ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಮೋಹನ. ಭೀ ಕಟ್ಟಿಮನಿ ಅವರನ್ನು ದ ಸಾ ಪ ರಾಜ್ಯ ಘಟಕ ಬೆಳಗಾವಿ ವಿಭಾಗೀಯ
ಸಂಯೋಜಕರಾನ್ನಾಗಿ ನೇಮಕ ಮಾಡಲಾಗಿದೆ.
ಮೋಹನ. ಕಟ್ಟಿಮನಿಯವರು ವಿಜಯಪುರದ ದಲಿತಸಾಹಿತ್ಯ, ಶರಣ ಸಾಹಿತ್ಯ, ಸಾಂಸ್ಕೃತಿಕ ಚಿಂತನೆ ಹಾಗೂ ಸಾಮಾಜಿಕ ಸೇವೆಯಲ್ಲಿ ಸಕ್ರಿಯವಾಗಿ ಉತ್ತಮ ಸಂಘಟಕರಾಗಿ, ಭಾವ ಲಹರಿ, ಜೀವಂತ ಶವಗಳು ನಕ್ಕಾಗ, ಬರಡನಾಡಿನಲ್ಲಿ ಬಂಗಾರ ಬೆಳೆದವರು, ಚಾಣಕ್ಯ ಬಿರಾದಾರ ಬದುಕಿನ ಚಿತ್ರಣ, ವಿಸ್ಮಯದ ಬೆನ್ನೆರಿ, ವಚನ ಫಕೀರ ಮತ್ತು ಹರ್ಡೇಕರ ಮಂಜಪ್ಪ ನಾಟಕ, ಪದ್ಮಭೂಷಣ ಜನರಲ್ ಜಿ. ಜಿ. ಬೆವೂರ ಕೃತಿಗಳನ್ನು ರಚಿಸುವದರ ಮೂಲಕ 1001 ಬಸವಣ್ಣನವರ ವಚನಗಳನ್ನು ಕಂಠ ಪಾಠದ ಮೂಲಕ ಹೇಳು ವ ಮೂಲಕ ಅಕ್ಕಾ ಸಮ್ಮೇಳನದಲ್ಲಿ 2005ರಲ್ಲಿ ಭಾಗವಹಿಸಿ ಇಲ್ಲಿಯವರೆಗೆ ಬಸವ ತತ್ವದ ಮೇಲೆ ವಚನ ಸಾಹಿತ್ಯ ಕುರಿತು 900ಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದಾರೆ.
ಇದರೊಂದಿಗೆ ನಾಟಕ, ಸಾಕ್ಷಾಚಿತ್ರ ನಿರ್ಮಾಣದ ಮೂಲಕ ಸಾಮಾಜಿಕ ಜಾಗೃತಿಯ ಕಾರ್ಯ ಮಾಡುತ್ತಿರುವ ಇವರನ್ನು ದ ಸಾ ಪ ರಾಜ್ಯ ಘಟಕ ಪದಾಧಿಕಾರಿಗಳೆಲ್ಲ ಚರ್ಚಿಸಿ ಶ್ರೀಯುತರನ್ನು ದಸಾಪ ರಾಜ್ಯ ಘಟಕದ ವಿಭಾಗಿಯ ಸಂಯೋಜಕರನ್ನ ನೇಮಿಸಲಾಗಿದೆ ಎಂದು ದಸಾಪ ರಾಜ್ಯಧ್ಯಕ್ಷ ಅರ್ಜುನ್ ಗೋಲಸಂಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

