ಜನಾಕ್ರೋಶ ಯಾತ್ರೆಯಲ್ಲಿ 3ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ | ಮಾಜಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ವಿಜಯಪುರ ಜನಾಕ್ರೋಶ ಯಾತ್ರೆಯ ಸಭೆಯಲ್ಲಿ ದೇವರಹಿಪ್ಪರಗಿ ಮತಕ್ಷೇತ್ರದ ಮೂರು ಸಾವಿರ ಜನ ಭಾಗವಹಿಸುವ ನಿರೀಕ್ಷೆಯಿದೆ ಎಂದು ಮಾಜಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಜನಾಕ್ರೋಶ ಯಾತ್ರೆಯ ಅಂಗವಾಗಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳಿಂದ ಜನಸಾಮಾನ್ಯರು ಬೇಸತ್ತು ಬಳಲುವಂತಾಗಿದೆ. ದಿನಬಳಕೆಯ ವಸ್ತುಗಳು ಬೆಲೆ ದಿನದಿಂದ ದಿನಕ್ಕೆ ಆಕಾಶದೆತ್ತರಕ್ಕೆ ಏರುತ್ತಿವೆ. ಜೊತೆಗೆ ಜಾತಿಗಣತಿ ನೆಪದಲ್ಲಿ ರಾಜ್ಯದಲ್ಲಿ ಜಾತಿ ರಾಜಕೀಯ ಆರಂಭಗೊಂಡಿದೆ. ಇದರಿಂದ ಜನತೆ ಹತಾಶೆಗೊಂಡಿದ್ದು ಜನಕ್ರೋಶ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಬೆಂಬಲ ವ್ಯಕ್ತಪಡಿಸಬೇಕು ಎಂದರು.
ಬಿಜೆಪಿ ಮುಖಂಡ ವಿಜಯಕುಮಾರ ಕೂಡಗಿನವರ ಪ್ರಾಸ್ತಾವಿಕವಾಗಿ ಮಾತನಾಡಿ, ದಿ.೧೭ ರಂದು ಗುರುವಾರ ವಿಜಯಪುರದ ದರ್ಬಾರ ಶಾಲಾ ಮೈದಾನದಲ್ಲಿ ಜರುಗುವ ಸಭೆಯಲ್ಲಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕರೆ ನೀಡಿದರು.
ಬಿಜೆಪಿ ಜಿಲ್ಲಾ ಧುರೀಣ ಉಮೇಶ ಕೋಳಕೂರ, ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ(ಅಸ್ಕಿ), ಜಿಲ್ಲಾ ಕಾರ್ಯದರ್ಶಿ ರಮೇಶ ಮಸಬಿನಾಳ, ರೈತಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದು ಬುಳ್ಳಾ, ಮಂಡಲ ಅಧ್ಯಕ್ಷ ಅವ್ವಣ್ಣ ಗ್ವಾತಗಿ, ಪ್ರಕಾಶ ದೊಡಮನಿ, ಸಿದ್ರಾಮಯ್ಯ ಮಠ(ಸಾತಿಹಾಳ), ಹುಸೇನ್ ಗೌಂಡಿ, ಸೋಮಶೇಖರ ಹಿರೇಮಠ, ರಾವುತ ಅಗಸರ, ಮಹಾಂತೇಶ ಬಿರಾದಾರ, ರಮೇಶ ಈಳಗೇರ, ಭೀಮನಗೌಡ ಲಚ್ಯಾಣ, ದಾವೂಲ್ ಇನಾಮದಾರ(ಮುಳಸಾವಳಗಿ), ಸೋಮು ದೇವೂರ ಸೇರಿದಂತೆ ಇತರರು ಇದ್ದರು.