ಲೇಖನ:- ಮಲಿಕ್ ಎಲ್. ಜಮಾದಾರ ಲೇಖಕರು, ಉಪನ್ಯಾಸಕರು ವಿಜಯಪುರ ಮೊ: 9743129744
ಉದಯರಶ್ಮಿ ದಿನಪತ್ರಿಕೆ
ಬದುಕಿನಲ್ಲಿ ಗೋಲ್ಡನ್ ಲೈಫ್ ಎಂದ್ರೆ ಅದು ಸ್ಟುಡೆಂಟ್ ಲೈಫ್. ಇಂತಹ ಗೋಲ್ಡನ್ ಲೈಫು ಹಾಳು ಮಾಡಿಕೊಳ್ತಾರೆ ಅಂದ್ರೆ ನಿಜಕ್ಕೂ ದುರದೃಷ್ಟಕರ ಸಂಗತಿ.

ಹೌದು, ವಿದ್ಯಾರ್ಥಿಗಳು ತಮ್ಮ ಜೀವನದ ಅತ್ಯಮೂಲ್ಯವಾದ ಘಟ್ಟವಾಗಿದೆ. ಭವಿಷತ್ತಿನಲ್ಲಿ ಉನ್ನತ ಸ್ಥಾನ ಪಡೆದುಕೊಳ್ಳಬೇಕಾದರೆ ಸತತ ಪರಿಶ್ರಮ ಅಗತ್ಯವಾಗಿದೆ, ವಿಪರ್ಯಾಸವೆಂದರೆ ಇಂದಿನ ವಿಧ್ಯಾರ್ಥಿಗಳಲ್ಲಿ ಸ್ವಲ್ಪ ಬುದ್ದಿ ಬಂದರೆ ಸಾಕು ಅದರಲ್ಲಿ ಎಸ್ಎಸ್ಎಲ್ ಸಿ, ಪದವಿ ಪೂರ್ವ ಶಿಕ್ಷಣ ಹಂತಗಳು ವಿಧ್ಯಾರ್ಥಿಗಳ ಭವಿಷ್ಯತ್ತಿನ ಪ್ರಮುಖ ಅಡಿಗಲ್ಲಾಗಿದೆ. ಇಂತಹ ಸಂಧರ್ಭದಲ್ಲಿ ವಿದ್ಯಾಥಿಗಳು ಬಾಹ್ಯ ಪ್ರಲೋಭನೆಗಳಿಗೆ ದಾಸರಾಗಿ ದಾರಿ ತಪ್ಪುತ್ತಿರುವುದು ನಿಜಕ್ಕೂ ಶೋಚನೀಯವಾಗಿದೆ, ನಮ್ಮ ನೂತನ ಜೀವನಶೈಲಿ ನಮಗೆ ಮಾರಕವಾಗಬಹುದು. ಬಲಾವಣೆ ಪರಿವರ್ತನೆಯ ನಿಯಮ, ಹಾಗಂತ ನಮ್ಮ ಸಂಸ್ಕೃತಿ ಅಲ್ಲಗಳೆಯುವಂತಿಲ್ಲ, ಇಂದಿನ ಯುವಕರಲ್ಲಿ ಸುಸಂಸ್ಕೃತಿಯ ಕೊರತೆ ಎದ್ದು ಕಾಣುತ್ತಿದೆ. ನೂತನ ತಂತ್ರಜ್ಞಾನ ೫ ಜಿ ಬಂದ್ಮೇಲಂತು ಮುಗಿತು ಕತೆ, ಮನೆಯಲ್ಲಿ, ಶಾಲಾ ಕಾಲೇಜಿನಲ್ಲಿ ಎಲ್ಲಂದರಲ್ಲಿ ಮೂಬೈಲ್ನಲ್ಲೆ ನಿರತರಾಗಿದ್ದಾರೆ. ವಿದ್ಯಾರ್ಥಿಗಳು ಅಗತ್ಯಕ್ಕನುಗುಣವಾಗಿ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಮೊಬೈಲ್ ಬಳಸಿಕೊಂಡು ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ತೊಡಗಿ ನಿರಂತರ ಅಧ್ಯಯನಶೀಲರಾಗಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕಾಗಿದೆ. ವಿದ್ಯಾರ್ಥಿ ಜೀವನ ಮರಳಿಬಾರದು. ಇಂತಹ ಸಂದರ್ಭದಲ್ಲಿ ಕೌಶಲ್ಯದ ಜೊತೆಗೆ ಉನ್ನತ ಹುದ್ದೆಗೆ ತಲುಪುವ ಹಪಾಹಪಿ ನಿಮ್ಮಲಿರಲಿ. ವಿದ್ಯಾರ್ಥಿ ಜೀವನ ವ್ಯರ್ಥವಾಗದಿರಲಿ.

ವಿದ್ಯಾರ್ಥಿಗಳ ಜೀವನದಲ್ಲಿ ದೈಹಿಕ, ಮಾನಸಿಕತೆಗೆ ಸಂಚಕ ಉಂಟಾಗುವ ಮೊಬೈಲ್ ಸೀಮಿತಕ್ಕಿಂತ ಅತಿಯಾದ ಬಳಕೆ ಬೇಡ, ಅಲ್ಲದೆ ಓದಬೇಕಾಗದ ಸಮಯದಲ್ಲಿ ಪ್ರೇಮಪಾಶದಲ್ಲಿ ಬೀಳುವುದು ಇಳಿವಯಸ್ಸಿನಲ್ಲಿ ಇದು ದುರಂತದ ಪರ್ಯಾವ್ಯಸನವಾಗುವುದು ಅನಪೇಕ್ಷಿತ ಬೆಳವಣಿಗೆಯಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಇಂತಹ ಪ್ರಕರಣಗಳು ಅತಿಯಾಗಿವೆ ಕಲಿಕಾ ಹಂತದಲ್ಲಿ ಪ್ರೇಮಕ್ಕೆ ಬಲಿಯಾಗುವುದು ಶೋಚನೀಯ ಸಂಗತಿಯಾಗಿದೆ. ತಂದೆ ತಾಯಿಗಳು ಮಕ್ಕಳು ಏನು ಮಾಡುತ್ತಿದ್ದಾರೆ ಮನೆಯಲ್ಲಿ, ಮೂಬೈಲ್ನಲ್ಲಿ, ಶಾಲಾ ಕಾಲೇಜಿನಲ್ಲಿ ಪ್ರತಿ ಕ್ಷಣವೂ ಅವರನ್ನು ಗಮನಿಸುವಂತಾಗಬೇಕು ಅಂದಾಗ ಮಕ್ಕಳನ್ನು ಹತೋಟಿಯಲ್ಲಿ ಇಡಲು ಸಾಧ್ಯ.
ಮುಖ್ಯವಾಗಿ ನಮ್ಮ ದೇಶದ ಸಂಸ್ಕೃತಿ ಅತ್ಯಮೂಲ್ಯವಾದದ್ದು ವಿವಿಧತೆಯಲ್ಲಿ ಏಕತೆ ಹೊಂದಿರುವ ಹಾಗೂ ಪವಿತ್ರವಾಗಿರುವ ಸಂಸ್ಕೃತಿಯಾಗಿದೆ, ಅಂತಹ ಪವಿತ್ರ ಸಂಸ್ಕೃತಿಯನ್ನು ಹಾಳು ಮಾಡುತಿರುವ ಈ ಪಾಶ್ಚಾತ್ಯರ ಸಂಸ್ಕೃತಿಗೆ ನನ್ನ ಧಿಕ್ಕಾರ. ಆಧುನೀಕರಣದಿಂದ ಪಾಶ್ಚಾತ್ಯರ ಸಂಸ್ಕೃತಿಗಳು ನಮ್ಮಲ್ಲಿ ತಾಂಡವಾಡುತ್ತಿವೆ. ನಮ್ಮ ಸಂಸ್ಕೃತಿ ನಮ್ಮ ಪರಂಪರೆಯನ್ನು ಮತ್ತು ಹಿರಿಯರು ನಮಗೆ ನೀಡಿದ ಸಂಸ್ಕಾರಗಳನ್ನು ನಾವು ಮುನ್ನಡೆಸಿಕೊಂಡು ಹೋಗಬೇಕಾಗಿದೆ.ಅವರು ನೀಡಿದ ಸಂಸ್ಕಾರ ಅವರ ವಿಚಾರಧಾರೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ.

ಅನ್ಯ ಸಂಸ್ಕೃತಿಗೆ ಮಾರುಹೋಗಿ ಸಮಾಜದಲ್ಲಿ ಯುವಪೀಳಿಗೆಯ ಮೇಲೆ ಗಂಭಿರವಾಗಿ ಪರಿಣಾಮ ಬೀರುತ್ತಿರುವುದು ನಿಜಕ್ಕೂ ಖೇದಕರ ಸಂಗತಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸ ಕಡೆಗೆ ಲಕ್ಷವೇ ಇಲ್ಲದಂತಾಗಿದೆ. ಹೀಗಾಗಿ ಯುವಕರಲ್ಲಿ ನೈತಿಕ ಶಿಕ್ಷಣದಿಂದ ವಂಚಿತರಾಗುತ್ತದ್ದಾರೇನೋ ಎಂದು ಭಾಸವಾಗುತ್ತಿದೆ. ವಿಧ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಲ್ಲಿ ವಿಷಯವಾರು ಭೋಧನೆಯ ಜೊತೆ ಜೊತೆಗೆ ನೈತಿಕ ಶಿಕ್ಷಣದ ಅರಿವು ಮೂಡಿಸುವುದು ಸೂಕ್ತವಾಗಿದೆ.ಅತ್ಯಾಚಾರ ಕೊಲೆ ಇನ್ನಿತರ ಅಹಿತಕರ ಘಟನೆ ಸಂಭವಿಸುವುದಕ್ಕಿಂತ ಮುಂಚಿತವಾಗಿ ಅನಪೇಕ್ಷಿತ ಘಟನೆಗಳು ಸಂಭವಿಸಿದಾಗ ಮಾತ್ರ ಚರ್ಚೆಯ ಮುನ್ನಲೆಗೆ ಬರುತ್ತದೆಯೇ ವಿನಃ ಪ್ರಕರಣಗಳು ಬಿಸಿ ತಣ್ಣಗಾಗುತ್ತಿದ್ದಂತೆ ಚರ್ಚೆಯು ಮೂಲೆಗೆ ಸೇರುತ್ತದೆ. ಇದು ನಿಜಕ್ಕೂ ವಿಷಾದನೀಯ ಮಕ್ಕಳಲ್ಲಿ ವಿದ್ಯಾಭ್ಯಾಸ ಕುರಿತು ಹೆತ್ತವರು ಹದ್ದಿನ ಕಣ್ಣು ಇರಿಸದಿದ್ದಾಗ ಶಿಸ್ತು, ಸಂಯಮದ ಹಾದಿಯಲ್ಲಿ ಮಕ್ಕಳು ಭವಿಷ್ಯತ್ತಗೆ ಸಂಚಕಾರ ಒದಗುವ ಮೊದಲು ಎಚ್ಚೆತ್ತು ಆರೋಗ್ಯಕರ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ನುರಿತ ಶಿಕ್ಷಣ ತಜ್ಞರು, ಮನೋವೈದ್ಯರ, ಸಮಾಜ ವಿಜ್ಞಾನಿಗಳು ಹಾಗೂ ಮನಃ ಶಾಸ್ತ್ರಜ್ಞರ ಸರಿಯಾದ ಮಾರ್ಗದರ್ಶನವು ಅತ್ಯವಶ್ಯಕವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳುವುದು ನಮ್ಮೆಲ್ಲರ ಹೊಣೆಯಾಗಿದೆ.


