ಸಂಬಂದಿಸಿದ ಇಲಾಖೆಗೆ ಕ್ರಮಕೈಗೊಳ್ಳಲು ಆದೇಶಿಸಲು ಸಿಎಂ-ಡಿಸಿಎಂ ಗೆ ಕೊಲ್ಹಾರ ಪಟ್ಟಣ ಅಭಿವೃದ್ಧಿ ಹಿತಚಿಂತಕರ ವೇದಿಕೆ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಕೊಲ್ಹಾರ ಊರು ಮುಳಗಡೆಯಾಗಿ ಪುನರ್ವಸತಿ ಕೇಂದ್ರದಲ್ಲಿ ನೆಲೆನಿಂತು ಇಪ್ಪತೈದು ವರುಷ ಗತಿಸಿದರೂ ಸಂತ್ರಸ್ತರು ಸ್ವಂತ ಸೂರು ಕಟ್ಟಿಕೊಳ್ಳಲು ನಿವೇಶನಕ್ಕಾಗಿ ಅಲೆದಾಡುವದನ್ನು ತಪ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕ್ಷೇತ್ರದ ಶಾಸಕ ಸಚಿವ ಶಿವಾನಂದ ಪಾಟೀಲ ಸಂಬಂದಿಸಿದ ಇಲಾಖೆಗೆ ಕ್ರಮಕೈಗೋಳ್ಳಲು ಆದೇಶ ಮಾಡಬೇಕು ಎಂದು ಕೊಲ್ಹಾರ ಪಟ್ಟಣ ಅಭಿವೃದ್ಧಿ ಹಿತಚಿಂತಕರ ವೇಧಿಕೆಯ ರಾಮಣ್ಣ ಉಪ್ಪಲದಿನ್ನಿ, ವೀರಭದ್ರಪ್ಪ ಬಾಗಿ ಒತ್ತಾಯಿಸಿದರು.
ಈ ಕುರಿತು ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿ ಕರೆದು ಮಾತನಾಡಿದ ಅವರು ಪುನರ್ವಸತಿ ಇಲಾಖಾ ಅಧಿಕಾರಿಗಳು ಮಧ್ಯವರ್ತಿಗಳ ಜೊತೆ ಸೇರಿ ಕಾನೂನು ಬಾಹೀರವೂ ಅಥವಾ ಕಾನೂನು ಉಲಂಘನೆಯೋ ಗೊತ್ತಿಲ್ಲ ಅವರು ಮಾಡಿದ ತಪ್ಪನ್ನು ಸಂತ್ರಸ್ತರ ಮೇಲೆ ಹೊರಸಿರುವದು ಯಾಕೆ ಮುಳಗಡೆ ಸಂತ್ರಸ್ತರು ನಿವೇಶನದ ಹಕ್ಕುಪತ್ರ ಪಡೆದುಕೊಂಡು ಹಲವಾರು ವರುಷ ಕಳೆದಿವೆ ಆದರೆ ಈಗ ಇ ಸ್ವತ್ತು ಉತಾರೆ ಪಡೆಯಲು ಪಟ್ಟಣ ಪಂಚಾಯತಿಗೆ ಅರ್ಜಿ ಸಲ್ಲಿಸಿದರೆ ನೂರಾ ಎಂಟು ತೊಡಕುಗಳು ಸಂತ್ರಸ್ತರಿಗೆ ಎದುರಾಗಲು ಪುನರ್ವಸತಿ ಅಧಿಕಾರಿಗಳೆ ಕಾರಣರಾಗಿದ್ದು ತಕ್ಷಣವೇ ಸರಿಪಡಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಪಟ್ಟಣದಲ್ಲಿ ವಾಸಿಸುವ ನಿವಾಸಿಗಳು ಇ-ಸ್ವತ್ತನ್ನು ಪಡೆಯಲು ಕಾರ್ಯಾಲಯಕ್ಕೆ ತೆರಳಿದಾಗ ನಿಮ್ಮ ನಿವೇಶನ ಕಾನೂನು ಬಾಹೀರವಾಗಿದೆ. ಮಾಹಿತಿ ನಿಡಿಲ್ಲ .ಅಕ್ರಮವಾಗಿ ಪಡೆದುಕೊಂಡಿದ್ದಿರಿ. ಷರತ್ತು ಉಲ್ಲಂಘನೆಯಾಗಿದೆ. ಡಬಲ್ ಹಂಚಿಕೆಯಾಗಿದೆ ಆರ್ ಸಿ ಯಿಂದ ಆರ್ ಸಿ ಗೆ ಪಡೆದುಕೊಂಡಿದ್ದಿರಿ. ನಿಯಮ ಬಾಹೀರ ಪಡೆದುಕೊಂಡಿದ್ದಿರಿ ಇನ್ನು ಏನೇನು ಕಾರಣ ಹೇಳಿ ಸಂತ್ರಸ್ತರನ್ನು ಕೊಲ್ಹಾರದಿಂದ ಆಲಮಟ್ಟಿ ಆಲಮಟ್ಟಿಯಿಂದ ಜಮಖಂಡಿ ಜಮಖಂಡಿಯಿಂದ ಬಾಗಲಕೋಟೆಗೆ ಅಲೆದಾಡುಸುತ್ತಿರುವದು ಯಾವ ನ್ಯಾಯ ಅದಕ್ಕಾಗಿ ಸ್ಥಳೀಯ ಪಟ್ಟಣ ಪಂಚಾಯತ ಕಾರ್ಯಲಯದ ಮುಖ್ಯಾಧಿಕಾರಿಗಳು ಸೇರಿದಂತೆ ಪುನರ್ವಸತಿ ಅಧಿಕಾರಿ ವಿಶೇಷ ಜಿಲ್ಹಾಧಿಕಾರಿ ಮಹಾವ್ಯವಸ್ಥಾಪಕರು ವಾರದಲ್ಲಿ ಎರಡು ದಿನ ಕೊಲ್ಹಾರ ಪಟ್ಟಣದ ಯುಕೆಪಿ ಕಾರ್ಯಲಯದಲ್ಲಿ ಸಿಬ್ಬಂದಿ ಸಹಿತವಾಗಿ ಆಗಮಿಸಿ ಆಗಿರುವ ತಪ್ಪನ್ನು ಸರಿಪಡಿಸಲು ಮುಂದಾಗಬೇಕು ಇಲ್ಲದಿದ್ದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಒಂದು ಕಛೇರಿಯಿಂದ ಇನ್ನೂಂದು ಕಛೇರಿಗೆ ಸಂತ್ರಸ್ತರು ಅಲೆದಾಡುವದನ್ನು ತಪ್ಪಿಸಲು ಸಚಿವ ಶಿವಾನಂದ ಪಾಟೀಲರು ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಸಂಬಂದಪಟ್ಟ ಇಲಾಖೆ ಅಧಿಕಾರಿಗಳು ಒಟ್ಟಿಗೆ ಸೇರಿ ಆದಷ್ಟು ಬೇಗ ನಿವೇಶನ ವಿತರಣೆಯಲ್ಲಾದ ಗೊಂದಲ ಸರಿಪಡಿಸಲು ಕ್ರಮಕೈಗೊಳ್ಳಲು ಆದೇಶ ಮಾಡಿಸಬೇಕು ಇಲ್ಲದಿದ್ದರೆ ಮತ್ತೆ ಅದೇ ರಾಗ ಅದೇ ಹಾಡು ಎನ್ನುವಂತೆ ಮತ್ತೆ ಮಧ್ಯವರ್ತಿಗಳು ಹುಟ್ಟಿಕೊಂಡು ಸಂತ್ರಸ್ತರೊಂದಿಗೆ ಚಲ್ಲಾಟವಾಡಬಹುದು ಎಂದರು.
ಮಧ್ಯವರ್ತಿಗಳ ಹುಚ್ಚಾಟದಿಂದ ಅಧಿಕಾರಿಗಳ ಚಲ್ಲಾಟದಿಂದ ಜನಪ್ರತಿನಿದಿಗಳ ಜಂಜಾಟದಿಂದ ಕೊಲ್ಹಾರ ಪಟ್ಟಣದ ಜನತೆಗೆ ತಮ್ಮ ನಿವೇಶನದ ಕಾಗದ ಪತ್ರಗಳನ್ನು ಸರಿಪಡಿಸಿಕೊಳ್ಳಲು ಆ ಮನಿ ಪೌ ಈ ಮನಿ ಪೌ ಎಂಬ ಆಟವಾಡುವಂತಾಗಿರುವದನ್ನು ಬರುವ ಅಕ್ಟೊಬರ ತಿಂಗಳೊಳಗಾಗಿ ಸರಿಪಡಿಸಲು ಮುಂದಾಗಬೇಕು ಇಲ್ಲದಿದ್ದರೆ ಧರಣಿ ಸತ್ಯಗ್ರಹ ಹಮ್ಮಿಕೊಳ್ಳುತ್ತೆವೆ ಎಂದರು.
ಈ ಸಂದರ್ಭದಲ್ಲಿ ರಾಮಣ್ಣ ಉಪ್ಪಲದಿನ್ನಿ, ವೀರಭದ್ರಪ್ಪ ಬಾಗಿ, ತಿಪ್ಪಣ್ಣ ಕುದರಿ, ರಿಯಾಜ ಗಿರಗಾಂವಿ ಇದ್ದರು.

