ಉದಯರಶ್ಮಿ ದಿನಪತ್ರಿಕೆ
ಎಚ್.ಡಿ.ಕೋಟೆ: ಮಣ್ಣು, ನೀರು, ರೈತ ಉಳಿಯಬೇಕು. ಮನುಷ್ಯನಿಗೆ ಉತ್ತಮ ಆರೋಗ್ಯ ಸಿಗಬೇಕೆಂಬ ನಿಟ್ಟಿನಲ್ಲಿ ಸಿರಿಧಾನ್ಯ ಪೌಡರ್ ನ ಮಹತ್ವವನ್ನು ಜನರಿಗೆ ತಿಳಿಸುವ ಕೆಲಸವನ್ನು ಮಾಡುತ್ತಿದ್ದೆವೆ ಎಂದು ಉದ್ಯಮಿ ಮಿಲ್ ನಾಗರಾಜ್ ಹೇಳಿದರು.
ತಾಲೂಕಿನ ಪಡುಕೋಟೆಯಲ್ಲಿ (ಇಂದಿರಾನಗರ) ಸಮತಾ ಟ್ರಸ್ಟ್ (ರಿ), ನಂಬಿಕೆ ಫುಡ್ ಪ್ರಾಡಕ್ಟ್ ಪ್ರೈವೇಟ್ (ಲಿ), ಸ್ವಾರಲಯ ಮ್ಯೂಸಿಕಲ್ ಟ್ರಸ್ಟ್, ಗಾನವಿ ಮೆಡಿಕಲ್ ಅಂಡ್ ಜನರಲ್ ಇಂದಿರಾನಗರ ಸಂಯುಕ್ತಾಶ್ರಯದಲ್ಲಿ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನದ ಅಂಗವಾಗಿ ಆರೋಗ್ಯ ತಪಾಸಣೆ ಶಿಬಿರ ಹಾಗೂ ನಂಬಿಕೆ ಸಿರಿಧಾನ್ಯ ಪೌಡರ್ (ಬಾದಾಮಿ ಹಾಲು) ಮಹತ್ವವನ್ನು ಕುರಿತು ಮಾತನಾಡಿದರು.
ಮನುಷ್ಯ ದಿನನಿತ್ಯ ಸೇವಿಸುತ್ತಿರುವ ಆಹಾರ ವಿಷಪೂರಿತವಾಗಿದ್ದು ಚಿಕ್ಕ ವಯಸ್ಸಿಗೆ ಹಲವಾರು ರೋಗಗಳು ಬರುತ್ತಿವೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಇಳುವರಿ ಆಸೆಗಾಗಿ ಬಿತ್ತನೆ ಬೀಜಗಳಿಗೆ ರೈತರು ರಾಸಾಯನಿಕ ಗೊಬ್ಬರ ಹಾಗೂ ಔಷಧಿಗಳನ್ನು ಸಿಂಪಡಿಸುತ್ತಿದ್ದಾರೆ. ಆದರೆ ನಮ್ಮ ನಂಬಿಕೆ ಸಿರಿಧಾನ್ಯ ಪೌಡರ್ ನಲ್ಲಿ 9 ತರಹದ ನೈಸರ್ಗಿಕ ಧಾನ್ಯಗಳನ್ನ ಬಳಸಿ ಪೌಡರ್ ಅನ್ನು ತಯಾರಿಸುತ್ತಿದ್ದು ಇದು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಇದನ್ನ ಬಳಸಿ ಎಲ್ಲರೂ ಆರೋಗ್ಯವನ್ನ ಚೆನ್ನಾಗಿ ಇಟ್ಟಿಕೊಳ್ಳಿ ಎಂದು ತಿಳಿಸಿದರು.
ಡಾ. ಪುನೀತ್ ರಾಜಕುಮಾರ್ ಮರಣ ಹೊಂದಿ ಇಂದಿಗೆ ನಾಲ್ಕು ವರ್ಷ ಕಳೆದಿದೆ.ಪ್ರತಿ ತಿಂಗಳ 29ನೇ ತಾರೀಕು ಸಿರಿಧಾನ್ಯ ಪೌಡರ್ ಹಾಲನ್ನು ವಿತರಣೆ ಮಾಡುವುದರ ಮೂಲಕ ಸಿರಿಧಾನ್ಯ ಬಳಕೆಯ ಮಹತ್ವ ಹಾಗೂ ಸೇವೆಯನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ಹೈರಿಗೆ ಶಿವರಾಜ್ ಮಾತನಾಡಿ, ನಮ್ಮ ಮೈಸೂರಿನ 24ನೇ ದೊರೆ ನಾಲ್ವಡಿಯವರು. ಕನ್ನಂಬಾಡಿ ಕಟ್ಟೆ, ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ನಿರ್ಮಾಣ, ರೈಲು ಮಾರ್ಗ, ವಿದ್ಯುತ್, ಸಾಬೂನು ತಯಾರಿಕಾ ಘಟಕ ಸ್ಥಾಪನೆ ಮಾಡಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಸಲ್ಲುತ್ತದೆ. ರೈತರಿಗೆ ಬಡವರಿಗೆ ವಿದ್ಯಾರ್ಥಿಗಳಿಗೆ ಉತ್ತಮ ಆಡಳಿತವನ್ನು ಕೊಟ್ಟ ಧೀಮಂತ ನಾಯಕ ಇಂತಹ ನಾಯಕರ ಜನ್ಮ ದಿನದಲ್ಲಿ ಆರೋಗ್ಯ ತಪಾಸಣಾ ಶಿಬಿರ ಹಾಗೂ ಆರೋಗ್ಯದ ದೃಷ್ಟಿಯಿಂದ 10 ವರ್ಷದಿಂದ ಮಿಲ್ ನಾಗರಾಜು ಅವರು ಪ್ರಕೃತಿಯಲ್ಲಿ ಬೆಳೆಯುವ ಸಿರಿಧಾನ್ಯಗಳ ಮೂಲಕ ಬಾದಾಮಿ ಪೌಡರ್ ತಯಾರಿಸಿದ್ದು ಎಲ್ಲರೂ ಟೀ, ಕಾಫಿ,ಸಾರಾಯಿ ಕುಡಿಯೋ ಬದಲು ಬಾದಾಮಿ ಪೌಡರ್ ನ ಹಾಲನ್ನು ಕುಡಿದು ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು ಎಂದು ಸಲಹೆ ಹೇಳಿದರು.
ಎಚ್.ಡಿ ಕೋಟೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕ ಪ್ರವೀಣ್ ಗೌಡರ್, ಸಮತಾ ಟ್ರಸ್ಟ್ ಅಧ್ಯಕ್ಷ ಮಲಾರ ರವೀಂದ್ರ, ಸ್ವರಾಲಯ ಮ್ಯೂಸಿಕಲ್ ಟ್ರಸ್ಟ್ ಅಧ್ಯಕ್ಷ ಸಿದ್ದರಾಜು, ಐಡಿಯಾ ವೆಂಕಟೇಶ್, ಭಜರಂಗಿ ವಿನಯ್, ಕುಮಾರಸ್ವಾಮಿ, ನಾಗೇಶ್, ಸೋಮು, ನವೀನ್, ಮರಿಲಿಂಗಯ್ಯ, ಅಶೋಕ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

