Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ

ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ

ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಮೌಲ್ಯಗಳ ಮಹಾನಾಯಕ ಡಾ. ಬಿ.ಆರ್.ಅಂಬೇಡ್ಕರ್
ವಿಶೇಷ ಲೇಖನ

ಮೌಲ್ಯಗಳ ಮಹಾನಾಯಕ ಡಾ. ಬಿ.ಆರ್.ಅಂಬೇಡ್ಕರ್

By Updated:No Comments6 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ನಾಳೆ (ಏಪ್ರಿಲ್ ೧೪ ಸೋಮವಾರ) ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ಈ ವಿಶೇಷ ಲೇಖನ

ಲೇಖನ
– ಶೈಲಜಾ ಅಲಗೂರ
ಉಪನ್ಯಾಸಕರು
ಶಿವಣಗಿ
ವಿಜಯಪುರ ಜಿಲ್ಲೆ

ಉದಯರಶ್ಮಿ ದಿನಪತ್ರಿಕೆ

ಜಗತ್ತಿನ ಮಾನವ ಹಕ್ಕುಗಳ ಮಹಾನ್ ಪ್ರತಿಪಾದಕ, ಜ್ಯಾತ್ಯಾತೀತ ನವಭಾರತದ ನಿರ್ಮಾಪಕ, ಸಮಸಮಾಜದ ಸ್ಥಾಪಕ, ಮಾನವೀಯ ಮೌಲ್ಯಗಳ ಪಿತಾಮಹ, ಜ್ಞಾನಸೂರ್ಯ, ಸಂವಿಧಾನ ಶಿಲ್ಪಿ, ವಿಶ್ವರತ್ನ, ಘನವಿದ್ವಾಂಸ, ಬೌದ್ಧಬಿಕ್ಕು, ಮಾನವತಾವಾದಿ, ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್. ಈ ದೇಶದಲ್ಲಿ ಶಿಕ್ಷಕರು, ಗುರುಗಳ ಮಾರ್ಗದರ್ಶನದಲ್ಲಿ ಲಕ್ಷಾಂತರ ಜನರು ವಿಶ್ವವಿಖ್ಯಾತಿ ಪಡೆದಿದ್ದಾರೆ. ಆದರೆ ಕೇವಲ ಇಬ್ಬರು ಮಾತ್ರ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ವಿಶ್ವ ವಿಖ್ಯಾತಿಗೊಳಿಸಿದ್ದಾರೆ. ಅವರೇ    ಸ್ವಾಮಿ ವಿವೇಕಾನಂದರು (ಗುರು :ಪರಮಹಂಸ )ಮತ್ತು ಡಾ. ಬಿ.ಆರ್. ಅಂಬೇಡ್ಕರ್ (ಗುರು : ಅಂಬೇಡ್ಕರ್ ). ಡಾ. ಬಿ. ಆರ್. ಅಂಬೇಡ್ಕರ್ ಅವರು 14 ನೇ ಏಪ್ರಿಲ್ 1891ರಲ್ಲಿ ಮಧ್ಯಪ್ರದೇಶದ ಮಾಹೋ ಎಂಬ ಮಿಲಿಟರಿ ಕ್ಯಾಂಪ್ನಲ್ಲಿ ಜನ್ಮ ತಾಳಿದರು. ಸುಭೇದಾರ್ ರಾಮಜಿ ಸಕ್ಪಾಲ್ ಮತ್ತು ಭೀಮಾಬಾಯಿಗೆ ಹದಿನಾಲ್ಕನೇ ಮಗುವಾಗಿ ಜನಿಸಿದ ಭೀಮರಾವ್ ಮುಂದೊಂದು ದಿನ ವಿಶ್ವಕ್ಕೆ ರತ್ನಖಚಿತ ಕಿರೀಟದಂತೆ ಹೊಳೆದರು. ರಾಮಜಿ ಸಕ್ಪಾಲ್ ಅವರು ಮಿಲಿಟರಿ ಶಾಲೆಯಲ್ಲಿ ಮುಖ್ಯ ಗುರುಗಳಾಗಿ ಹದಿನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಇವರು ಮರಾಠಿ, ಹಿಂದಿ ಭಾಷೆಯ ಪ್ರಭುದ್ಧತೆ ಜೊತೆಗೆ ಆಂಗ್ಲ ಭಾಷೆ ಬಲ್ಲವರಾಗಿದ್ದರು. ರಾಮಜಿ ಸಾಕ್ಪಾಲ್ ಇವರಲ್ಲಿದ್ದ ದೇಶಭಕ್ತಿ, ಜ್ಞಾನ, ಧರ್ಮದ ಬಗೆಗಿನ ತಿಳುವಳಿಕೆ, ಕಭೀರರ ದೋಹೆಗಳು ಮತ್ತು ನೀತಿ ಪಾಠಗಳನ್ನು ಮಕ್ಕಳಿಗೆ ದಿನನಿತ್ಯ ಹೇಳಿಕೊಡುವುದರಿಂದ ಅಂಬೇಡ್ಕರ್ ಅವರಲ್ಲಿ ಅಪಾರ ಬುದ್ಧಿವಂತಿಕೆ, ಉತ್ತಮ ಸಂಸ್ಕೃತಿ ರೂಢಿಸಿಕೊಳ್ಳಲು ಸಹಾಯವಾಯಿತು. ರಾಮಜಿ ಸಾಕ್ಪಾಲ್ ರವರು ಮಿಲಿಟರಿ ಸೇವೆಯಿಂದ ನಿವೃತ್ತಿ ಹೊಂದಿದ ನಂತರ ಸಾತಾರಕ್ಕೆ ಬಂದು ನೆಲೆಸಿದರು. ಭೀಮರಾವ್ ಅವರ ಪ್ರಾಥಮಿಕ ಶಿಕ್ಷಣ ಸಾತಾರದಲ್ಲಿ ಪ್ರಾರಂಭವಾಯಿತು. ಅದೇ ವರ್ಷ ಅವರ ತಾಯಿಯ ಅಗಲಿಕೆ ನೋವು ಭೀಮರಾವ್ ಅನುಭವಿಸುವಂತಾಯಿತು. ಸದಾ ಕರುಣೆ ಮೂರ್ತಿಯಾಗಿದ್ದ ಅತ್ತೆ ಮೀರಾಳಲ್ಲಿ ತಾಯಿಯ ಪ್ರೀತಿ ವಾತ್ಸಲ್ಯ ಕಂಡರು.

ಜಾತಿ ಎಂಬ ಅನಿಷ್ಠ ಪದ್ಧತಿಯಲ್ಲಿ ತೇಲಾಡುತಿದ್ದ ಜನಗಳು, ಸಹಪಾಠಿಗಳು ಭೀಮನ ಓದಿಗೆ ವಿರುದ್ಧವಾಗಿಯೇ ನಿಲ್ಲತೊಡಗಿದರು. ಅಸ್ಪೃಶ್ಯತೆ ಆಚರಣೆಯಲ್ಲಿ ಮಿಂದೆದ್ದ ಜನತೆಗೆ ಜ್ಞಾನದ ಅರಿವು ಇಲ್ಲದಂತಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಭೀಮರಾವ್ ಶಾಲೆ ಒಳಗಡೆ ಸೇರದೆ ಹೊರಗಡೆ ಕುಳಿತು ಪಾಠ ಕಲಿಯುವಂತಾಯಿತು. ಬಡತನ, ಜಾತೀಯತೆ ಇದರಿಂದ ನೊಂದ ಭೀಮರಾವ್ ಓದು ಇದಕೆಲ್ಲಾ ಮುಕ್ತಿ ಎಂದು ನಿರ್ಧರಿಸಿ ತಮ್ಮ ಹಠವನ್ನು ಪುಸ್ತಕದೆಡೆಗೆ ತಿರುಗಿಸಿದರು. ಅಸ್ಪೃಶ್ಯ ಎಂಬ ಕೀಳರಿಮೆಯಿಂದ ಶಿಕ್ಷಕರು, ಸಹಪಾಠಿಗಳು ಎಲ್ಲರೂ ಇವರನ್ನು ಕೀಳಾಗಿ ನೋಡುತಿದ್ದರು. ಯಾರೂ ಇವರ ಪ್ರತಿಭೆ ಗುರುತಿಸಲಿಲ್ಲ. ಶಿಕ್ಷಕರಲ್ಲಿ ಒಬ್ಬರಾದ ಪೆಂಡೆಸೆ ಅಂಬೇಡ್ಕರ್ ಎಂಬ ಶಿಕ್ಷಕರು ಈ ಬಾಲಕನ ಪ್ರತಿಭೆ, ಕಲಿಯುವ ಹಂಬಲ, ಸೂಕ್ಷ್ಮ ಬುದ್ಧಿಯನ್ನು ಗುರುತಿಸಿ ಇವರಿಗೆ ಪ್ರೋತ್ಸಾಹಿಸಿದರು. ಇದೆ ಪೆಂಡೆಸ್ ಅಂಬೇಡ್ಕರ್ ಭೀಮರಾವರವರ ಹೆಸರನ್ನು ತಮ್ಮ ಅಡ್ಡ ಹೆಸರಾದ ಅಂಬೇಡ್ಕರ್ ಎಂಬ ಹೆಸರನ್ನು ಭೀಮನ ಹೆಸರಿಗೆ ಬದಲಿಸಿ ಕೊಟ್ಟರು. ಪ್ರಾಥಮಿಕ ಶಿಕ್ಷಣ ಸಾತಾರದಲ್ಲಿ ಮುಗಿಸಿದ ಭೀಮರಾವ್ ಅಂಬೇಡ್ಕರ್ ಮಾಧ್ಯಮಿಕ ಶಿಕ್ಷಣಕ್ಕಾಗಿ ಬಾಂಬೆಯ ಸರ್ಕಾರಿ ಪ್ರೌಢ ಶಾಲೆಯಾದ ಎಲ್ಲಿಫಿನ್ಸ್ಟನ್ ಹೈಸ್ಕೂಲ್ ಸೇರುತ್ತಾರೆ. ಅಲ್ಲಿಯೂ ಅವಮಾನ, ನಿಂದನೆ, ಹೊರತಾಗಿರಲಿಲ್ಲ, ಒಂಭತ್ತನೇ ತರಗತಿಯಲ್ಲಿ ಭೀಮನಿಗೆ ಈ ಅನುಭವ ಸಿಗುತ್ತದೆ. ಶಿಕ್ಷಕರು ಬೋರ್ಡ್ ಮೇಲೆ ಹಾಕಲಾಗಿದ್ದ ಬಿಜಾಗಣಿತದ ಲೆಕ್ಕ ಶಾಲೆಯ ಯಾವ ವಿದ್ಯಾರ್ಥಿ ಕೂಡಾ ಬಿಡಿಸದಿದ್ದಾಗ ಭೀಮರಾವ್ ಬಿಡಿಸಲು ಬರುತ್ತಾರೆ. ಆದರೆ ವಿದ್ಯಾರ್ಥಿಗಳು ತಮ್ಮ ಊಟದ ಬುತ್ತಿ ಬೋರ್ಡಿನ ಹಿಂದುಗಡೆ ಇಟ್ಟರುವುದರಿಂದ ಮಹರ್ ವಿದ್ಯರ್ಥಿ ಬೋರ್ಡ್ ಮುಟ್ಟಿದರೆ ಬುತ್ತಿ ಮಲೀನವಾಗುವುದೆಂದು ನಿರಾಕರಿಸಿದರು. ಇಂತಹ ಕಠಿಣ ಅನುಭವಗಳ ಮದ್ಯ ಡಾ ಅಂಬೇಡ್ಕರ್ ಅವರು 1907ರಲ್ಲಿ 10 ನೇ ತರಗತಿಯನ್ನು ಉತ್ತಮ ಅಂಕಗಳೊಂದಿಗೆ ಪಾಸಾಗುತ್ತಾರೆ. ಇವರ ಈ ಸಾಧನೆಯನ್ನು ಸಮಾಜ ಸುಧಾರಕರಾದ ಎಸ್. ಕೆ. ಭೋಲೆ ಮತ್ತು ಸರ್ಕಾರಿ ಶಾಲೆಯ ನಿವೃತ್ತ ಶಿಕ್ಷಕರಾದ ಕೆ. ಎ. ಕೆಲಸ್ಕರ್ ರವರು ಭೀಮರಾವ್ ಅಂಬೇಡ್ಕರ್ ರವರನ್ನು ತುಂಬು ಹೃದಯದಿಂದ ಅಭಿನಢಿಸಿದರು. ಕೆ.ಎ. ಕೆಲಸ್ಕರ್ ರವರು ತಾವೇ ಬರೆದ ಭಾಗವಾನ್ ಬುದ್ಧನ ಚರಿತ್ರೆಯ ಪುಸ್ತಕವನ್ನು ಭೀಮರಾವ್ ರವರಿಗೆ ಕಾಣಿಕೆಯಾಗಿ ನೀಡುತ್ತಾರೆ. ಮುಂದೆ ಅಂಬೇಡ್ಕರ್ ಅವರು ಬೌದ್ಧ ಧರ್ಮ ಸೇರಲು ಈ ಪುಸ್ತಕ ನಾಂದಿಯಾಯಿತು.


10 ನೇ ತರಗತಿ ಪಾಸಾದ ನಂತರ ಇವರ ಮನೆಯವರು ದಾಪೋಲಿಯ ಬಿಕ್ಕು ವಾಲಂಗಕರ್ ಅವರ ಎರಡನೇ ಪುತ್ರಿ ರಾಮಾಬಾಯಿಯೊಂದಿಗೆ ಅಂಬೇಡ್ಕರವರ ಬಾಲ್ಯ ವಿವಾಹ ನಡೆಯುತ್ತದೆ. ಹಗಲಿನಲ್ಲಿ ಮದುವೆಗೆ ಎಲ್ಲಿಯೂ ಅಸ್ಪೃಶ್ಯರಿಗೆ ಜಾಗ ನೀಡುತ್ತಿರಲಿಲ್ಲ, ಹಾಗಾಗಿ ರಾತ್ರಿ 8 ಕ್ಕೆ ಮುಂಬೈನ ‘ ಬೈಕಳ ‘ ಎಂಬ ಮೀನು ಮಾರುಕಟ್ಟೆಯಲ್ಲಿ ಇವರ ವಿವಾಹ ಕೆಲವೇ ಕೆಲವು ಜನರ ಸಮ್ಮುಖದಲ್ಲಿ ನಡೆಯಿತು. ನಂತರ ಮದುವೆ ನಡೆದ ಜಾಗವನ್ನು ಸಗಣಿಯಿಂದ ತೊಳೆದು ಶುಚಿಗೊಳಿಸಲಾಯಿತು. 1912ರಲ್ಲಿ PUC ಮತ್ತು BA ವ್ಯಾಸಂಗಕ್ಕಾಗಿ ಕೆ. ಎ. ಕೆಲಸ್ಕರವರು ಇವರಿಗೆ ಒಪ್ಪಂದದ ಮೇರೆಗೆ ಸಯ್ಯಾಜಿ ಗಾಯಕವಾಡರಿಂದ 25 ಸಾವಿರ ರೂ. ಗಳನ್ನು ಶಿಕ್ಷಣ ವೇತನ ಕೊಡಿಸುತ್ತಾರೆ. BA ಮುಗಿದ ನಂತರ ಸಯ್ಯಾಜಿ ಗಾಯಕವಾಡ್ ಇವರ ಆಸ್ಥಾನದಲ್ಲಿ ಕೆಲಸ ಮಾಡಲು ಅಂಬೇಡ್ಕರರವರು ಒಪ್ಪಿಗೆ ಸೂಚಿಸುತ್ತಾರೆ. ಅನಿವಾರ್ಯ ಕಾರಣಗಳಿಂದ ಅಂಬೇಡ್ಕರ್ ಅವರು ಹದಿನೈದು ದಿನಗಳ ಕಾಲ ಕೆಲಸ ಮಾಡಿ, ಅಲ್ಲಿಂದ ಉನ್ನತ ವ್ಯಾಸಂಗದಲ್ಲಿ ಆಸಕ್ತಿ ತೋರಿಸಿ ಬರೋಡದ ಸಾಹುಮಹಾರಾಜರ ಶಿಷ್ಯವೇತನದಲ್ಲಿ 1913 ರಲ್ಲಿ ಅಮೇರಿಕದ ಕೋಲಂಬಿಯಾ ವಿಶ್ವವಿದ್ಯಾಲಯದಲ್ಲಿ ಓದಲು ಹೋಗುತ್ತಾರೆ. ಅಲ್ಲಿ ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ತತ್ವಜ್ಞಾನ, ತರಕಾಶಾಸ್ತ್ರ, ರಾಜ್ಯಶಾಸ್ತ್ರದಲ್ಲಿ ಅಧ್ಯಯನ ಮಾಡಿ 1915ರಲ್ಲಿ ‘ಪ್ರಾಚೀನ ಭಾರತದ ವಾಣಿಜ್ಯ’ ಬಗ್ಗೆ ಪ್ರಬಂಧ ಮಂಡಿಸಿ MA ಪದವಿ ಪಡೆದರು. ಅಂತಾರಾಷ್ಟ್ರೀಯ ಸಮಾಜಶಾಸ್ತ್ರೀಯ ವಿಚಾರ ಸಂಕಿರ್ಣದಲ್ಲಿ ‘ಭಾರತೀಯ ಜಾತಿಗಳು’ ಎಂಬ ಪ್ರಬಂಧ ಮಂಡಿಸಿದರು. 1916 ರಲ್ಲಿ ‘ ಭಾರತದಲ್ಲಿ ರಾಷ್ಟ್ರೀಯ ಉತ್ಪನ್ನ ‘ ಎಂಬ ಪ್ರಬಂಧಕ್ಕೆ ಫೋಟೋ. Ph.D ಪದವಿಯನ್ನು ಪಡೆದರು. ಅಮೇರಿಕಾದಲ್ಲಿ MA, Ph.D ಪಡೆದು ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ತೆರಳಿದರು. ಲಂಡನ್ ವಿಶ್ವವಿದ್ಯಾಲಯದಲ್ಲಿ DSP ಪದವಿಗಾಗಿ ಹೆಸರು ನೋಂದಾಯಿಸಿಕೊಳ್ಳುತ್ತಾರೆ, ಅದೇ ವೇಳೆಗೆ ಇವರ ಶಿಷ್ಯವೇತನದ ಅವಧಿ ಮುಗಿದ ಕಾರಣ ಪೂರ್ವ ನಿಗದಿತ ಒಪ್ಪಂದದಂತೆ ಡಾ. ಅಂಬೇಡ್ಕರ್ ರವರು ಬರೋಡದ ಮಹಾರಾಜರ ಆಸ್ಥಾನದಲ್ಲಿ ಸೈನ್ಯದ ಕಾರ್ಯದರ್ಶಿಯಾಗಿ ಕೆಲಸಕ್ಕೆ ಸೇರಿದರು. ಅಸ್ಪೃಶ್ಯತೆ ಆಚರಣೆ ನೋವು ಅಲ್ಲಿವೂ ಅನುಭವಿಸುವಂತಾಗಿ ಕೆಲಸ ಬಿಡುವಂತಾಯಿತು. ಬಾಂಬೆಯ ಸಿಡ್ಯಾಮ್ ಕಾಲೇಜಿನಲ್ಲಿಯೂ ಇದೆ ಅನುಭವ ಮಾರುಕಳಿಸಿತು. ಈ ಮಧ್ಯ 1920 ರಲ್ಲಿ “ಮುಖನಾಯಕ” ಎಂಬ ಪತ್ರಿಕೆ ಪ್ರಕಟಿಸಿದರು. ಆಗ ಕೋಲ್ಹಪುರದ ಸಾಹು ಮಹಾರಾಜರು ಪ್ರೋತ್ಸಾಹ ನೀಡಿ ಶಿಷ್ಯವೇತನ ಜಾರಿಗೊಳಿಸಿದರು, ಸಾಹು ಮಹಾರಾಜರ ಸಹಾಯ ಸಹಕಾರದಿಂದ ಅಂಬೇಡ್ಕರರವರು ಲಂಡನ್ನಿಗೆ ತೆರಳಿ MSc ಪದವಿ ಪಡೆದರು.
ಅತಿಹೆಚ್ಚು ಕಷ್ಟ ಪಟ್ಟು ಒಂದು ದಿನಕ್ಕೆ ಅರ್ಧ ಬ್ರೆಡ್ ಊಟ ಮಾಡಿ ಲಂಡನ್ ಮ್ಯೂಸಿಯಂ ಎಂಬ ಗ್ರಂಥಾಲಯದಲ್ಲಿ ದಿನಕ್ಕೆ 18ಗಂಟೆಗಳ ಕಾಲ ಅಧ್ಯಯನ ಮಾಡಿದರು. 1921ರಲ್ಲಿ “ಬ್ರಿಟಿಷ್ ಭಾರತದಲ್ಲಿ ಸಾಮ್ರಾಜ್ಯಶಾಹಿಯ ಹಣಕಾಸಿನ ವಿಕೇಂದ್ರೀಕರಣ” ಎಂಬ ಪ್ರಬಂಧಕ್ಕೆ DSc ಪದವಿ, ಗ್ರೇಸ್ ಇನ್ ಕಾಲೇಜಿನಿಂದ LLD ಪಡೆಯುತ್ತಾರೆ. ಆರ್ಥಿಕ ಕಷ್ಟ ಎದುರಾಗಿ ಭಾರತಕ್ಕೆ ಹಿಂದಿರುಗಿ ವಕೀಲ ವೃತ್ತಿ ಆರಂಭಿಸುತ್ತಾರೆ. ದಲಿತ ವರ್ಗದವರನ್ನು ಜಾಗೃತರನ್ನಾಗಿ ಮಾಡಲು ಅವರಲ್ಲಿ ಶಿಕ್ಷಣದ ಅರಿವು ಪ್ರಸಾರ ಮಾಡಲು, ಸಂಸ್ಕೃತಿ ಬಗ್ಗೆ ತಿಳಿಸಲು, ಆರ್ಥಿಕ ಸೌಕರ್ಯ ಮಾಡಲು ಹಾಗೂ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ‘ಬಹಿಸ್ಕೃತ ಭಾರತ’ ಪತ್ರಿಕೆಯನ್ನು ಪ್ರಾರಂಭಿಸುತ್ತಾರೆ. ಸಾಮಾಜಿಕ ಹೋರಾಟದ ಜೀವನ ಪ್ರಾರಂಭಿಸಿದ ಇವರು 1927ರಲ್ಲಿ ಮಹಾಡದ ಚೌಡಾರ್ ಕೆರೆಯ ನೀರನ್ನು ಮುಟ್ಟುವ ಚಳುವಳಿ ಹಮ್ಮಿಕೊಳ್ಳುತ್ತಾರೆ. 1927ರಲ್ಲಿ ಶ್ರೇಣಿ ಪದ್ಧತಿಯ ವರ್ಣಶ್ರಮ ಹಾಗೂ ಸ್ತ್ರೀದಮನ ಮಂಡಿಸಿದ್ದ ಮನುಸ್ಮೃತಿಯನ್ನು ಸುಟ್ಟುಹಾಕುತ್ತಾರೆ. 1930ರಲ್ಲಿ ಕಾಳಾರಾಮ ದೇವಸ್ಥಾನ ಪ್ರವೇಶ ಚಳುವಳಿ ಮಾಡುತ್ತಾರೆ. 1927ರಲ್ಲಿ ಮುಂಬಯಿ ಶಾಸಕಾಂಗದ ಸದಸ್ಯರಾಗಿ, 1930 ರಿಂದ 1932 ರವರೆಗೆ ಲಂಡನ್ನಿನ ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗವಹಿಸಿ ದಲಿತರಿಗೆ ಪ್ರತ್ಯೇಕ ಮತದಾನದ ಹಕ್ಕು, ದಲಿತರಿಗೆ ಆಳ್ವಿಕೆ ಮಾಡುವ ಅಧಿಕಾರ ದೊರಕಿಸಿಕೊಡುತ್ತಾರೆ. ಪ್ರತ್ಯೇಕ ಮತದಾನ ಹಕ್ಕಿನಿಂದ ಹಿಂದೂ ಧರ್ಮ ಒಡೆದು ಹೋಗುವುದು ಎಂಬ ಉದ್ದೇಶದಿಂದ ಯರವಾಡ ಜೈಲಿನಲ್ಲಿ ಗಾಂಧೀಜಿಯವರು ಅಮರಣಾಂತ ಉಪವಾಸ ಕೈಗೊಳ್ಳುತ್ತಾರೆ. ಇದಕ್ಕೆ ಮಣಿದ ಅಂಬೇಡ್ಕರರವರು ಒಲ್ಲದ ಮನಸ್ಸಿನಿಂದ ಕಣ್ಣೀರಿಡುತ್ತ ‘ಪೂನಾ ಒಪ್ಪಂದಕ್ಕೆ’ ಸಹಿ ಹಾಕುತ್ತಾರೆ. ಡಿಸೇಂಬರ್ 13, 1946 ರಲ್ಲಿ ಸಂವಿಧಾನ ರಚನಾ ಸಮಿತಿಯ ಸಭೆಯಲ್ಲಿ ಅಂಬೇಡ್ಕರ್ ಅವರ ಕಾನೂನು ಪಾಂಡಿತ್ಯವನ್ನು ಅರಿತಿದ್ದ ಅಧ್ಯಕ್ಷ ಡಾ. ರಾಜೇಂದ್ರ ಪ್ರಸಾದ ಅವರು ಅಂಬೇಡ್ಕರರವರಿಗೆ ಮಾತನಾಡುವಂತೆ ಕೇಳಿಕೊಂಡಾಗ ಅಂಬೇಡ್ಕರರು ಎದ್ದು ನಿಂತು “ಅಖಂಡ ಭಾರತ ನಿರ್ಮಾಣ” ಬಗ್ಗೆ ಅರ್ಧಗಂಟೆ ಅತ್ಯಂತ ಅದ್ಭುತವಾದ ಮಾತುಗಳನ್ನಾಡಿ ಸಲಹೆಗಳನ್ನು ನೀಡಿದರು. ಪತ್ರಿಕಾರಂಗದಲ್ಲಿ ಇದೊಂದು ಹೊಸ ಹೆಜ್ಜೆಯಾಯಿತು. ಆಗಸ್ಟ್ 8,1947 ರಲ್ಲಿ ಅಂಬೇಡ್ಕರರವರು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾದರು. ಇತರ ಆರು ಜನ ಸದಸ್ಯರಿದ್ದರೂ ಕೂಡಾ ಸಂಪೂರ್ಣ ಸಂವಿಧಾನ ರಚಿಸುವ ಜವಾಬ್ದಾರಿ ಇವರ ಹೆಗಲೇರಿತು. ಹಗಲು ರಾತ್ರಿ ಸಂವಿಧಾನ ಬರೆದು 1950 ರಲ್ಲಿ ಮುಗಿಸುತ್ತಾರೆ. 1947 ರಲ್ಲಿ ಪಂಡಿತ್ ಜವಾಹರಲಾಲ ನೆಹರೂ ಅವರ ಮಂತ್ರಿ ಮಂಡಲದಲ್ಲಿ ಕಾನೂನು ಮಂತ್ರಿಯಾಗಿ ಹಲವಾರು ಯೋಜನೆಗಳನ್ನು ರೂಪಿಸಿಕೊಟ್ಟರು. ಪಂಚವಾರ್ಷಿಕ ಯೋಜನೆ, ಭಾಕ್ರಾನಂಗಲ್ ಆಣೆಕಟ್ಟು ಯೋಜನೆ, ಉತ್ತರ ಮತ್ತು ದಕ್ಷಿಣ ಭಾರತ ನದಿಗಳ ಜೋಡಣೆಗೆ ಮಾರ್ಗದರ್ಶಕರಾಗಿ ದುಡಿದರು. ಅದಕ್ಕೆ ನೆಹರೂರವರು ವಿದೇಶಿ ಗಣ್ಯರಿಗೆ ಇವರನ್ನು ಪರಿಚಯಿಸುವಾಗ ‘ಡಾ.ಅಂಬೇಡ್ಕರ್ ನನ್ನ ಮಂತ್ರಿಮಂಡಲದ ವಜ್ರವಾಗಿದ್ದಾರೆ’ ಎಂದು ಪರಿಚಯಿಸುತ್ತಿದ್ದರು.1951ರ ಸಪ್ಟೆಂಬರ್ 9 ರಂದು ಡಾ ಅಂಬೇಡ್ಕರರವರು. ಕಾನೂನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದಕ್ಕೆ ಕಾರಣ ತಾವು ಮಂಡಿಸಿದ್ದ “ಹಿಂದೂ ಕೋಡ್ ಬಿಲ್” ಗೆ ತನ್ನ ಬೆಂಬಲವನ್ನು ಸಚಿವ ಸಂಪುಟ ಹಿಂತೆಗೆದುಕೊಂಡಿದ್ದು, ಇದರಲ್ಲಿ ಮಹಿಳೆಯರಿಗೆ ಆಸ್ತಿ ಹಕ್ಕು, ದತ್ತು ಸ್ವೀಕಾರದಲ್ಲಿ ಹೆಂಡತಿಗೂ ಸಮಾನ ಅಧಿಕಾರ, ಹೆಂಡತಿ ಗಂಡನಿಂದ ವಿಚ್ಚೇಧನ ಪಡೆಯುವ ಹಕ್ಕು ಮುಂತಾದ ಮಹಿಳಾಪರ ಅಂಶಗಳಿದ್ದವು.
ಇವರ ಜ್ಞಾನ ವಿದ್ವತ್ತಿಗೆ ಹಲವಾರು ವಿಶ್ವವಿದ್ಯಾಲಯಗಳಿಂದ ಸನ್ಮಾನ ಗೌರವಗಳು ಒದಗಿಬಂದವು. ಬದುಕಿನ ಕೊನೆಯ ದಿನಗಳಲ್ಲಿ ಡಾ. ಅಂಬೇಡ್ಕರರವರು ಬೌದ್ಧಧರ್ಮ ಸ್ವೀಕಾರದ ನಿರ್ಧಾರ ಮಾಡಿ ಅಕ್ಟೊಬರ್ 14, 1956 ರಲ್ಲಿ ತನ್ನ ಐದು ಲಕ್ಷ ಅನುಯಾಯಿಗಳೊಂದಿಗೆ ಪತ್ನಿ ಸವಿತಾ ಅಂಬೇಡ್ಕರ್ ಜೊತೆಗೆ ನಾಗಾ ಜನತೆಯ ಮೂಲ ನೆಲೆಯಾದ ನಾಗಪುರದಲ್ಲಿ ಬೌದ್ಧಧರ್ಮ ಸ್ವೀಕರಿಸಿ ಹಿಂದೂವಾಗಿ ಸಾಯಲಾರೆ ಎಂಬ ಪ್ರತಿಜ್ಞೆ ಪೂರ್ಣಗೊಳಿಸಿದರು. ಡಿಸೇಂಬರ್ 6,1956 ರಲ್ಲಿ ರಾತ್ರಿ ಬುದ್ಧನ ಪುಸ್ತಕ ಹಿಡಿದೇ ಡಾ. ಅಂಬೇಡ್ಕರರವರು ಪರಿನಿರ್ವಾಣ ಹೊಂದಿದ್ದರು. ಬೆಳಿಗ್ಗೆ ಪತ್ನಿ ಸವಿತಾ ಅಂಬೇಡ್ಕರ್ ಅಧ್ಯಯನ ಕೊಠಡಿಗೆ ಹೋದಾಗ ಅಂಬೇಡ್ಕರ್ ಅವರ ಕೈಯಲ್ಲಿ ಬುದ್ಧನ ಪುಸ್ತಕ ಹಿಡಿದ್ದರು, ಆದರೆ ಪ್ರಾಣಪಕ್ಷಿ ಹಾರಿಹೋಗಿತ್ತು. ತಮ್ಮ ಜೇವಮಾನದ ಪ್ರತಿಕ್ಷಣ ಓದುವುದು, ಬರೆಯುವದು ಮತ್ತು ಹೋರಾಟದಲ್ಲೇ ಕೋಟ್ಯಂತರ ಶೋಷಿತರಿಗೆ ಬದುಕು ನೀಡಿದರು. ಅಂದು ಇಡೀ ದೇಶ ಸ್ತಬ್ದವಾಯಿತು. ಲಕ್ಷಾಂತರ ಜನರು ತಂಡೋಪ ತಂಡವಾಗಿ ಅಂಬೇಡ್ಕರರನ್ನು ನೋಡಲು ಬರಲಾರಂಭಿಸಿದರು. ತಮ್ಮ ಜೇವಮಾನವಿಡಿ ಬರೀ ನೋವು, ಅವಮಾನ, ಕಷ್ಟದ ಸಂಕೋಲೆಗಳನ್ನು ಅನುಭವಿಸುತ್ತ ಶೋಷಿತ ವರ್ಗಗಳಿಗೆ ದಾರಿದೀಪವಾದರು. ಪ್ರಭುದ್ಧ ಭಾರತಕ್ಕೆ ಸಾಂವಿಧಾನಿಕ ಶಕ್ತಿ ತುಂಬಿ ಕೊಟ್ಟರು. ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಹಕ್ಕು ಮತ್ತು ಕರ್ತವ್ಯಗಳನ್ನು ಕಟ್ಟಿಕೊಟ್ಟರು. ಮಹಿಳೆ, ಮಕ್ಕಳು, ಶೋಷಿತರು ಹೀಗೆ ಎಲ್ಲಾ ವರ್ಗದ ಜನರು ಇಂದು ಸಂವಿಧಾನದಡಿಯಲ್ಲಿ ನೆಮ್ಮದಿಯಿಂದ, ಧೈರ್ಯದಿಂದ ಜೀವಿಸಲು ಬದುಕು ಕಟ್ಟಿಕೊಟ್ಟ ಈ ಮಹಾನ್ ನಾಯಕನಿಗೆ ಕೋಟಿ ಕೋಟಿ ನಮನಗಳು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ

ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ

ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!

ಕ್ರಿಕೆಟ್ ಕ್ರೀಡಾಪಟುಗಳಿಗೆ ಪ್ರತ್ಯೇಕ ಕ್ರೀಡಾಂಗಣ ಕಲ್ಪಿಸಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ
    In (ರಾಜ್ಯ ) ಜಿಲ್ಲೆ
  • ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!
    In (ರಾಜ್ಯ ) ಜಿಲ್ಲೆ
  • ಕ್ರಿಕೆಟ್ ಕ್ರೀಡಾಪಟುಗಳಿಗೆ ಪ್ರತ್ಯೇಕ ಕ್ರೀಡಾಂಗಣ ಕಲ್ಪಿಸಿ
    In (ರಾಜ್ಯ ) ಜಿಲ್ಲೆ
  • ಆಶ್ರಯ ಕಾಲೊನಿ ನಿವಾಸಿಗಳಿಗೆ ಶೀಘ್ರ ಹಕ್ಕುಪತ್ರ ವಿತರಣೆ
    In (ರಾಜ್ಯ ) ಜಿಲ್ಲೆ
  • ಧರ್ಮಸ್ಥಳ ಸಂಘ ಕಾರ್ಯ ಶ್ಲಾಘನೀಯ :ಎಸಿ ಅನುರಾಧ
    In (ರಾಜ್ಯ ) ಜಿಲ್ಲೆ
  • ಮಹಿಳೆಯರ ಸ್ವಾವಲಂಬನೆಗೆ ಗ್ಯಾರಂಟಿ ಯೋಜನೆಗಳು ಸಹಕಾರಿ
    In (ರಾಜ್ಯ ) ಜಿಲ್ಲೆ
  • ವೈಜ್ಞಾನಿಕ ಮನೋಭಾವದ ಕೊರತೆಯಿಂದ ಮೌಢ್ಯಗಳ ಹೆಚ್ಚಳ
    In (ರಾಜ್ಯ ) ಜಿಲ್ಲೆ
  • ಕೊಂಡಗೂಳಿಗೆ ಸರ್ಕಾರಿ ಪ್ರೌಢಶಾಲೆ ಮಂಜೂರಿಗೆ ಆಗ್ರಹಿಸಿ ಸಚಿವರಿಗೆ ಮನವಿ
    In (ರಾಜ್ಯ ) ಜಿಲ್ಲೆ
  • ಬಸವ ಚೇತನ ಪ್ರಶಸ್ತಿಗೆ ಕೆ.ಎಸ್.ಕೋರಿ ಆಯ್ಕೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.