ಲದಂತಾಗಿರುವುದು ನೋವಿನ ಸಂಗತಿಯಾಗಿದೆ.
ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು
ಇಷ್ಟಾದರೂ ಜಾಣ ಮೌನಕ್ಕೆ ಶರಣಾಗಿದ್ದಾರೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿಗಳು ಗಮನಕ್ಕೆ ತಂದರು ದಿವ್ಯ ನಿರ್ಲಕ್ಷ್ಯ ಮಾಡಿರುವ ಸಂಬಂಧಪಟ್ಟ ಇಲಾಖೆಯವರು ಮತ್ತು ಜನಪ್ರತಿನಿಧಿಗಳು ಯಾವುದೇ ಅಪಾಯ ಸಂಭವಿಸುವ ಮುಂಚೆ ಎಚ್ಚೆತ್ತುಕೊಳ್ಳಬೇಕು. ಈ ಸೇತುವೆ ಯಾಗಿ ಇನ್ನು 5 ವರ್ಷ ಆಗೈತೆ ಇಲ್ಲೊ ಗೊತ್ತಿಲ್ರಿ ಇದು ಕಳಪೆ ಕಾಮಗಾರಿಯಾಗಿದ್ದು, ಇದನ್ನು ಪುನಂ ಸೇತುವೆ ನವೀಕರಣ ಮಾಡಬೇಕು ಮತ್ತು ಇಲ್ಲಿ ಯಾವುದೇ ರೀತಿಯ ಅಪಾಯವಾದರೆ ಇದಕ್ಕೆ ನೇರ ಹೊಣೆ ಲೋಕೋಪಯೋಗಿ ಇಲಾಖೆ ಹೊರಬೇಕಾಗುತ್ತದೆ. ಎಂದು ತುಬಚಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

