ವಿಶ್ವಶಾಂತಿ ಹಾಗೂ ವಿಶ್ವ ಕಲ್ಯಾಣಕ್ಕಾಗಿ ಉತ್ಸವ | ಪ. ಪೂ.1008 ಆಚಾರ್ಯ ಗುಣದರನಂದಿ ಮುನಿ ಮಹಾರಾಜರಿಂದ ವಿವರಣೆ
ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ವಿಶ್ವಶಾಂತಿ ಹಾಗೂ ವಿಶ್ವ ಕಲ್ಯಾಣಕ್ಕಾಗಿ ಒಂಬತ್ತು ದಿನಗಳ ಕಾಲ ಪಂಚಕಲ್ಯಾಣ ಪ್ರತಿಷ್ಠಾ ಮಹಾ ಮಹೋತ್ಸವ ಹಾಗೂ 1008 ಭಗವಾನ ಪಾರ್ಶ್ವನಾಥ ತೀರ್ಥಂಕರ ಮಹಾ ಮಸ್ತಾಭಿಷೇಕ ಮತ್ತು ಪುರಾತನ 1008 ಭಗವಾನ ಆದಿನಾಥ ತೀರ್ಥಂಕರ ಜಿನ ಮಂದಿರ ಜೀರ್ಣೋದ್ಧಾರಗೊಂಡಿರುವ ನಿಮಿತ್ತ ವಜ್ರ ಮಹೋತ್ಸವ ಕಾರ್ಯಕ್ರಮ ಜರುಗುತ್ತದೆ ಎಂದು ಪ. ಪೂ.1008 ಆಚಾರ್ಯ ಗುಣದರನಂದಿ ಮುನಿ ಮಹಾರಾಜರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ತಾಲೂಕಿನ ಆಲಗೂರ ಗ್ರಾಮದ ಜೈನ ಮಂದಿರದಲ್ಲಿ ಮಾತನಾಡಿದ ಅವರು, ವಿಶ್ವ ಶಾಂತಿ ಹಾಗೂ ವಿಶ್ವ ಕಲ್ಯಾಣಕ್ಕಾಗಿ 9 ದಿನಗಳ ಕಾರ್ಯಕ್ರಮ ಜರುಗುವುದು, ಇದೇ ದಿನಾಂಕ 23 ರಂದು ಧ್ವಜಾರೋಹಣ ಇಂದ್ರ ಸಭೆ, 24 ರಂದು ಗರ್ಭ ಕಲ್ಯಾಣ, 25 ರಂದು ಭಗವದ್ ಜನ್ಮ ಕಲ್ಯಾಣ, 26 ರಂದು ರಾಜ್ಯಾಭೀಷೇಕ,27 ರಂದು ದೀಕ್ಷಾ ಕಲ್ಯಾಣ, 28 ರಂದು ಕೇವಲಜ್ಞಾನ ಕಲ್ಯಾಣ,29 ರಂದು ನಿರ್ವಾಣ ಕಲ್ಯಾಣ, ದಿನಾಂಕ 30 ಹಾಗೂ 1/5/2026 ರಂದು ಮಹಾಮಸ್ತಾಭಿಷೇಕ ಕಾರ್ಯಕ್ರಮದಲ್ಲಿ 508 ಮಂಗಳ ಕಲಶಗಳಿಂದ ಭವ್ಯ ಮಹಾಮಸ್ತಾಭಿಷೇಕ ಜರುಗುವುದು.
9 ದಿನಗಳ ಈ ಕಾರ್ಯಕ್ರಮದಲ್ಲಿ ಎಲ್ಲ ಧರ್ಮದ ಸನ್ಯಾಸಿಗಳು, ಧಾರ್ಮಿಕ ಮುಖಂಡರು, ರಾಜಕೀಯ ಮುಖಂಡರು ಭಾಗವಹಿಸುವರು, ಪ್ರತಿದಿನ ಧಾರ್ಮಿಕ ಪ್ರವಚನ , ಸಂಗೀತ ಕಾರ್ಯಕ್ರಮವಿರುತ್ತದೆ, ಪ್ರತಿನಿತ್ಯ ಸುಮಾರು 50 ಸಾವಿರ ದಿನದ 1 ಲಕ್ಷ ಜನ ಪಾಲ್ಗೊಳ್ಳುವರು,30,000 ಸಾವಿರ ಜನ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ,
ಪ್ರತಿನಿತ್ಯ ಮೂರು ಹೊತ್ತು ನಿರಂತರ ಅನ್ನ ದಾಸೋಹದ ವ್ಯವಸ್ಥೆ ಮಾಡಲಾಗಿದೆ ಹಾಗೂ ಉಚಿತವಾಗಿ ಕಬ್ಬಿನ ಹಾಲಿನ ವ್ಯವಸ್ಥೆ ಮಾಡಲಾಗಿದೆ. ಆಲಗೂರ ಗ್ರಾಮದಲ್ಲಿರುವ ಪ್ರತಿಯೊಂದು ದೇವಸ್ಥಾನಕ್ಕೂ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ, ಈ ಒಂದು ಕಾರ್ಯಕ್ರಮಕ್ಕೆ ವಿಶೇಷ ಆಮಂತ್ರಿತರಾಗಿ ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ಸಂಸ್ಥಾನ ಮಠ ನಾಂದಣಿ, ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ನವಗ್ರಹ ತೀರ್ಥ ವರೂರ, ಆನಂದ ದೇವರು ಓಲೆ ಮಠ ಜಮಖಂಡಿ, ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು ಮುತ್ತಿನ ಕಂತಿಮಠ ಜಮಖಂಡಿ, ಮಲ್ಲಯ್ಯ ಮಠಪತಿ ಶ್ರೀ ಚಂದ್ರಗಿರಿ ದೇವಿ ಮಠ ಆಲಗೂರ, ಲಕ್ಷ್ಮಣ್ ಮುತ್ಯಾ ಶ್ರೀ ಧರಿದೇವರ ಮಠ ಆಲಗೂರ ಶ್ರೀಗಳು ಅನೇಕ ಶ್ರೀಗಳು ಸೇರಿದಂತೆ ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಚಿವರು ಶಾಸಕರು ಮಾಜಿ ಶಾಸಕರು ಪಾಲ್ಗೊಳ್ಳುವರು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ. ಪೂ.1008 ಆಚಾರ್ಯ ಕಲ್ಯಾಣ ಸಾಗರ ಮುನಿರಾಜರು, ವರ್ಧಮಾನ ನ್ಯಾಮಗೌಡ, ಪಿ.ಟಿ.ಉಪಾಧ್ಯೆ, ಆದಿನಾಥ ನರಸಗೊಂಡ, ಶ್ರೀಮಂತ ಖಿದ್ರಾಪೂರ, ಭರತೇಶ್ ಖಿದ್ರಾಪೂರ, ಅನ್ನೇಶ್ ಪರಮಗೊಂಡ, ಅಭಿನಂದನ್ ಪರಮಗೊಂಡ, ಶೀತಲ್ ಮಗದುಮ, ನೇಮಿನಾಥ್ ತೋನಶ್ಯಾಳ, ಬಾಹುಬಲಿ ಪರಮಗೊಂಡ ಇದ್ದರು.

