ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಮೇ 1 ರಿಂದ ಮೇ 3 ರವರೆಗೆ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
ಮೇ 1 ಶುಕ್ರವಾರರಂದು ಬೆ.10ಗಂ. ಬರಟಗಿ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯಡಿ ರೂ.734 ಲಕ್ಷ ವೆಚ್ಚದಲ್ಲಿ ಅರಕೇರಿ, ಬರಟಗಿ ಮತ್ತು ಹಂಚಿನಾಳ ಪಿ.ಎಚ್ ಹಾಗೂ ಬೆ.11ಗಂ. ಲೋಹಗಾಂವ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ರೂ.978 ಲಕ್ಷ ವೆಚ್ಚದಲ್ಲಿ ಲೋಹಗಾಂವ, ಟಕ್ಕಳಕಿ, ಹುಬನೂರ, ಜಾಲಗೇರಿ, ಇಟ್ಟಂಗಿಹಾಳ, ಸಿದ್ಧಾಪೂರ ಗ್ರಾಮಗಳಲ್ಲಿ ಸರಣಿ ಬಾಂದಾರ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿ, ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಲಿರುವ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಅವರು ಈ ಬಾಂದಾರ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ನಂತರ ಸಾ.5ಗಂ ತಿಗಣಿಬಿದರಿ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ರೂ.984 ಲಕ್ಷ ವೆಚ್ಚದಲ್ಲಿ ಕಾಖಂಡಕಿ, ಬಬಲೇಶ್ವರ ಮಮದಾಪೂರ ಬಬಲೇಶ್ವರ, ಯಕ್ಕುಂಡಿ, ತಿಗಣಿಬಿದರಿ ತಾಜಪೂರ.ಎಚ್ ಸರಣಿ ಬಾಂದಾರ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
ಮೇ 2 ಶನಿವಾರ ಬೆ.10ಗಂ. ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಪಟ್ಟಣ ಪಂಚಾಯತ ಕಟ್ಟಡ, ಪೊಲೀಸ್ ಸ್ಟೇಶನ್ ಕಟ್ಟಡ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡ ಉದ್ಘಾಟಿಸಿ, ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ಮ.2ಗಂ. ತಾಳಿಕೋಟೆ ರಸ್ತೆಯಲ್ಲಿರುವ ಹುಂಡೇಕಾರ ಹಾಲ್ ನಲ್ಲಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಮೇ 3 ರವಿವಾರ ಬೆ.10.ಗಂ ಯಕ್ಕುಂಡಿ ಗ್ರಾಮದಲ್ಲಿ ಪಿ.ಡಬ್ಲೂ.ಡಿ ರೂ.300 ಲಕ್ಷ ವೆಚ್ಚದಲ್ಲಿ ವಿಜಯಪುರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ-34 ಕಿ.ಮೀ.0.00 ರಿಂದ 3.00 ವರೆಗೆ ಯಕ್ಕುಂಡಿ -ಸಂಗಾಪೂರ.ಎಚ್.ಎಚ್ – ಶೇಗುಣಸಿ- ಕಾಖಂಡಕಿ ವ್ಹಾಯಾ ಹರಳಯ್ಯನ ಗುಂಡವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಲಿದ್ದಾರೆ.
ಸಂ.5ಗಂ. ದೇವರಗೆಣ್ಣೂರ ಗ್ರಾಮದಲ್ಲಿ ಪಿ.ಡಬ್ಲೂ.ಡಿ ಇಲಾಖೆಯಡಿ ರೂ.400 ಲಕ್ಷ ವೆಚ್ಚದಲ್ಲಿ ಕಂಬಾಗಿ-ದೇವರಗೆಣ್ಣೂರ ಗ್ರಾಮದವರೆಗೆ ಕಿ.ಮೀ4.00 ರಿಂದ 8.00ರ ವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಲಿದ್ದಾರೆ.
ನಂತರ ಸಂ.6ಗಂ. ಮದಗುಣಕಿ ಗ್ರಾಮದ ಶಿವಣ್ಣವರ ವಸ್ತಿಯಿಂದ ಕೊಡಬಾಗಿ ರಸ್ತೆ ವರೆಗೆ ಪಿ.ಡಬ್ಲೂ.ಡಿ ಇಲಾಖೆಯಡಿ ರೂ.150 ಲಕ್ಷ ವೆಚ್ಚದಲ್ಲಿ 3ಕಿ.ಮೀ ರಸ್ತೆ ಸುಧಾರಣೆ, ಪ್ರಾಥಮಿಕ ಶಾಲಾ ಕಟ್ಟಡ ಉದ್ಘಾಟನೆ ಹಾಗೂ ಸಿ.ಸಿ ರಸ್ತೆ ಕಾಮಗಾರಿ ಭೂಮಿಪೂಜೆ ನೆರವೇರಿಸಿ, ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಚಿವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

