ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸ್ವಾತಂತ್ರ್ಯ ಹೋರಾಟಗಾರ, ಶೋಷಿತರ ಧ್ವನಿ, ರೈತರ ಉಸಿರಾಗಿದ್ದ ಡಾ.ಬಾಬು ಜಗಜೀವನರಾಮ್ ಅವರ ಜೀವನ ಮತ್ತು ಸಾಧನೆ ಸರ್ವರಿಗೂ ಮಾದರಿಯಾಗಿದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಪಿ.ಬಿರಾದಾರ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಶನಿವಾರ ಜರುಗಿದ ಡಾ.ಬಾಬು ಜಗಜೀವನರಾಮ್ ಅವರ ೧೧೮ನೇ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ಬಾಬೂಜೀ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ ಪ್ರಕಾಶ ಸಿಂದಗಿ ಬಾಬೂಜೀ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಉಪತಹಶೀಲ್ದಾರ ಸುರೇಶ ಮ್ಯಾಗೇರಿ, ಸಿಬ್ಬಂದಿ ಸಂತೋಷ ತಳವಾರ, ಚನ್ನಬಸು ಹೊಸಮನಿ, ರೈತಸಂಘದ ಸಂಪತ್ ಜಮಾದಾರ, ರಾಹುಲ ದೊಡಮನಿ, ಸಂತೋಷ ಬೇವಿನಗಿಡದ, ಕಿರಣ ವಗ್ಗರ, ನಾಗೇಶ ವಗ್ಗರ, ಭೀಮಾಶಂಕರ ವಗ್ಗರ, ಪರಶು ಸನದಿ, ಪ್ರಭು ಸಂಗಣ್ಣವರ, ಸುರೇಶ ಮಣೂರ, ಮರಣಿಗಪ್ಪ ಪಡಗಾನೂರ, ಸದಾಶಿವ ಬೇವಿನಗಿಡದ, ಪ್ರಭು ದೊಡಮನಿ, ನಿಜಲಿಂಗಪ್ಪ ಮ್ಯಾಕೇರಿ ಇದ್ದರು.

