ಕರ್ನಾಟಕ ರಾಜ್ಯ ರೈತ ಸಂಘದ ವಿಜಯಪುರ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ರೈತ ಸಮೂಹಕ್ಕೆ ಪಾಲ್ಗೊಳ್ಳಲು ಕರೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮೇ ೭ ರಿಂದ ೯ ರವರೆಗೆ ನಡೆಯಲಿರುವ ರಾಜ್ಯ ಮಟ್ಟದ ಬೃಹತ್ ರೈತ ಜಾಗೃತಿ ಸಮಾವೇಶ, ಕೃಷಿಮೇಳ, ಕೃಷಿ ವಿಜ್ಞಾನಿಗಳು, ಪ್ರಗತಿಪರ ರೈತರಿಂದ ಚಿಂತನಾ ಘೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ವಾಲ್ ಪೋಸ್ಟರನ್ನು ಜಿಲ್ಲೆಯ ವಿವಿಧ ಮಠಾಧಿಶರು ಹಾಗೂ ಸರಕಾರಿ ಅಧಿಕಾರಿಗಳು ಮತ್ತು ಮುಖಂಡರಿಂದ ಬಿಡುಗಡೆಗೋಳಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.
ಮೇ.೭ ರಂದು ನಗರದ ಸಿದ್ದೇಶ್ವರ ದೇವಸ್ಥಾನದಿಂದ ಬೃಕತ್ ರೈತ ಶೋಭಾಯಾತ್ರೆಯು ವಿವಿಧ ಕಲಾ ತಂಡಗಳಿಂದ ಗಾಂಧಿ ವೃತ್ತದ ಮಾರ್ಗವಾಗಿ ಕಂದಗಲ್ ಹಣಮಂತ್ರಾಯ ರಂಗಮಂದಿರದವರೆಗೆ ಆಗಮಿಸಿ ಕೃಷಿ ಮೇಳವನ್ನು ಉದ್ಘಾಟಿಸಿ ೩ ದಿನಗಳ ಕಾರ್ಯಕ್ರಮಗಳು ನಡೆಯಲಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಪತ್ರಿಕೆ ಪ್ರಕಟಣೆಯ ಮುಖಾಂತರ ತಿಳಿಸಿದರು.
ಈ ವರ್ಷ ವಿಶೇಷವಾಗಿ ೩ ದಿನಗಳ ಕಾಲ ನಮ್ಮ ಜಿಲ್ಲೆಯ ಪ್ರತಿಯೊಂದು ಹಳ್ಳಿಯಿಂದ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ರೈತರು ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ೩ ದಿನಗಳ ಪ್ರತಿನಿತ್ಯ ಆಗಮಿಸುವ ರೈತರಿಗೆ ಬೆಳಿಗ್ಗೆ ತಿಂಡಿ ಮಧ್ಯಾಹ್ನ ಹಾಗೂ ರಾತ್ರಿ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಬೇಕಾಗಿದೆ.
ನಾಡಿನ ಹೆಸರಾಂತ ೧೫ ಕ್ಕೂ ಅಧಿಕ ಸ್ವಾಮೀಜಿಗಳು ಕೂಡಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆರ್ಶಿವಚನ ನೀಡಲಿರುವರು ಹಾಗೆ ಪ್ರತಿನಿತ್ಯ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ, ಮೀನುಗಾರಿಕೆ, ಅರಣ್ಯ, ವಿದ್ಯುತ್, ವಿಮೂಲ್ (ನಂದಿನಿ) ಸೇರಿದಂತೆ ರೈತರಿಗೆ ಸಂಬಂದಿಸಿದ ಇಲಾಖೆಗಳ ವಿಜ್ಞಾನಿಗಳಿಂದ ಹಾಗೂ ಅನುಭವಿ ಪ್ರಗತಿಪರ ರೈತರಿಂದ ಘೋಷ್ಟಿ ನಡೆಯಲಿವೆ. ೧೦೦ ಕ್ಕೂ ಅಧಿಕ ಕೃಷಿ ಮಳಿಗೆಗಳು ಕೂಡಾ ಬರಲಿವೆ.
ರೈತ ಕವನ ಘೋಷ್ಟಿ, ರೈತ ಚಿತ್ರಕಲಾ ಸ್ಪರ್ಧೆ, ರೈತ ರಂಗೋಲಿ ಸ್ಪರ್ಧೆ ಹಾಗೂ ಹಂತಿ ಪದ ಸೇರಿದಂತೆ ಸಂಜೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕೊನೆಯ ದಿನ ರೈತರತ್ನ ಪ್ರೋ ಎಂ.ಡಿ. ನಂಜುಡಸ್ವಾಮಿಯವರ ಜೀವನಾಧಾರಿತ ಡೈರೆಕ್ಟ ಎಕ್ಷನ್ ಎಂಭ ನಾಟಕವನ್ನು ಬೆಂಗಳೂರಿನ ಕಲಾ ತಂಡದಿಂದ ಪ್ರಸ್ತುತಗೊಳ್ಳಲಿದೆ. ಜಿಲ್ಲೆಯ ಎಲ್ಲಾ ರೈತರು ಈ ಕಾರ್ಯಕ್ರಮದ ಸದುಪಯೋಗ ಪಡೆಸಿಕೊಳ್ಳಬೇಕು ಎಂದರು.
ರೈತರ ಏಳ್ಗೆಗಾಗಿ ಹಾಗೂ ಪರಿಸರ ಉಳಿವಿಗಾಗಿ ಸೇವೆ ಸಲ್ಲಿಸಿರುವ ೨೫ ಜನ ಸಾಧಕರಿಗೆ ರಾಷ್ಟ್ರೀಯ “ಸಮಾಜ ಸೇವಾ ರತ್ನ” ಪ್ರಶಸ್ತಿ
ರೈತರ ಏಳ್ಗೆಗಾಗಿ ಬಹು ವರ್ಷಗಳಿಂದ ಹೋರಾಟ ಮಾಡಿರುವ ಹಿರಿಯ ರೈತರಿಗೆ ಬರಗಾಲ ಭೀಮಶಿ ಅವರ ಸ್ಮರಣಾರ್ಥವಾಗಿ ರಾಜ್ಯ ಮಟ್ಟದ “ರೈತ ನಾಯಕ” ಪ್ರಶಸ್ತಿ, ಕೃಷಿಯಲ್ಲಿ ವಿನೂತನ ಸಾಧನೆ ಮಾಡಿರುವ ೨೫ ರೈತರಿಗೆ “ನೇಗಿಲಯೋಗಿ “ಪ್ರಶಸ್ತಿ ಪ್ರದಾನ ಸಮಾರಂಭವು ನಡೆಯಲಿದೆ.
ರೈತರ ಏಳ್ಗೆಗಾಗಿ, ಜಾಗೃತಿಗಾಗಿ, ರೈತರನ್ನು ಸಾಲಮುಕ್ತರನ್ನಾಗಿಸಿ ರೈತ ಆತ್ಮಹತ್ಯೆಯಂತಹ ಪೀಡಗನ್ನು ಬೇರು ಸಮೇತ ಕಿಳಬೇಕಾದರೆ ಇಂತಹ ಸಮಾವೇಶಗಳು ಬಹಳ ಮುಖ್ಯವಾಗಿವೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಪ್ರಕಟಣೆ ಮೂಲಕ ರಾಜ್ಯದ ಎಲ್ಲಾ ರೈತರಿಗೂ ಮುಕ್ತವಾಗಿ ಆವ್ಹಾನ ನೀಡಿದ್ದಾರೆ.

