ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವುದೇ ನಮ್ಮ ಗುರಿ ಎಂದು ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ತುಬಚಿ ಗ್ರಾಮದ ಶ್ರೀ ಶಿವಲಿಂಗೇಶ್ವರ ಆವರಣದಲ್ಲಿ ನಡೆದ ದುಶ್ಚಟಗಳ ಭಿಕ್ಷೆ ಸದ್ಗುಣಗಳ ದೀಕ್ಷೆ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪೂಜ್ಯರು, ಸಮಾಜದಿಂದ ಮದ್ಯಪಾನ, ಧೂಮಪಾನ ಸೇರಿದಂತೆ ವಿವಿಧ ವ್ಯಸನಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿ, ಆರೋಗ್ಯಕರ ಮತ್ತು ಆದರ್ಶ ಸಮಾಜವನ್ನು ನಿರ್ಮಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಜಮಖಂಡಿಯ ಓಲೆ ಮಠದ ಆನಂದ ದೇವರು ಮಾತನಾಡಿ,
ವ್ಯಸನಗಳು ವ್ಯಕ್ತಿಯ ಜೀವನವನ್ನು ಮಾತ್ರವಲ್ಲದೆ, ಇಡೀ ಕುಟುಂಬವನ್ನೆ ಬೀದಿಪಾಲು ಮಾಡುತ್ತವೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಇಂತಹ ಪಿಡುಗುಗಳನ್ನು ಬುಡಸಮೇತ ಕಿತ್ತೊಗೆಯಬೇಕಿದೆ. ಆಧ್ಯಾತ್ಮಿಕ ಚಿಂತನೆ ಮತ್ತು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ವ್ಯಸನಮುಕ್ತ ಸಮಾಜವನ್ನು ನಿರ್ಮಿಸಲು ನಾವೆಲ್ಲರೂ ಸಂಕಲ್ಪ ಮಾಡಬೇಕು ಎಂದು ಮಾತನಾಡಿದರು.
ಇದೇ ಸಂದರ್ಭದಲ್ಲಿ ಬಸವರಾಜೇಂದ್ರ ಶರಣರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯರಾದ ಬಸಯ್ಯ ಮಠದ, ಸಂಗಯ್ಯ ಮಠಪತಿ, ಸುರೇಶಗೌಡ ಪಾಟೀಲ, ಅಣ್ಣಪ್ಪ ತೊನಶ್ಯಾಳ, ಈರಪ್ಪ ಸಿಂಧೂರ, ಬಸವರಾಜ ಪಾಟೀಲ, ಸೋಮಲಿಂಗಪ್ಪ ಕರಬಸನವರ, ಶಿವಲಿಂಗಪ್ಪ ಕುಂಬಾರ, ಶಿವಪ್ಪ ಶೇಗಾಂವಿ, ಮುತ್ತಪ್ಪ ಕುಂಬಾರ, ಬಸವರಾಜ ಬಿರಾದಾರ, ನಿಂಗಪ್ಪ ಬೋರಾಳ, ಮಾದೇವ ಬ್ಯಾಡಗಿ, ಸದಾಶಿವ ಕವಟಗಿ, ಅಪಸಾಬ ಬಿರಾದಾರ, ರಾವಸಾಬ ದಳವಾಯಿ, ಶಿವಲಿಂಗಪ್ಪ ಹೊನವಾಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

