ಟಾಟಾ ಪವರ್ ಕಂಪನಿಗೆ ನೀಡಿದರೆ ರೈತಸಂಘದಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಎಚ್ಚರಿಕೆ
ಉದಯರಶ್ಮಿ ದಿನಪತ್ರಿಕೆ
ಅಥಣಿ: ಇಂಧನ ಮತ್ತು ಗ್ಯಾಸ್ ಬೆಲೆಯನ್ನು ಹೆಚ್ಚಿಸುವ ಮೂಲಕ ರೈತರ ಮತ್ತು ಜನಸಾಮಾನ್ಯರ ಜೊತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಚೆಲ್ಲಾಟವಾಡುತ್ತಿವೆ, ರೈತರಿಗೆ ಮತ್ತು ಜನಸಾಮಾನ್ಯರಿಗೆ ಅಗತ್ಯವಾಗಿರುವ ವಿದ್ಯುತ್ ಶಕ್ತಿಯನ್ನು ಖಾಸಗಿಕರಣ ಮಾಡುತ್ತಿರುವುದು ವಿಷಾದನೀಯ, ಇದರಿಂದ ರೈತರ ಮತ್ತು ಅನೇಕ ಕಾರ್ಮಿಕರ ಬದುಕು ಅತಂತ್ರವಾಗುತ್ತದೆ, ಯಾವುದೇ ಕಾರಣಕ್ಕೂ ಇದನ್ನ ಖಾಸಗಿಕರಣಗೊಳಿಸಬಾರದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಮಹಾದೇವ ಮಡಿವಾಳ ರಾಜ್ಯ ಸರ್ಕಾರವನ್ನ ಆಗ್ರಹಿಸಿದರು.
ಅವರು ಶನಿವಾರ ಇಲ್ಲಿನ ಮಿನಿ ವಿಧಾನಸೌಧ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರ ಜೊತೆ ಚೆಲ್ಲಾಟವಾಡುತ್ತಿದ್ದು, ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡದೆ ಮೋಸ ಮಾಡುತ್ತೇವೆ. ಈಗಾಗಲೇ ನಮ್ಮ ರೈತರ ಬದುಕು ಸ್ವತಂತ್ರವಾಗಿದ್ದು, ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಉಚಿತ ವಿದ್ಯುತ್ ನೀಡುವ ಬದಲು ಖಾಸಗಿಕರಣ ಮಾಡುತ್ತಿರುವುದು ಗಾಯದ ಮೇಲೆ ಬರೆ ಎಳೆದಂತೆ. ಸಿಎಂ ಡಿಕೆ ಶಿವಕುಮಾರ್ ಹಾಗೂ ಇಂಧನ ಸಚಿವರಾದ ಕೆ ಜಿ ಜಾರ್ಜ್ ಅವರು ಹೆಸ್ಕಾಂ ಸಂಸ್ಥೆಯನ್ನು ಟಾಟಾ ಪವರ್ ಕಂಪನಿಗೆ ವಹಿಸುವ ಮೂಲಕ ಖಾಸಗಿಕರಣ ಗೊಳಿಸುತ್ತಿರುವಕ್ಕೆ ನಮ್ಮದು ವಿರೋಧವಿದೆ. ರಾಜ್ಯ ಸರ್ಕಾರ ಈ ರೈತ ವಿರೋಧಿ ನೀತಿಯನ್ನ ಕೂಡಲೇ ಕೈಬಿಡಬೇಕು ಎಂದು ಅಗ್ರಹಿಸಿದರು.
ರಾಜ್ಯದಲ್ಲಿಯೇ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಬಳಕೆದಾರರಾಗಿರುವ ಗ್ರಾಮೀಣ ಭಾಗದ ರೈತಾಪಿ ವರ್ಗದವರು ಹಾಗೂ ಕೂಲಿ ಕಾರ್ಮಿಕರು ಮತ್ತು ಮತ್ತು ವಿದ್ಯುತ್ ಬಳಕೆಯಿಂದಲೆ ತಮ್ಮ ಕೆಲಸದನ್ನು ನಂಬಿಕೊಂಡಿರುವ ಹಲವಾರು ರೈತರು ಹಾಗೂ ಕಾರ್ಮಿಕರಿಗೆ ಇದರಿಂದ ಭಾರೀ ಹಾನಿಯಾಗುವ ಸಂಭವ ಇರುತ್ತದೆ, ಕಾರಣ ರೈತರು ಬಡ ಗ್ರಾಹಕರು ಸಬ್ಸಿಡಿ ಆಧಾರಿತ ಗ್ರಾಹಕರಾಗಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಹೆಸ್ಕಾಂ ಸಂಸ್ಥೆಯನ್ನು ಟಾಟಾ ಪವರ ಕಂಪನಿಗೆ ಹಸ್ತಾಂತರಿಸುವುದನ್ನು ಕೈ ಬಿಡಬೇಕು. ಇಲ್ಲವಾದರೆ ರಾಜ್ಯದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಸಂಗಪ್ಪ ಕರಿಗಾರ, ರಮೇಶ ಕುಂಬಾರ, ಬಾಹುಬಲಿ ಸಂಕಣ್ಣವರ, ಕಿರಣ್ ಮೀಸಾಳ, ದುಂಡಪ್ಪ ತನಂಗಿ, ಮಹದೇವ ಕುಚುನೂರ, ಲಕ್ಕಪ್ಪ ಪೂಜಾರಿ, ಜಗದೀಶ ಮರೆಗುದ್ದಿ, ಶಿವಾನಂದ ಮಗದುಮ್ಮ, ನಿಂಗಪ್ಪ ಉದ್ದಾನಗೋಳ, ಹನುಮಂತ ಮಹೇಶವಾಡಗಿ, ಮಹದೇವ್ ಹೊಸಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

