Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿಜೃಂಭಣೆಯ ಶ್ರೀಶೈಲ ಮಲ್ಲಿಕಾರ್ಜುನ ಕಂಬಿ ಐದೇಶಿ ಉತ್ಸವ

ಸಮಾನತೆ ಸಂದೇಶ ಸಾರಿದ ಡಾ.ಅಂಬೇಡ್ಕರ್ :ಶಾಸಕ ಕಟಕಧೋಂಡ

ಸಂಗಪ್ಪ ಸೊನ್ನದ ನಿಧನ: ಇಂದು ಅಂತ್ಯಕ್ರಿಯೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮೊಬೈಲ್ ಅಬ್ಬರದ ನಡುವೆ ಮಕ್ಕಳಿಗೆ ಯೋಗ-ಧ್ಯಾನವೇ ಪರಿಹಾರ :ಚೌದರಿ
(ರಾಜ್ಯ ) ಜಿಲ್ಲೆ

ಮೊಬೈಲ್ ಅಬ್ಬರದ ನಡುವೆ ಮಕ್ಕಳಿಗೆ ಯೋಗ-ಧ್ಯಾನವೇ ಪರಿಹಾರ :ಚೌದರಿ

By Updated:No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಮುದ್ದೇಬಿಹಾಳ: ಇಂದಿನ ದಿನಮಾನಗಳಲ್ಲಿ ಮೊಬೈಲ್ ಅಬ್ಬರದ ನಡುವೆ ಮಕ್ಕಳಿಗೆ ಯೋಗ, ಧ್ಯಾನವೇ ಪರಿಹಾರ ಎಂದು ನಿವೃತ್ತ ಮುಖ್ಯಗುರು ಡಿ.ಎಂ.ಚೌದರಿ ಹೇಳಿದರು.
ಪಟ್ಟಣದ ಗುರು ಖಾಸ್ಗತೇಶ್ವರ ಮಿಡ್‌ಬ್ರೇನ್ ಯೋಗ ಮತ್ತು ಧ್ಯಾನ ತರಬೇತಿ ಕೇಂದ್ರದ ವತಿಯಿಂದ, ಶಾಲಾ ಆವರಣದಲ್ಲಿ, ವಿದ್ಯಾರ್ಥಿಗಳಿಗೆ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಈಗಿನ ಪರಿಸರದಲ್ಲಿ ಮಕ್ಕಳು ಮೊಬೈಲ್, ಕಂಪ್ಯೂಟರ್ ಗಳ ಹಿಂದೆ ಬಿದ್ದು ತಮ್ಮ ನೆನಪಿನ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಪಾಲಕರು ಎಷ್ಟೇ ಹತೋಟಿಗೆ ತರಬೇಕೆಂದರೂ ಸಾಧ್ಯವಾಗುತ್ತಿಲ್ಲ. ಇಂತವರಿಗೆ ಗುರು ಖಾಸ್ಗತೇಶ್ವರ ಮಿಡ್‌ಬ್ರೇನ್ ಯೋಗಾ ಶಾಲೆ ಮಕ್ಕಳಿಗೆ ಯೋಗ ಮತ್ತು ಧ್ಯಾನದ ತರಬೇತಿ ನೀಡುವ ಮೂಲಕ ಮಕ್ಕಳ ಮೂರನೇ ಕಣ್ಣನ್ನು ತೆರೆಸಿ ಅವರ ನೆನಪಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ಶ್ರಮಿಸುತ್ತಿದ್ದಾರೆ. ಈ ವಿದ್ಯೆ ಪಡೆದ ಮಕ್ಕಳು ಶೈಕ್ಷಣಿಕವಾಗಿ ಸಾಕಷ್ಟು ಪ್ರಗತಿ ಹೊಂದುವ ವಿಶ್ವಾಸ ನನಗಿದೆ. ಅಂತಹ ಶಕ್ತಿ ಯೋಗ ಮತ್ತು ಧ್ಯಾನಕ್ಕಿದೆ ಎಂದರು.
ಅತಿಥಿಯಾಗಿದ್ದ ಪ್ರೊ.ಪ್ರಕಾಶ ನರಗುಂದ ಮಾತನಾಡಿ, ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವದರ ಜೊತೆಗೆ ದೈಹಿಕವಾಗಿ, ಮಾನಸಿಕವಾಗಿ ಸದೃಢರನ್ನಾಗಿಸುವ ಜವಾಬ್ದಾರಿ ನಮ್ಮ ಮೇಲಿದೆ. ಮನೆಯಲ್ಲಿ ಎಷ್ಟೇ ಕಲಿಸುತ್ತೇವೆ ಎಂದರೂ ಅವರ ಮೆದುಳನ್ನು ಚುರುಕುಗೊಳಿಸುವ ಪೂರ್ಣ ಕಾರ್ಯ ನಮ್ಮಿಂದ ಮಾಡಲು ಸಾಧ್ಯವಾಗುವದಿಲ್ಲ. ನಮ್ಮ ಮಕ್ಕಳ ಮೆದುಳನ್ನು ಚುರುಕುಗೊಳಿಸುವ ವಿದ್ಯೆ ಅತೀ ಸುಲಭವಾಗಿ ನಮ್ಮೂರಲ್ಲೇ ಸಿಗುತ್ತಿದೆ ಎಂದರೆ ನಾವು ಪುಣ್ಯವಂತರು. ಪ್ರತಿಯೊಬ್ಬ ಪಾಲಕರು ಈ ಅವಕಾಶವನ್ನು ಸದುಪಯೋಗ ಪಡೆಸಿಕೊಳ್ಳುವಂತೆ ಕರೆ ನೀಡಿದರು.
ನಿವೃತ್ತ ಕಂಟ್ರೋಲರ್ ಎಂ.ಎಸ್.ಪೊಲೇಶಿ ಮುಖ್ಯ ಅತಿಥಿಯಾಗಿ ಮಾತನಾಡಿದರೆ, ಪಾಲಕರ ಪರವಾಗಿ ದೀಪಾ ಕುಲಕರ್ಣಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲಾಮಕ್ಕಳಿಗೆ ಯೋಗದ ಕಿಟ್ ವಿತರಿಸಲಾಯಿತು. ಪಾಲಕರೆಲ್ಲರೂ ಸೇರಿ ತರಬೇತಿ ಕೇಂದ್ರದ ಮುಖ್ಯಸ್ಥ, ನಿವೃತ್ತ ಶಿಕ್ಷಕ ಎ.ಆರ್.ಮುಲ್ಲಾ ಅವರಿಗೆ ಸನ್ಮಾನಿಸಿ ಗೌರವಿಸಿದರು. ತರಬೇತಿ ಪಡೆದ ನುರಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಪಾಲಕರಾದ ದಾನಮ್ಮ ಶಿವಶಿಂಪಿ, ಸಿ.ಎಂ.ಹಿರೇಮಠ, ಶಾಂತಾ ಢವಳೇಶ್ವರ, ಎಂ.ಎ.ಹೊನವಾಡ, ಬಿ.ಆರ್.ರಕ್ಕಸಗಿ ಸೇರಿದಂತೆ ಹಲವರು ಇದ್ದರು. ವೈದ್ಯ ರಾಮನಗೌಡ ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿದರು. ಶರಣಮ್ಮ ಪಾಟೀಲ ನಿರ್ವಹಿಸಿದರು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿಜೃಂಭಣೆಯ ಶ್ರೀಶೈಲ ಮಲ್ಲಿಕಾರ್ಜುನ ಕಂಬಿ ಐದೇಶಿ ಉತ್ಸವ

ಸಮಾನತೆ ಸಂದೇಶ ಸಾರಿದ ಡಾ.ಅಂಬೇಡ್ಕರ್ :ಶಾಸಕ ಕಟಕಧೋಂಡ

ಸಂಗಪ್ಪ ಸೊನ್ನದ ನಿಧನ: ಇಂದು ಅಂತ್ಯಕ್ರಿಯೆ

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ :ಶಾಸಕ ಲಕ್ಷ್ಮಣ ಸವದಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿಜೃಂಭಣೆಯ ಶ್ರೀಶೈಲ ಮಲ್ಲಿಕಾರ್ಜುನ ಕಂಬಿ ಐದೇಶಿ ಉತ್ಸವ
    In (ರಾಜ್ಯ ) ಜಿಲ್ಲೆ
  • ಸಮಾನತೆ ಸಂದೇಶ ಸಾರಿದ ಡಾ.ಅಂಬೇಡ್ಕರ್ :ಶಾಸಕ ಕಟಕಧೋಂಡ
    In (ರಾಜ್ಯ ) ಜಿಲ್ಲೆ
  • ಸಂಗಪ್ಪ ಸೊನ್ನದ ನಿಧನ: ಇಂದು ಅಂತ್ಯಕ್ರಿಯೆ
    In (ರಾಜ್ಯ ) ಜಿಲ್ಲೆ
  • ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ :ಶಾಸಕ ಲಕ್ಷ್ಮಣ ಸವದಿ
    In (ರಾಜ್ಯ ) ಜಿಲ್ಲೆ
  • ಬಯಸಿದ್ದೆಲ್ಲ ಸಿಗುವುದು ಬಾಳಲ್ಲಿ!
    In ವಿಶೇಷ ಲೇಖನ
  • ‘ಕಾಯಕ’-‘ದಾಸೋಹ’ ತತ್ವಗಳನ್ನು ಮುನ್ನಡೆಸುವುದೇ ಬಸವ ಜ್ಯೋತಿ ಯಾತ್ರೆ ಉದ್ದೇಶ
    In (ರಾಜ್ಯ ) ಜಿಲ್ಲೆ
  • ೨೫ ವರ್ಷ ಗತಿಸಿದರೂ ಸಂತ್ರಸ್ತರಿಗಿನ್ನೂ ನಿವೇಶನ ಭಾಗ್ಯವಿಲ್ಲ!
    In (ರಾಜ್ಯ ) ಜಿಲ್ಲೆ
  • ಸಹನಾ ಕಾಖಂಡಕಿ ಅತ್ಯುತ್ತಮ ಸಾಧನೆಗೆ ರೂ.೩ಲಕ್ಷ ನಗದು & ಸನ್ಮಾನ
    In (ರಾಜ್ಯ ) ಜಿಲ್ಲೆ
  • ರಾಸಾಯನಿಕ ಗೊಬ್ಬರ ತ್ಯಜಿಸಿ, ಸಾವಯವ ಗೊಬ್ಬರ ಬಳಸಿ :ಶಾಸಕ ಚಿಕ್ಕಮಾದು
    In (ರಾಜ್ಯ ) ಜಿಲ್ಲೆ
  • ಮೊಬೈಲ್ ಅಬ್ಬರದ ನಡುವೆ ಮಕ್ಕಳಿಗೆ ಯೋಗ-ಧ್ಯಾನವೇ ಪರಿಹಾರ :ಚೌದರಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.