ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಸಾರ್ವಜನಿಕರ ಗಮನ ಬೇರೆ ಕಡೆಗೆ ಸೆಳೆದು ಬೆಲೆ ಬಾಳುವ ವಸ್ತುಗಳನ್ನು, ಬಂಗಾರದ ಒಡವೆಗಳನ್ನು ಮತ್ತು ಹಣವನ್ನು ಕಳ್ಳತನ ಮಾಡುವಂತಹ ಗ್ಯಾಂಗ್ ಬಂದಿದೆ. ಇತ್ತೀಚಿಗೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬಂದಿದ್ದು ಕಳ್ಳರು ತಾವು ಸಿಬಿಐ ಪೊಲೀಸರ್ ಅಂತ ಸುಳ್ಳು ಹೇಳಿಕೊಂಡು ಮೈಮೇಲೆ ಬಂಗಾರ ಹಾಕಿಕೊಂಡು ಓಡಾಡುವರಲ್ಲಿ ಕಳ್ಳರು ಬಂದಿದ್ದಾರೆ ಈ ರೀತಿ ಬಂಗಾರವನ್ನು ಹಾಕಿಕೊಂಡು ತಿರುಗಾಡಬಾರದು ಎಂದು ಬಂಗಾರವನ್ನು ತೆಗೆಸಿ ತಮ್ಮ ಬ್ಯಾಗಿನಲ್ಲಿ ಇರಿಸುವಂತೆ ಮಾಡಿ ಬ್ಯಾಗ್ ನಿಂದ ಕಳ್ಳತನ ಮಾಡುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರು ಈ ತರದ ವ್ಯಕ್ತಿಗಳಿಂದ ಎಚ್ಚರಿಕೆಯಿಂದ ಇರಬೇಕು ಮತ್ತು ಅನುಮಾಸ್ಪದ ವ್ಯಕ್ತಿಗಳು ಕಂಡಲ್ಲಿ ಕೂಡಲೇ ಪೊಲೀಸ್ ಠಾಣೆಗೆ ತಿಳಿಸಬೇಕೆಂದು ಪಿಎಸ್ಐ ಸಂಜಯ ತಿಪರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
