ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಮದುಲಾ ಮಾರುತಿ ದೇವಾಲಯಕ್ಕೆ ಸಂಸದ ರಮೇಶ ಜಿಗಜಿಣಗಿ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು.
ಹನುಮಾನ ಜಯಂತಿ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಭೇಟಿ ನೀಡಿದ ಸಂಸದ ಜಿಗಜಿಣಗಿ, ಭಕ್ತಿಭಾವದಿಂದ ಶ್ರೀ ಹನುಮಂತನಿಗೆ ನಮಸ್ಕರಿಸಿ, ಸಕಲರಿಗೂ ಒಳಿತನ್ನು ಮಾಡುವಂತೆ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ ವಿಜಯ್ ಜೋಶಿ ಮೌನೇಶ್ ಪತ್ತಾರ್, ದತ್ತಾತ್ರೇಯ ಜೋಶಿ ವ ಉಮೇಶ್ ದೇಸಾಯಿ, ವಿವೇಕ್ ದಾರೇಕರ್, ಏಕನಾಥ ಶಿಂದೆ, ಶಂಕರ ಗಣಿಯಾರ, ಹರೀಶ್ ಜೋಶಿ ರಾಕೇಶ್ ಕುಲಕರ್ಣಿ ಇದ್ದರು.

