ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ತೆನೆಹಳ್ಳಿ ಗ್ರಾ.ಪಂ ವ್ಯಾಪ್ತಿಯ ಕಾಲುವೆ ಹೂಳು ತೆಗೆಯುವ ಕಾಮಗಾರಿ ಸ್ಥಳಕ್ಕೆ ತಾ.ಪಂ ಇಒ ಮಹಾದೇವಪ್ಪ ಏವೂರ ಭೇಟಿ ನೀಡಿ ಕಾಮಗಾರಿ ಸ್ಥಳದಲ್ಲಿರುವ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ ಮಾಡಿದರು.
ಸದರಿ ಕಾಮಗಾರಿ ಸ್ಥಳದಲ್ಲಿ ೧೮ ಜನ ಮಹಿಳೆಯರು ೪ ಜನ ಪುರುಷರು ಒಟ್ಟು ೨೦ ಜನ ಕೂಲಿಕಾರರು ಹಾಜರಿದ್ದರು.
ಇಒ ಮಹಾದೇವಪ್ಪ ಏವೂರ ಮಾತನಾಡಿ ಬೇಸಿಗೆ ಅವಧಿಯಲ್ಲಿ ತಾಪಮಾನ ಹೆಚ್ಚಾಗಿರುವದರಿಂದ ಕೂಲಿಕಾರರ ಹಿತದೃಷ್ಠಿಯಿಂದ ಪ್ರತಿಶತ ೩೦ ರಷ್ಟು ಕಡಿತ ಮಾಡಿ ಅನುಕೂಲ ಮಾಡಲಾಗಿದೆ. ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರಿಗೂ ಕೆಲಸದಲ್ಲಿ ರಿಯಾಯತಿಯನ್ನು ನೀಡಲಾಗಿದೆ. ಹಾಗೂ ಪ್ರತಿನಿತ್ಯ ಕಿಲಸಕ್ಕೆ ಬರುವಂತೆ ತಿಳಿಸಿ ಪ್ರತಿ ಕುಟುಂಬಕ್ಕೆ ೧೦೦ ದಿನಗಳ ಉದ್ಯೋಗವನ್ನು ಪಡೆದುಕೊಳ್ಳಿ ಎಂದು ಮಾಹಿತಿ ನೀಡಲಾಗಿದೆ ಎಂದರು.
ಹಾಗೂ ಪ್ರತಿನಿತ್ಯ ಎರಡು ಹೊತ್ತು ಎನ್ ಎಂ ಎಂ ಎಸ್ ಮೂಲಕ ಫೇಸ್ ಅಥೆಂಟಿಫಿಕೇಶನ್ ಮೂಲಕ ಹಾಗರಾತಿ ಪಡೆದು ನಿಮಗೆ ಕೂಲಿ ಮೊತ್ತ ಪಾವತಿಸಲಾಗುವದು ಎಂದರು.
ಪಂಚಾಯತ ಎಲ್ಲಾ ಸಿಬ್ಬಂದಿಗಳುಎಲ್ಲಾ ಕೂಲಿಕಾರರು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಅಡಿಯಲ್ಲಿ ಹೆಚ್ಚಿನ ವಿಮಾ ರಕ್ಷಣೆಗಾಗಿ ನೋದಾವಣಿ ಮಾಡಿಕೊಳ್ಳಲು ಕೂಲಿಕಾರರಿಗೆ ಪ್ರೇರೆಪಿಸಿದರು.
ತದನಂತರ ಗ್ರಾ.ಪಂ ಗೆ ಭೇಟಿ ನೀಡಿ ಸಿಬ್ಬಂದಿಗಳ ಹಾಜರಾತಿ ಸಿಬ್ಬಂದಿಗಳ ಕಾರ್ಯ ವೈಖರಿ ಕುಡಿಯುವ ನೀರಿನ ಸಮಸ್ಯೆ ತೆರಿಗೆ ವಸೂಲಾತಿ ಇಕೆ ವಾಯ್ ಎಸ್ ಪ್ರಗತಿ ಇತರ ವಿಷಯಗಳ ಕುರಿತು ಚರ್ಚಿಸಿ ಅಭಿವೃದ್ದಿ ಅಧಿಕಾರಿಗಳಿಗೆ ಪ್ರಗತಿ ಸಾದಿಸಲು ತಿಳಿಸಿದರು.
ತಾಲೂಕು ಐಸಿಇ ಸಂಯೋಜಕರು ಪಿಡಿಒ ಶೋಭಾ ಹೊರಪೇಟೆ ಗ್ರಾ.ಪಂ ಸಿಬ್ಬಂದಿ ಗ್ರಾಮ ಕಾಯಕ ಮಿತ್ರ ನರೇಗಾ ಯೋಜನೆಯ ಕೂಲಿಕಾರರು ಉಪಸ್ಥಿತರಿದ್ದರು.

