ಉದಯರಶ್ಮಿ ದಿನಪತ್ರಿಕೆ
ಅಥಣಿ: ಪಟ್ಟಣದ ಹೊರವಲಯದಲ್ಲಿರುವ ಶಿವಯೋಗಿ ನಗರದ ಅಧಿಕೃತ ನಾಮಫಲಕ ಅನಾವರಣ ಕಾರ್ಯಕ್ರಮವು ಅಥಣಿ ಶೆಟ್ಟರ ಮಠದ ಮರುಳಸಿದ್ಧ ಮಹಾಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಇತ್ತೀಚೆಗೆ ಅದ್ಧೂರಿಯಾಗಿ ಜರುಗಿತು.
ಈ ವೇಳೆ ಆಶೀರ್ವಚನ ನೀಡಿದ ಅವರು, ನಗರದ ನಿವಾಸಿಗಳಲ್ಲಿ ಒಗ್ಗಟ್ಟು ಮತ್ತು ಅಭಿವೃದ್ಧಿಯ ಚಿಂತನೆ ಸದಾ ಇರಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಿವಾನಂದ ದಿವಾನಮಳ, “ಅಥಣಿಯ ಪುಣ್ಯಭೂಮಿಯಲ್ಲಿರುವ ಈ ಈ ನಗರದಲ್ಲಿ ಈಗಾಗಲೇ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಬರುವ ದಿನಗಳಲ್ಲಿ ನಾನು ಮತ್ತು ಎಸ್. ಕೆ. ಬೂಟಾಳಿ ಅವರು ಒಗ್ಗಟ್ಟಿನಿಂದ ಶ್ರಮಿಸಿ, ನಗರಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬದ್ಧರಾಗಿದ್ದೇವೆ,” ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಕೇದಾರೆಪ್ಪಾ ತೇರದಾಳ, ಈಶ್ವರ ಮಾಳಿ, ಸದಾಶಿವ ಬುಟಾಳಿ, ಬಸವರಾಜ ಬುಟಾಳಿ, ಮಹಾದೇವ ಹಳ್ಳದಮಳ, ಬಸವರಾಜ ಬಕಾರಿ, ಗಂಗಾಧರಯ್ಯಾ ಹಿರೇಮಠ, ಬಾಬು ಜೋಗಣಿ, ಗಿರೀಶ ದಿವಾನಮಳ, ಮೈಬುಬ ಬಾಗವನ, ಅಪ್ಪು ಕಿವಟಿ, ಚಿದ್ದು ಹಳ್ಳದಮಳ, ಅಲ್ಲಪ್ಪಾ ತೇರದಾಳ, ಗಣಪತಿ ಲಗಳಿ ಹಾಗೂ ‘ಯೂತ್ ಆಫ್ ಶಿವಯೋಗಿ ನಗರ ಸೇವಾ ಸಂಘ (ರಿ) ಅಥಣಿ’ಯ ಎಲ್ಲಾ ಸದಸ್ಯರು ಮತ್ತು ನಗರದ ನಿವಾಸಿಗಳು ಉಪಸ್ಥಿತರಿದ್ದರು.

