ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ತಾಲೂಕಿನ ಕಡಕೋಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಅಪ್ಪಾಶಿ ದೇವರವರ, ಉಪಾದ್ಯಕ್ಷರಾಗಿ ಮಲ್ಲಯ್ಯಾ ಮಠಪತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಾಜಿ ಶಾಸಕ ಸಂಘದ ನಿರ್ದೇಶಕ ಆನಂದ ನ್ಯಾಮಗೌಡ ಮಾತನಾಡಿ, ಗ್ರಾಮಗಳಲ್ಲಿರುವ ಸೊಸಾಯಿಟಿಗಳಲ್ಲಿ ರೈತರು ವ್ಯವಹಾರ ನಡೆಸಬೇಕು, ಸಂಘಗಳು ಬೆಳೆದಂತೆ ರೈತರ ಆರ್ಥಿಕ ಬೆಳವಣಿಗೆಯೂ ಆಗಲು ಸಾಧ್ಯವಾಗುತ್ತದೆ. ಜಿಲ್ಲೆಯಲ್ಲಿನ ಯಾವುದೇ ಸೊಸೈಟಿಯಲ್ಲಿಯೂ ಕಡಕೋಳ ಸೊಸೈಟಿಯಲ್ಲಿ ನೀಡುವ ಹಾಗೆ ಗೊಬ್ಬರ ವ್ಯವಹಾರ ನಡೆಯುವದಿಲ್ಲ. ಇದಕ್ಕೆ ಇಲ್ಲಿನ ಸಿಬ್ಬಂದಿ ಪ್ರಮಾಣಿಕತೆಯೇ ಎಂದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಎನ್.ಎಸ್.ದೇವರವರ, ಬಿಡಿಸಿಸಿ ನಿರ್ದೇಶಕ ಏಗಪ್ಪ ಸವದಿ, ನಾಗಪ್ಪಾ ಮುತ್ತಕ್ಕನವರ, ಜಿ.ಕೆ. ಮಠದ, ಅಣ್ಣಾಸಾಬ ದೇವರವರ, ಸಂಗಪ್ಪ ದೇವರವರ, ಆನಂದ ಪಾಟೀಲ, ಕಾಡಪ್ಪಾ ದೇಸಾಯಿ, ಹಣಮಂತ ನ್ಯಾಮಗೌಡ, ಯಲ್ಲವ್ವ ಜಾಬಗೌಡ, ಸಾವಿತ್ರಿ ಕುಂಬಾರ, ಮಲ್ಲಪ್ಪಾ ಟಕ್ಕೊಡ, ಪಿ.ಎಸ್.ಮಹಾಂತ ಇತರರು ಇದ್ದರು.

