Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಅ.16ರ ವಿಜಯಪುರ ಬಂದ್‌ಗೆ ಆಮ್ ಆದ್ಮಿ ಪಾರ್ಟಿ ಬೆಂಬಲ

ಓಟ ಚೋರಿ ವಿರುದ್ಧ ಸಹಿ ಸಂಗ್ರಹಣೆಗೆ ಕಾಂಗ್ರೆಸ್ ಚಾಲನೆ

ಸಿದ್ದೇಶ್ವರ ಬ್ಯಾಂಕ್ ಚುನಾವಣೆ: ಹಳೆಯ ಪೆನಲ್‌ಗೆ ಭರ್ಜರಿ ಗೆಲುವು

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸಿದ್ದೇಶ್ವರ ಬ್ಯಾಂಕ್ ಚುನಾವಣೆ: ಹಳೆಯ ಪೆನಲ್‌ಗೆ ಭರ್ಜರಿ ಗೆಲುವು
(ರಾಜ್ಯ ) ಜಿಲ್ಲೆ

ಸಿದ್ದೇಶ್ವರ ಬ್ಯಾಂಕ್ ಚುನಾವಣೆ: ಹಳೆಯ ಪೆನಲ್‌ಗೆ ಭರ್ಜರಿ ಗೆಲುವು

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರದ ಶ್ರೀ ಸಿದ್ದೇಶ್ವರ ಬ್ಯಾಂಕ್ ಚುನಾವಣೆ | ಹಳೆಯ ಪೆನಲ್‌ಗೆ ಸದಸ್ಯರ ಒಲವು | ಫಲ ಕೊಟ್ಟ ಸಚಿವ ಶಿವಾನಂದ ಪಾಟೀಲ & ಮಾಜಿ ಸಚಿವ ಪಟ್ಟಣಶೆಟ್ಟಿ ಜಂಟಿ ಕಾರ್ಯತಂತ್ರ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಅವರು ಸ್ಥಾಪಿಸಿದ ಪ್ರತಿಷ್ಠಿತ ಸಿದ್ದೇಶ್ವರ ಬ್ಯಾಂಕ್ ಚುನಾವಣೆಯಲ್ಲಿ ಸಹಕಾರ ಕ್ಷೇತ್ರದ ಚಾಣಾಕ್ಷ ಎಂದೇ ಖ್ಯಾತಿಯಾಗಿರುವ ಸಚಿವ ಶಿವಾನಂದ ಪಾಟೀಲ ಹಾಗೂ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರ ಜಂಟಿ ರಣತಂತ್ರ ಫಲ ಕೊಟ್ಟಿದ್ದು ಹಳೆಯ ಪೆನಲ್’ ಸದಸ್ಯರೇ ಪುನರಾಯ್ಕೆಯಾಗಿದ್ದಾರೆ.
ಅವಿರೋಧ ಆಯ್ಕೆ ನಡೆಯುವ ನಿಟ್ಟಿನಲ್ಲಿ ಸಚಿವ ಶಿವಾನಂದ ಪಾಟೀಲ ಪ್ರಯತ್ನಿಸಿದರಾದರೂ ಸಹ ಚುನಾವಣೆ ನಡೆಯಿತು. ಆದರೂ ಸಹ ಹಳೆಯ ಪೆನಲ್ ಪರ ಬ್ಯಾಂಟಿಂಗ್ ನಡೆಸಿದ್ದ ಸಚಿವ ಶಿವಾನಂದ ಪಾಟೀಲ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಜಂಟಿ ಕಾರ್ಯತಂತ್ರ ನಡೆಸಿ ತಮ್ಮ ಬೆಂಬಲಿತ ಎಲ್ಲ ಪೆನಲ್ ಸದಸ್ಯರನ್ನು ಆಯ್ಕೆಯಾಗಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿದ್ದಾರೆ.
೧೯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಹಳೆಯ ಪೆನಲ್ ಸದಸ್ಯರೇ ಆಯ್ಕೆಯಾಗಿದ್ದಾರೆ.
ಬ್ಯಾಂಕನ್ನು ಲಾಭಾಂಶದತ್ತ ಮುನ್ನಡೆಸಿದ್ದು, ಕೋವಿಡ್ ವೇಳೆಯೂ ಬ್ಯಾಂಕ್‌ನ ಸಮರ್ಥ ನಿರ್ವಹಣೆ, ಷೆಡ್ಯೂಲ್ಡ್ ಬ್ಯಾಂಕ್ ಆಗಿಸುವ ನಿಟ್ಟಿನಲ್ಲಿ ಭರವಸೆ ಈ ಎಲ್ಲ ಅಂಶಗಳು ಹಳೆಯ ಪೆನಲ್ ಸದಸ್ಯರ ಗೆಲುವಿಗೆ ಕಾರಣವಾಗಿವೆ. ಪೆನಲ್ ಸದಸ್ಯರು ಈ ಬಾರಿ ವೈಯುಕ್ತಿಕ ಪ್ರಚಾರಕ್ಕಿಂತ ಇಡೀ ಪೆನಲ್‌ಗೆ ಮತಚಲಾಯಿಸುವಂತೆ ಒಗ್ಗಟ್ಟಿನ ಮಂತ್ರ ಜಪಿಸಿದ್ದು ಸಹ ಪ್ಲಸ್ ಆಗಿದ್ದು, ಒಂದೇ ಒಂದು ಸ್ಥಾನ ಕೈ ತಪ್ಪಿ ಹೋಗದಂತಾಯಿತು.
ಮಧ್ಯರಾತ್ರಿ ವೇಳೆಗೆ ಫಲಿತಾಂಶ ಸ್ಪಷ್ಟವಾಗಿ ಪ್ರಕಟಗೊಳ್ಳುತ್ತಿದ್ದಂತೆ ವಿಜಯೋತ್ಸವ ರಂಗೇರಿತು. ಪಟಾಕಿಗಳ ಸದ್ದು ಕಿವಿಗಡಚಿಕ್ಕಿತು. ಗುಲಾಲುಗಳ ಎರಚಾಟ ನಡೆಯಿತು. ಅಭಿಮಾನಿಗಳು ಗೆಲುವು ಸಾಧಿಸಿದ ನಿರ್ದೇಶಕರನ್ನು ಹೆಗಲ ಮೇಲೆ ಹೊತ್ತು ಹೆಜ್ಜೆ ಹಾಕಿ ಸಂಭ್ರಮಿಸಿದ ದೃಶ್ಯ ಎಲ್ಲೆಡೆ ಕಂಡು ಬಂದಿತು. ನಂತರ ಆಯ್ಕೆಯಾದ ಎಲ್ಲ ನಿರ್ದೇಶಕರು ಶ್ರೀ ಸಿದ್ದೇಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

“ಕೋವಿಡ್ ವೇಳೆಯಲ್ಲಿ ಅನೇಕ ಸವಾಲುಗಳು ಎದುರಿಸಿದರೂ ಸಹ ಬ್ಯಾಂಕ್ ಸಮರ್ಥವಾಗಿ ಮುನ್ನಡೆಸಲಾಗಿತ್ತು, ನಷ್ಟದಲ್ಲಿಯೇ ಇದ್ದ ಬ್ಯಾಂಕ್ ಎಲ್ಲರ ವಿಶ್ವಾಸ ಬಲದ ಮೂಲಕ ಲಾಭದತ್ತ ಮುನ್ನಡೆದಿದೆ, ನಮಗೆ ಸದಸ್ಯರು ವಿಶ್ವಾಸವಿರಿಸಿ ಇನ್ನೊಮ್ಮೆ ಆಯ್ಕೆ ಮಾಡಿದ್ದಾರೆ, ಅವರ ವಿಶ್ವಾಸವನ್ನು ಉಳಿಸಿಕೊಂಡು ಎಲ್ಲರು ಒಗ್ಗಟ್ಟಾಗಿ ಬ್ಯಾಂಕ್ ಪ್ರಗತಿಗೆ ಶ್ರಮಿಸುತ್ತೇವೆ.”

– ಶ್ರೀಹರ್ಷಗೌಡ ಪಾಟೀಲ
ನಿರ್ದೇಶಕರು

ಗೆಲುವು ಸಾದಿಸಿದ ನಿರ್ದೇಶಕರು ಹಾಗೂ ಪಡೆದ ಮತ

ಸಾಮಾನ್ಯ ಕ್ಷೇತ್ರ
೧) ಗುರು ಗಚ್ಚಿನಮಠ (೪೭೯೧)
೨) ಶ್ರೀಹರ್ಷಗೌಡ ಪಾಟೀಲ (೪೩೯೬)
೩) ಈರಣ್ಣ ಪಟ್ಟಣಶೆಟ್ಟಿ (೪೦೭೨)
೪) ಕರುಣಾ ಔರಂಗಾಬಾದ (೪೦೫೪)
೫) ಸುರೇಶ ಗಚ್ಚಿನಕಟ್ಟಿ (೪೦೫೩)
೬) ವಿಜಯಕುಮಾರ ಇಜೇರಿ (೩೭೩೯)
೭) ಡಾ.ಸಂಜೀವ ಪಾಟೀಲ ಮುಳವಾಡ (೩೬೬೫)
೮) ವೈಜನಾಥ ಕರ್ಪೂರಮಠ (೩೬೩೨)
೯) ಪಾಟೀಲ ವಿಶ್ವನಾಥ ಶಿವನಗೌಡ (೩೬೨೭)
೧೦) ಪಾಟೀಲ ರಾಜೇಂದ್ರ ಮಲಕನಗೌಡ (೩೬೨೪)
೧೧) ರಮೇಶ ಬಿದನೂರ (೩೬೧೫)
೧೨) ರವೀಂದ್ರ ಬಿಜ್ಜರಗಿ (೩೫೧೧)
೧೩) ಪ್ರಕಾಶ ಬಗಲಿ (೩೪೧೭)
ಮಹಿಳಾ ಕ್ಷೇತ್ರ
೧೪) ಭೌರಮ್ಮ ಗೊಬ್ಬೂರ (೩೧೨೨)
೧೫) ಸೌಭಾಗ್ಯ ಭೋಗಶೆಟ್ಟಿ (೩೯೭೫)
ಹಿಂದುಳಿದ ಪ್ರವರ್ಗ : ೧
೧೬) ಗಂಗನಳ್ಳಿ ಗುರುರಾಜ ಸಿದ್ದಪ್ಪ(೩೯೯೦)
೧೭) ಕತ್ತಿ ರಾಜಶೇಖರ ಸಾತಪ್ಪಾ(೨೩೮೩)
ಪರಿಶಿಷ್ಟ ಜಾತಿ ಕ್ಷೇತ್ರ
೧೮) ಸಾಯಬಣ್ಣ ಭೋವಿ (೨೮೬೫)
ಪರಿಶಿಷ್ಟ ಪಂಗಡ ಕ್ಷೇತ್ರ
೧೯) ನಾಯ್ಕೋಡಿ ಅಮೋಘಸಿದ್ದ ಮಳಸಿದ್ದ(೩೮೦೬)

BIJAPUR NEWS congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಅ.16ರ ವಿಜಯಪುರ ಬಂದ್‌ಗೆ ಆಮ್ ಆದ್ಮಿ ಪಾರ್ಟಿ ಬೆಂಬಲ

ಓಟ ಚೋರಿ ವಿರುದ್ಧ ಸಹಿ ಸಂಗ್ರಹಣೆಗೆ ಕಾಂಗ್ರೆಸ್ ಚಾಲನೆ

ನ್ಯಾಯಮೂರ್ತಿ ಮೇಲೆ ಶೂ ಎಸೆದಿರುವ ಕೃತ್ಯ ಖಂಡಿಸಿ ಪ್ರತಿಭಟನೆ

ಬೆಳೆಹಾನಿಗೆ ಮಹಾರಾಷ್ಟ್ರ ಮಾದರಿಯಲ್ಲಿ ಪ್ಯಾಕೇಜ್ ಒದಗಿಸಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಅ.16ರ ವಿಜಯಪುರ ಬಂದ್‌ಗೆ ಆಮ್ ಆದ್ಮಿ ಪಾರ್ಟಿ ಬೆಂಬಲ
    In (ರಾಜ್ಯ ) ಜಿಲ್ಲೆ
  • ಓಟ ಚೋರಿ ವಿರುದ್ಧ ಸಹಿ ಸಂಗ್ರಹಣೆಗೆ ಕಾಂಗ್ರೆಸ್ ಚಾಲನೆ
    In (ರಾಜ್ಯ ) ಜಿಲ್ಲೆ
  • ಸಿದ್ದೇಶ್ವರ ಬ್ಯಾಂಕ್ ಚುನಾವಣೆ: ಹಳೆಯ ಪೆನಲ್‌ಗೆ ಭರ್ಜರಿ ಗೆಲುವು
    In (ರಾಜ್ಯ ) ಜಿಲ್ಲೆ
  • ನ್ಯಾಯಮೂರ್ತಿ ಮೇಲೆ ಶೂ ಎಸೆದಿರುವ ಕೃತ್ಯ ಖಂಡಿಸಿ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
  • ಬೆಳೆಹಾನಿಗೆ ಮಹಾರಾಷ್ಟ್ರ ಮಾದರಿಯಲ್ಲಿ ಪ್ಯಾಕೇಜ್ ಒದಗಿಸಿ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಜಿಲ್ಲೆಯ ಪರಿಸರದಲ್ಲಿ ಗಣನೀಯ ಬದಲಾವಣೆ
    In (ರಾಜ್ಯ ) ಜಿಲ್ಲೆ
  • ಕಲಕೇರಿ ಬಸ್‌ನಿಲ್ದಾಣದಲ್ಲಿ ಮೂಲಸೌಕರ್ಯ ಒದಗಿಸಲು ಸಚಿವರಿಗೆ ಮನವಿ
    In (ರಾಜ್ಯ ) ಜಿಲ್ಲೆ
  • ವಿವಿಧ ಭಾಷಾಜ್ಞಾನ & ಸಂವಹನ ಕೌಶಲಗಳ ಸಂಪಾದನೆ ಅಗತ್ಯ
    In (ರಾಜ್ಯ ) ಜಿಲ್ಲೆ
  • ಡಾಗ್ ಶೆಲ್ಟರ್ ನಿರ್ಮಾಣಕ್ಕೆ ಕ್ರಮ ವಹಿಸಿ :ಡಿಸಿ ಡಾ.ಆನಂದ.ಕೆ
    In (ರಾಜ್ಯ ) ಜಿಲ್ಲೆ
  • ಅ.೨೩ಕ್ಕೆ ರಾಣಿ ಚನ್ನಮ್ಮ ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧಾರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.