ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸದ್ಗುರು ದೊರೆಯುವುದು ಸುಲಭವಲ್ಲ. ದೊರೆತ ಗುರುವನ್ನು ಆರಾಧಿಸಬೇಕು. ಗುರುವಿನ ಬಗ್ಗೆ ಸಂಶಯ ಬೇಡ. ನಾವು ಯಾರ ಸಂಗ ಮಾಡುತ್ತೇವೆಯೋ ಅವರಂತಾಗುತ್ತೇವೆ. ಅದಕ್ಕೆ ಸಂಗ ಎನ್ನುವುದು ಬಹಳ ಮುಖ್ಯ ಎಂದು ವಿಜಯಪುರದ ಕೈವಲ್ಯ ಕುಟೀರದ ಪ್ರಣವ ಪ್ರಕಾಶ ಮಹಾರಾಜರು ಹೇಳಿದರು.
ಸಿಂದಗಿ ನಗರದ ಸಾರಂಗಮಠದ ಲಿಂ.ಸಿದ್ದಲಿಂಗಮಹಾಸ್ವಾಮೀಜಿ ಕಾನ್ಫರೆನ್ಸ್ ಹಾಲ್ನಲ್ಲಿ ಹುಣ್ಣಿಮೆ ನಿಮಿತ್ತ ಹಮ್ಮಿಕೊಂಡ ೩೫೫ನೇ ಸದ್ವಿಚಾರ ಗೋಷ್ಠಿಯಲ್ಲಿ ಉನಸ್ಯಾಸ ನೀಡಿ ಮಾತನಾಡಿದ ಅವರು, ನಾನೇ ಬ್ರಹ್ಮ ಎನ್ನುವ ಸತ್ಯವನ್ನು ತಿಳಿದು ಬದುಕಬೇಕು. ನಾನೇ ಬ್ರಹ್ಮ ಎನ್ನುವುದು ದೃಢವಾಗಬೇಕಾದರೆ ಒಳ್ಳೆಯವರ ಸಹವಾಸ ಮಾಡಬೇಕು. ಸಮಾಜದ ಓರೆ ಕೋರೆಗಳನ್ನು ತಿದ್ದುವವರು ನಿಜವಾದ ಸಮರ್ಥನೆಯ ಗುರುಗಳು. ಈ ಸಾಲಿನಲ್ಲಿ ಸಿಂದಗಿಯ ಸಾರಂಗಮಠದ ಡಾ.ಪ್ರಭುಸಾರಂಗದೇವರು ಸಮರ್ಥ ಗುರುಗಳಾಗಿದ್ದಾರೆ. ಅವರನ್ನು ಪಡೆದ ನಾವು ನಿವೆಲ್ಲ ಧನ್ಯರು ಎಂದರು.
ಈ ವೇಳೆ ಸಾರಂಗಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಪಾವನ ಸಾನಿಧ್ಯ ವಹಿಸಿದ್ದರು. ಸಮ್ಮುಖವನ್ನು ಉತ್ತರಾಧಿಕಾರಿಗಳಾದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಚ್.ಟಿ.ಕುಲಕರ್ಣಿ, ಶರಣಗೌಡ ಬಿರಾದಾರ, ವಿರೇಶ ಜೋಗುರ, ಮುಕ್ತಾಯಕ್ಕ ಕತ್ತಿ, ಬಿ.ಜಿ.ಮಠ, ಚೆನ್ನಪ್ಪ ಕತ್ತಿ, ನೀಲಾಂಬಿಕಾ ಕತ್ತಿ, ಅಶೋಕ ವಾರದ, ಜಿ.ಎಸ್.ಜಂಗಿನಮಠ ಸೇರಿದಂತೆ ಶ್ರೀಮಠದ ಭಕ್ತರು ಇದ್ದರು.
ಡಾ.ಶರಣಬಸವ ಜೋಗುರ ಸ್ವಾಗತಿಸಿದರು. ಶಕುಂತಲಾ ಹಿರೇಮಠ ಪ್ರಾರ್ಥಿಸಿದರು. ಪೂಜಾ ಹಿರೇಮಠ ನಿರೂಪಿಸಿದರು.

