Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಜೀವದ ಬಲೆಗಾಗಿ ಕಾದು ನಿಂತ ಅರ್ಜನಾಳ ಹೆದ್ದಾರಿ ರಸ್ತೆ!

ಕುಮ್ಮನಸಿರಸಗಿ ಯಲ್ಲಿ ಮಾ.7ರಂದು ಆರೆಸ್ಸೆಸ್ ಪಥಸಂಚಲನ

ಭಕ್ತಿ ಭಾವ ಮೆರೆದ 4 ವರ್ಷದ ಕುವರಿ ಬಿಬಿ ಖತಿಜಾ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಅಹಿಂಸಾ ತತ್ವದಲ್ಲೇ ಧರ್ಮ ಕಟ್ಟಿ ವಿಶ್ವಕ್ಕೆ ಸಾತ್ವಿಕ ತತ್ವೋಪದೇಶ ನೀಡಿದ ಜೈನ ಧರ್ಮ
(ರಾಜ್ಯ ) ಜಿಲ್ಲೆ

ಅಹಿಂಸಾ ತತ್ವದಲ್ಲೇ ಧರ್ಮ ಕಟ್ಟಿ ವಿಶ್ವಕ್ಕೆ ಸಾತ್ವಿಕ ತತ್ವೋಪದೇಶ ನೀಡಿದ ಜೈನ ಧರ್ಮ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಮುದ್ದೇಬಿಹಾಳ: ಜೈನ ಎನ್ನುವುದು ಒಂದು ಜಾತಿಯಲ್ಲ ಅದೊಂದು ನಿಜವಾದ ಸಂಸ್ಕಾರವಂತ ಮನುಷ್ಯ ಧರ್ಮ. ಪರೋಪಕಾರ, ದಾನ- ಧರ್ಮ ಮಾಡುವುದರಲ್ಲಿ ಜೈನ ಸಮಾಜವು ಮುಂಚೂಣಿಯಲ್ಲಿದೆ. ಪ್ರತಿಯೊಬ್ಬರೂ ಪರರಿಗೆ ಸಹಾಯ, ನೆರವು ನೀಡುವ ಮನೋಭಾವನೆ ರೂಢಿಸಿಕೊಳ್ಳಬೇಕು ಎಂದು ಶಿವಮೊಗ್ಗ ಜಿಲ್ಲೆಯ ಜೈನ ಮಠ ಹೊಂಬುಜದ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಪಾರ್ಶ್ವನಾಥ ಭಗವಾನರ ಹಾಗೂ ಮಹಾಮಾತೆ ಪದ್ಮಾವತಿ ದೇವಸ್ಥಾನದ ನೂತನ ಯಾತ್ರಿ ನಿವಾಸ ಹೊಸ ಕಟ್ಟಡದ ಕಾರ್ಯಾಲಯ ಸಭಾಮಂಟಪದ ಉದ್ಘಾಟನೆ ಹಾಗೂ ದಾನಿಗಳಿಗೆ  ಗೌರವ ಸನ್ಮಾನ ಹಾಗೂ ಧರ್ಮಸಭೆಯಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಅಹಿಂಸಾ ತತ್ವವನ್ನು ಬೋಧನೆ ಮಾಡಿ ಅಹಿಂಸಾ ತತ್ವದಲ್ಲೇ ಧರ್ಮವನ್ನು ಕಟ್ಟಿ ಇಡೀ ಪ್ರಪಂಚಕ್ಕೆ ಸಾತ್ವಿಕ ತತ್ವ ಉಪದೇಶಗಳನ್ನು ನೀಡಿದ ಕೀರ್ತಿ ಜೈನ ಧರ್ಮಕ್ಕಿದೆ. ಜೈನ ಧರ್ಮದವರು ಬೌದ್ಧಿಕವಾಗಿ ಬಲಶಾಲಿಗಳಾಗಿದ್ದು, ಸಂಸ್ಕಾರ ಹಾಗೂ ಧಾರ್ಮಿಕ ವಿದ್ಯೆಯ ಮೂಲಕ ಸಂಪೂರ್ಣ ಸಾಕ್ಷರತೆ ಹೊಂದಿದ ಹೆಗ್ಗಳಿಕೆ ಹೊಂದಿದೆ. ಜೈನ ವಿದ್ಯಾಲಯ ಹಾಗೂ ಜೈನ ಮಂದಿರಗಳ ಜೀರ್ಣೋದ್ದಾರ ಇಂದಿನ ಅಗತ್ಯ ಕರ್ತವ್ಯಗಳ್ಲೊಂದಾಗಿದೆ. ಜೈನರು ಎಲ್ಲ ಧರ್ಮದವರೊಂದಿಗೆ ಅನ್ಯೂನ್ಯ ಸಹೋದರತೆ ಬಾಂದವ್ಯದಿಂದ ಮುನ್ನಡೆದು ಬಂದವರು. ರಾಜಕೀಯವಾಗಿ ಮುಂದೆ ಇಲ್ಲದಿದ್ದರೂ ಕಿಂಗಾಗುವ ಬದಲು ಕಿಂಗ್ ಮೇಕರಾಗಿ ಬೆಳೆದದ್ದನ್ನು ಕಳೆದ ನಾಲ್ಕು ವರ್ಷಗಳ ರಾಜಕೀಯದಲ್ಲಿ ನೋಡಿದ್ದೇವೆ ಎಂದರು.
ಈ ವೇಳೆ  ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿಯವರು ಮಾತನಾಡಿ, ಇಂದಿನ ವೈಜ್ಞಾನಿಕ ಕಾಲದಲ್ಲಿ ಮಕ್ಕಳಿಗೆ ಗುಣಮಟ್ಟ ಶಿಕ್ಷಣದ ಜೊತೆಗೆ ನಮ್ಮ ಧರ್ಮ, ಸಂಸ್ಕಾರದ ಹಾಗೂ ದಾನಧರ್ಮ ಮಾಡುವ ಸಂಸ್ಕಾರದ ಅಗತ್ಯವಿದೆ. ಹಿರಿಯರು ತಾವು ಹೋಗುವ ದೇವಸ್ಥಾಕ್ಕೆ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿ ದೇಣಿಗೆ ಹುಂಡಿಯಲ್ಲಿ ತಮ್ಮ ಮಕ್ಕಳ ಕೈಯಿಂದ ದಾನದ ರೂಪದಲ್ಲಿ ಕಾಣಿಕೆ ಹಾಕಿಸಬೇಕು. ಆಗ ಮಕ್ಕಳಲ್ಲಿ ದಾನ ಧರ್ಮದ ಮತ್ತು  ಮಾನವಿಯ ಮೌಲ್ಯಗಳ ಅರಿವಾಗುತ್ತದೆ ಎಂದರು.
ಈ ವೇಳೆ ಸಾಹಿತಿ ಹಾಗೂ ನಿವೃತ್ತ ಶಿಕ್ಷಕ ಅಶೋಕ ಮಣಿಯವರು ಪ್ರಾಸ್ಥಾವಿಕವಾಗಿ ಮಾತನಾಡಿದರು.
ಕಮೀಟಿಯ ಅಧ್ಯಕ್ಷ ಅಭಿನಂದನ ಗೋಗಿ, ರಬಕವಿ ಹಜಾರೆ ಟೇಕ್ಸ್ ಟೈಲ್ಸ್ನ ಗಣಪತರಾವ ಹಜಾರೆ, ಚಡಚಣದ ಗಣ್ಯ ಉದ್ಯಮಿ ಬಾಹುಬಲಿ ಮುತ್ತಿನ, ವಿಜಯಪುರ ಉದ್ಯಮಿ ಅಪ್ಪಾಸಾಹೇಬ ಮುತ್ತಿನ, ಗಜೇಂದ್ರಗಡದ ಉದ್ಯಮಿ ಬಾಹುಬಲಿ ಹೂಲಿ, ಜೈನ ಶ್ವೇತಾಂಬರ ಸಮಾಜದ ಮುಖಂಡ ಬಾಬುಲಾಲ ಓಸ್ವಾಲ್, ಮಾಣಿಕ ದಂಡಾವತಿ, ಗೊಮ್ಮಟೇಶ ಸಗರಿ, ಮಹಾವೀರ ಸಗರಿ, ಭರತೇಶ ಮಂಕಣಿ, ಸೇರಿದಂತೆ ಹಲವರು ಇದ್ದರು.

“ಪಟ್ಟಣದ ಪದ್ಮಾವತಿ ದೇವಸ್ಥಾನ ಗುಡ್ಡದಲ್ಲಿರೂ ಕೂಡ ಅತ್ಯಂತ ಪ್ರಾಚೀನ ಇತಿಹಾಸ ಹೊಂದಿದ ಧಾರ್ಮಿಕ ಸ್ಥಳವಾಗಿದೆ. ಈ ಮೊದಲು ಕೇವಲ ಒಂದೇ ಒಂದು ದೇವಸ್ಥಾನ ಮಾತ್ರ ನಿರ್ಮಿಸಲಾಗಿತು ಸಧ್ಯ ಇಲ್ಲಿನ ಜೈನ ಸಮಾಜ ಬಾಂಧವರು ಎಲ್ಲರೂ ಒಂದಾಗಿ ಸಾಕಷ್ಟು ಹಣವನ್ನು ದೇಣಿಗೆದಾರರಿಂದ ಸಂಗ್ರಹಿಸಿ ಶುಭ ಸಮಾರಂಭಗಳು ನಡೆಯವಂತಹ ಸುಸಜ್ಜಿತ ಮಂಗಲ ಕಾರ್ಯಾಲಯ ಹಾಗೂ ವಸತಿ ಉಳಿದುಕೊಳ್ಳಲು ಕೋಠಡಿಗಳನ್ನು ನಿರ್ಮಿಸಿ ಇದೊಂದು ಧಾರ್ಮಿಕ ಪ್ರವಾಸಿ ತಾಣವನ್ನಾಗಿ ಮಾಡಿದ್ದು ನಿಜಕ್ಕೂ ಶ್ಲಾಘನಿಯ.”
ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು. ಶಿವಮೊಗ್ಗ

BIJAPUR NEWS patil public news udaya rashmi udayarashminews.com
Share. Facebook Twitter Pinterest Email Telegram WhatsApp
  • Website

Related Posts

ಜೀವದ ಬಲೆಗಾಗಿ ಕಾದು ನಿಂತ ಅರ್ಜನಾಳ ಹೆದ್ದಾರಿ ರಸ್ತೆ!

ಕುಮ್ಮನಸಿರಸಗಿ ಯಲ್ಲಿ ಮಾ.7ರಂದು ಆರೆಸ್ಸೆಸ್ ಪಥಸಂಚಲನ

ಭಕ್ತಿ ಭಾವ ಮೆರೆದ 4 ವರ್ಷದ ಕುವರಿ ಬಿಬಿ ಖತಿಜಾ

ರಂಗಿನಾಟ ಆಹ್ವಾನ ತಿರಸ್ಕಾರ: ನಾಡಗೌಡರ ನಡೆಗೆ ಹಿಂದೂ ಸಮಾಜ ಕಿಡಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಜೀವದ ಬಲೆಗಾಗಿ ಕಾದು ನಿಂತ ಅರ್ಜನಾಳ ಹೆದ್ದಾರಿ ರಸ್ತೆ!
    In (ರಾಜ್ಯ ) ಜಿಲ್ಲೆ
  • ಕುಮ್ಮನಸಿರಸಗಿ ಯಲ್ಲಿ ಮಾ.7ರಂದು ಆರೆಸ್ಸೆಸ್ ಪಥಸಂಚಲನ
    In (ರಾಜ್ಯ ) ಜಿಲ್ಲೆ
  • ಭಕ್ತಿ ಭಾವ ಮೆರೆದ 4 ವರ್ಷದ ಕುವರಿ ಬಿಬಿ ಖತಿಜಾ
    In (ರಾಜ್ಯ ) ಜಿಲ್ಲೆ
  • ರಂಗಿನಾಟ ಆಹ್ವಾನ ತಿರಸ್ಕಾರ: ನಾಡಗೌಡರ ನಡೆಗೆ ಹಿಂದೂ ಸಮಾಜ ಕಿಡಿ
    In (ರಾಜ್ಯ ) ಜಿಲ್ಲೆ
  • ಶ್ರೀಶೈಲಕ್ಕೆ ಹೆಚ್ಚುವರಿ ಸಾರಿಗೆ ಕಾರ್ಯಚರಣೆ
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ವಿಜಯಪುರದಲ್ಲಿ ಭೀಮಗಾಯನ
    In (ರಾಜ್ಯ ) ಜಿಲ್ಲೆ
  • ’ಶ್ರೀಗುರು ಮರುಳಾರಾದ್ಯ ಸಿರಿ’ ಪ್ರಶಸ್ತಿಗೆ ಈರಣ್ಣ ಝಳಕಿ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಶ್ರೀಶೈಲ ಪಾದಯಾತ್ರಿಗಳಿಗೆ ಟೋಪಿ ವಿತರಣೆ
    In (ರಾಜ್ಯ ) ಜಿಲ್ಲೆ
  • ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ
    In (ರಾಜ್ಯ ) ಜಿಲ್ಲೆ
  • ಗರಿಷ್ಠ ತಾಪಮಾನ: ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮವಹಿಸಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.