ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಐತಿಹಾಸಿಕ ಬಸವೇಶ್ವರ ದೇವಸ್ಥಾನ ಮುಂಭಾಗ ವಿವೇಕ ಬ್ರಿಗೇಡ್ ಸಂಸ್ಥೆಯ ಬೇಸಿಗೆಕಾಲದ ಹಿನ್ನೆಲೆಯಲ್ಲಿ ಜನರ ಬೇಸಿಗೆಯ ಬೇಗೆಯನ್ನು ತಣಿಸಲು ಕುಡಿಯುವ ನೀರಿನ ಅರವಟ್ಟಿಗೆ ಸೇವೆ ಹಾಗೂ ಪ್ರಾಣಿ-ಪಕ್ಷಿಗಳಿಗೆ ದವಸ ಧಾನ್ಯ, ಕುಡಿಯಲು ನೀರಿನ ವ್ಯವಸ್ಥೆಗೆ ಸಿದ್ದಲಿಂಗ ಸ್ವಾಮೀಜಿ, ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ ಅವರು ಶನಿವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಈ ವರ್ಷದಲ್ಲಿ ಬೇಸಿಗೆ ಬಿಸಿಲು ಬಹಳವಾಗಿದೆ. ಮಾರುಕಟ್ಟೆ ಬರುವ ಜನರ ಬೇಗೆ ತಣಿಸಲು ವಿವೇಕ ಬ್ರಿಗೇಡ್ ಸಂಸ್ಥೆಯುವರು ಮಾಡಿರುವ ಅರವಟ್ಟಿಗೆ ಸೇವೆ ನಿಜಕ್ಕೂ ಶ್ಲಾಘನೀಯ. ಪ್ರಾಣಿ-ಪಕ್ಷಿಗಳಿಗೂ ಕುಡಿಯುವ ನೀರು, ದವಸ-ಧಾನ್ಯ ವ್ಯವಸ್ಥೆ ಮಾಡಿರುವದು ಅವರ ಅಳಿಲು ಸೇವೆಯು ಮೆಚ್ಚುವಂತಹದ್ದು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಅಶೋಕ ಹಾರಿವಾಳ, ಕರ್ನಾಟಕ ರಾಜ್ಯೋತ್ಸವ ಪುರಸ್ಕ್ರತ ಜನಪದ ಗಾಯಕ ಬಸವರಾಜ ಹಾರಿವಾಳ, ವಿವೇಕ ಬ್ರಿಗೇಡ್ ಸಂಸ್ಥೆಯ ವಿನುತ ಕಲ್ಲೂರ, ರವಿಗೌಡ ಚಿಕ್ಕೊಂಡ, ಡಾ.ಬಸವರಾಜ ಕೋಟಿ, ಮಣಿಕಂಠ ಕಲ್ಲೂರದೇಸಾಯಿ, ಶಿವಾನಂದ ತೋಳನೂರ, ಸಿದ್ದು ಬೆಣ್ಣೂರ, ಮಹೇಂದ್ರಕುಮಾರ ಸತೀಶ ಕ್ವಾಟಿ, ಪ್ರಾಣೇಶ ಹೂಗಾರ, ಅಮರ ಗಾಯಕವಾಡ, ಸಿದ್ದು ಹೂಗಾರ ಇದ್ದರು.
ಇದೇ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಉಪಾಧ್ಯಕ್ಷ ಅಶೋಕ ಹಾರಿವಾಳ ಅವರನ್ನು ಸಂಸ್ಥೆಯಿಂದ ಸನ್ಮಾನಿಸಲಾಯಿತು.

