ಮುದ್ದೇಬಿಹಾಳ: ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿನ ಬನ್ನಿ ಮಹಾಂಕಾಳಿ ದೇವಸ್ಥಾನದಲ್ಲಿ ನವರಾತ್ರೋತ್ಸವದ ಅಂಗವಾಗಿ ಅ.೧೫ ರಿಂದ ೨೩ ರವರ ವರೆಗೆ ಶ್ರೀ ದೇವಿ ಮಹಾತ್ಮೆ ಪುರಾಣವನ್ನು ಹಮ್ಮಿಕೊಳ್ಳಲಾಗಿದೆ.
ಪ್ರವಚನಕಾರ, ಆಧ್ಯಾತ್ಮಿಕ ಚಿಂತಕ ಪ್ರೊ.ಆಯ್.ಬಿ.ಹಿರೇಮಠ ಪುರಾಣವನ್ನು ನಡೆಸಿಕೊಡಲಿದ್ದು, ಗವಾಯಿ ಸಂಗಮೇಶ ಶಿವಣಗಿ ಸಂಗೀತ, ತಮ್ಮಣ್ಣ ಗಜೇಂದ್ರಗಡ ತಬಲಾಸಾಥ ನೀಡಲಿದ್ದಾರೆ. ಪ್ರತಿ ದಿನ ಸಂಜೆ ೫:೩೦ ಕ್ಕೆ ಪ್ರಾರಂಭಗೊಂಡು ೭:೩೦ ಕ್ಕೆ ಮಂಗಲಗೀತೆಯೊಂದಿಗೆ ಮುಕ್ತಾಯಗೊಳ್ಳಲಿರುವ ಪ್ರವಚನವನ್ನು ಶ್ರೀ ದೇವಿಯ ಸದ್ಭಕ್ತರು ಆಲಿಸಿ ಪುನೀತರಾಗುವಂತೆ ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
