ವಿಜಯಪುರದಲ್ಲಿ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದಿಂದ ೨೦ ಜನ ಸಾಧಕರಿಗೆ ಪ್ರಶಸ್ತಿ ಪ್ರಕಟ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ, ಪುಣೆಯ. ವಿಜಯಪುರ ಜಿಲ್ಲಾ ಘಟಕದ ವತಿಯಿಂದ ಏ.೨೫ ರಂದು ನಗರದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಮಂಗಲ ಕಾರ್ಯಾಲಯದಲ್ಲಿ ಬೆಳಿಗ್ಗೆ 10:೦೦ ಘಂಟೆಗೆ ಪ್ರಥಮ ಬಸವ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ವಿಜಯಪುರದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಗಂಗಾಧರ್ ಸಂಬಣ್ಣಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಡಾ.ಅಜಿತ್ ರಾಂಪುರೆ ಮುಖ್ಯ ಕಾರ್ಯನಿರ್ವಾಹಕರು ಮತ್ತು ಡೀನ್ ಅರೆಯುಸ್ ವಿಶ್ವವಿದ್ಯಾಲಯ ಅರೋಬಾ ಇವರು ಮುಖ್ಯ ಅತಿಥಿ ಸ್ಥಾನವನ್ನು ಅಲಂಕರಿಸಲಿದ್ದಾರೆ.
ಇದೆ ಸಂಧರ್ಭದಲ್ಲಿ ಡಾ.ಅಶೋಕ ಆಲೂರ , ಕುಲಪತಿಗಳು, ಕೊಡಗು ವಿಶ್ವವಿದ್ಯಾಲಯ ಇವರು ‘ಬಸವ ತತ್ವ ಜಗದ ತತ್ವ ‘ ಎಂಬ ವಿಷಯ ಕುರಿತು ಅನುಭಾವ ನೀಡಲಿದ್ದಾರೆ.
ಡಾ.ಶಶಿಕಾಂತ ಪಟ್ಟಣ, ಅಧ್ಯಕ್ಷರು, ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ, ಪುಣೆ ಇವರು ಅಧ್ಯಕ್ಷ ಸ್ಥಾನ ವಹಿಸಲಿದ್ದು, ಗೌರವ ಉಪಸ್ಥಿತರಾಗಿ ಡಾ.ಮಹಾಂತೇಶ ಬಿರಾದಾರ, ಬಿಎಲ್ಡಿಇ ಸಂಸ್ಥೆ ಆಡಳಿತ ಅಧಿಕಾರಿಗಳು, ಸುರೇಶ ದೇಸಾಯಿ ಪ್ರಥಮ ದರ್ಜೆ ಗುತ್ತಿಗೆದಾರರು ಅಧ್ಯಕ್ಷರು. ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆ, ವಿಜಯಪುರ, ಪ್ರೊ.ಶಾರದಾ ಪಾಟೀಲ (ಮೇಟಿ) ವಿಶ್ವಸ್ಥರು, ಬಸವ ತಿಳುವಳಿಕೆ ಸಂಶೋಧನಾ ಕೇಂದ್ರ, ಪುಣೆ, ಡಾ.ಸರಸ್ವತಿ ಪಾಟೀಲ, ಗೌರವಾಧ್ಯಕ್ಷರು, ಬಸವ ತಿಳುವಳಿಕೆ ಸಂಶೋಧನಾ ಕೇಂದ್ರ ವಿಜಯಪುರ ಜಿಲ್ಲಾ ಘಟಕ, ಶರಣೆ ವಿಜಯಲಕ್ಷ್ಮೀ ಹಂಗರಗಿ, ಯಾದಗಿರಿ ಜಿಲ್ಲಾಧ್ಯಕ್ಷರು ಇವರು ಆಗಮಿಸಲಿದ್ದಾರೆ.
ಈ ವೇಳೆ ಗಣ್ಯರಿಂದ 3 ಪ್ರಕಾರದ ಪ್ರಶಸ್ತಿಗಳನ್ನು ಸಾಧಕರಿಗೆ ನೀಡಿ ಸನ್ಮಾನಿಸಲಾಗುತ್ತಿದೆ ಎಂದು ವೇದಿಕೆಯ ಗೌರವಾಧ್ಯಕ್ಷೆ ಡಾ.ಸರಸ್ವತಿ ಪಾಟೀಲ ಮತ್ತು ಅಧ್ಯಕ್ಷ ಪ್ರೊ.ಆರ್.ಎಸ್.ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಲ್ಲ ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಶಾರದಾಮಣಿ ಹುನಶಾಳ, ಕೋಶಾಧ್ಯಕ್ಷೆ ಶರಣೆ ರತ್ನಕ್ಕ ಬಿರಾದಾರ ಮತ್ತು ಸಂಘಟನಾ ಕಾರ್ಯದರ್ಶಿ ಶರಣು ಸಬರದ ಅವರು ಕೋರಿದ್ದಾರೆ.
’ಕ್ರಾಂತಿ ಗಂಗೋತ್ರಿ ಅಕ್ಕನಾಗಮ್ಮ ಪ್ರಶಸ್ತಿ’ ಪುರಸ್ಕೃತರು
೧) ಶರಣೆ ಗೌರಮ್ಮ ನಾಶಿ, ಬಾಗಲಕೋಟ.
೨) ಶರಣೆ ಬಸಮ್ಮ ಭರಮಶೆಟ್ಟಿ, ರಾಂಪೂರ ಪಿ.ಎ.
೩) ಶರಣೆ ಅನ್ನಪೂರ್ಣ ಅಗಡಿ, ಹುಬ್ಬಳ್ಳಿ
೪) ಶರಣೆ ಪ್ರೇಮಾದೇವಿ ಅಣ್ಣಿಗೇರಿ, ಬೆಳಗಾವಿ.
೫) ಶರಣೆ ಶಾರದಮ್ಮ, (ಅಧ್ಯಕ್ಷರು, ರಾಷ್ಟ್ರೀಯ ಬಸವ ದಳ, ಬಳ್ಳಾರಿ)
೬) ಶರಣೆ ಸರಸ್ವತಿ ಬಿರಾದಾರ, ಪುಣೆ.
೭) ಶರಣೆ ಪುಷ್ಪಾ ಪಾಟೀಲ, ಬೆಳಗಾವಿ.
೮) ಶರಣೆ ಅಕ್ಕಮಹಾದೇವಿ ತೆಗ್ಗಿ, ಬೆಳಗಾವಿ.
’ವಚನ ಗಾನ ಕೋಗಿಲೆ ಪ್ರಶಸ್ತಿ’ ಪುರಸ್ಕೃತರು
೧) ಶರಣ ಡಾ|| ಮೃತ್ಯುಂಜಯ ಶೆಟ್ಟರ, ಧಾರವಾಡ.
೨) ಶರಣೆ ಡಾ| ತಾರಾ ಬಿ.ಎನ್, ಧಾರವಾಡ.
೩) ಶರಣೆ ವಿದ್ಯಾ ಮಗದುಮ, ಗೋಕಾಕ.
೪) ಶರಣೆ ನೈನಾ ಗಿರಿಗೌಡರ್, ಬೆಳಗಾವಿ.
’ಬಸವ ಸೇವಾ ಪ್ರಶಸ್ತಿ’ ಪುರಸ್ಕೃತರು
೧) ಶರಣೆ ಸುಧಾ ಪಾಟೀಲ, ಬೆಳಗಾವಿ.
೨) ಶರಣೆ ಡಾ. ದಾನಮ್ಮ ಝಳಕಿ, ಬೆಳಗಾವಿ.
೩) ಶರಣೆ ರೇಣುಕಾ ಪಾಟೀಲ, ವಿಜಯಪುರ.
೪) ಶರಣೆ ಶೋಭಾ ಅಮರಶೆಟ್ಟಿ, ಧಾರವಾಡ.
೫) ಶರಣೆ ರಾಜಶ್ರೀ ಥಳಂಗೆ, ಸೋಲಾಪುರ.
೬) ಶರಣ ಬಸವಕುಮಾರ ಪಾಟೀಲ, ಬೀದರ.
೭) ಶರಣ ಇಂದುಶೇಖರ ಮಣೂರ, ವಿಜಯಪುರ.
೮) ಶರಣೆ ಭಾಗ್ಯಶ್ರೀ ಕೋಟಿ, ಜಮಖಂಡಿ.

