ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಇತ್ತಿಚೆಗೆ ನೇಪಾಳದಲ್ಲಿ ಯುಥ್ ಗೇಮ್ಸ್ ಕೌನ್ಸಿಲ್ ಇಂಡಿಯಾ ಸಹಯೋಗದಲ್ಲಿ ಯುಥ್ ಗೇಮ್ಸ್ ಫೌಂಡೇಷನ್ ಹಮ್ಮಿಕೊಂಡಿದ್ದ ೮ನೇ ಸಾಲಿನ್ ಯುಥ್ ಗೇಮ್ಸ್ ಇಂಡೋ-ನೇಪಾಳ ಇಂಟರನ್ಯಾಷನಲ್ ಸೀರೀಸ್-೨೦೨೬ ಕ್ರೀಡಾಕೂಟದಲ್ಲಿ ಪಟ್ಟಣದ ಬಸವ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿ ಮೊಹ್ಮದ್ ಜೀಶಾನ್ ರಿಸಾಲ್ದಾರ್ ಅಂಡರ್ ೧೦ ವಿಭಾಗದಲ್ಲಿ ೧೦೦ ಮೀಟರ್ ಓಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಈಗ ಮಲೇಷ್ಯಾದಲ್ಲಿ ನಡೆಯುವ ಸೌಥ್ ಏಷಿಯನ್ ಯುಥ್ ಗೇಮ್ಸ್ ಇಂಟರ್ ನ್ಯಾಷನಲ್ ಚಾಂಪಿಯನ್ಶಿಪ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾನೆ.
ಆರಂಭಮಟ್ಟದಿಂದಲೇ ಅಥ್ಲೇಟಿಕ್ಸ್ ವಿಭಾದಲ್ಲಿ ಕ್ರೀಡಾ ಸಾಧನೆಗೈಯುತ್ತಿರುವ ಜೀಶಾನ ರಿಸಾಲ್ದಾರ್ ಮೊನ್ನೆಯಷ್ಟೆ ಗೋವಾದಲ್ಲಿ ಹಮ್ಮಿಕೊಂಡಿದ್ದ ಯುಥ್ ಗೇಮ್ಸ್ ಕೌನ್ಸಿಲ್ ಇಂಡಿಯಾ ಕ್ರೀಡಾ ಕೂಟದಲ್ಲಿ ಕರ್ನಾಟಕ ಪರವಾಗಿ ಭಾಗವಹಿಸಿ ೧೦೦ ಮೀಟರ್ದಲ್ಲಿ ಗೋಲ್ಡ್ ಮೇಡಲ್ ಪಡೆದು ರಾಜ್ಯದ ಹೆಸರನ್ನು ತಂದಿದ್ದ. ಸಧ್ಯ ಇಂಡೋ ನೇಪಾಳ ಇಂಟರ್ ನ್ಯಾಷನಲ್ ಸೀರೀಸ್ ನಲ್ಲಿ ಮತ್ತೆ ೧೦೦ ಮೀಟರ್ ಓಟವನ್ನು ೧೪:೫೬ ಸೆಕೆಂಟ್ನಲ್ಲಿ ಪೂರ್ಣಗೊಳಿಸಿ ಪ್ರಥಮ ಸ್ಥಾನವನ್ನು ಪಡೆದು ದೇಶದ ಕೀರ್ತೀಯನ್ನು ಹೆಚ್ಚಿಸಿದ್ದಾನೆ.
ತಾಲೂಕಿನ ಸರೂರ ಗ್ರಾಮದ ಕಬ್ಬಡಿ ಪರಿಣಿತ ದೈಹಿಕ ಶಿಕ್ಷಕರಾದ ಸಿದ್ರಾಮಪ್ಪ ಭಜಂತ್ರಿ ನೇತೃತ್ವದಲ್ಲಿ ಜೀಶಾನ ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಯ ಸಾಧಸಿದಕ್ಕೆ ಶಾಲೆಯ ಪ್ರಿನ್ಸಿಪಾಲ್ ಪ್ರಭಾ ಚಿನಿವಾರ, ಹಾಗೂ ಚೇರ್ಮನ್ ಶಿವುಕುಮಾರ್ ಹರ್ಲಾಪುರ್ ಹಾಗೂ ಸಿಬ್ಬಂದಿ ವರ್ಗ ಶುಭ ಹಾರೈಸಿದ್ದಾರೆ. ಶಾಲೆಯ ಶಿಕ್ಷಕಿ ಪ್ರಿಯಾಂಕಾ ಹೊಸಮನಿ ಮಕ್ಕಳೊಂದಿಗೆ ನೇಪಾಳಕ್ಕೆ ತೆರಳಿ ಸಾಥ ನೀಡಿದಕ್ಕೆ ಪೋಷಕರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಅಥ್ಲೇಟಿಕ್ಸ್ನಲ್ಲಿ ಆರಂಭದಲ್ಲಿಯೇ ಸಾಧನೆಗೈಯುತ್ತಿರುವ ಜೀಶಾನ ಮುಂದೆ ಖೇಲೋ ಇಂಡಿಯಾಗೆ ಆಯ್ಕೆಯಾಗಿ ಭಾರತಪರವಾಗಿ ಇತರ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಏಷಿಯಾ ಗೇಮ್ಸ್ ಆಗಲಿ, ಓಲಂಪಿಕ್ ಆಗಲಿ, ಕಾಮವೆಲ್ಥ್ ಗೇಮ್ಸ್ ದಂತಹ ಅಂತರಾಷ್ಟ್ರೀಯ ಕ್ರೀಡಾಚಟುವಟಿಕೆಯಲ್ಲಿ ಭಾಗವಹಸಿ ದೇಶದ ಕೀರ್ತಿಯನ್ನು ತರಲಿ ಎಂದು ಇಲ್ಲಿನ ಜನತೆ, ವಿವಿಧ ದಲಿತಪರ, ಪ್ರಗತಿಪರ ಸಂಘಟನೆಗಳು ಹಾಗೂ ಸಂಘ ಸಂಸ್ಥೆಗಳು ಶುಭಹಾರೈಸಿದ್ದಾರೆ.

