Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ

ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ

ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಮಾನವತಾವಾದಿ ಹೆಲೆನ್ ಕೆಲ್ಲರ್
ವಿಶೇಷ ಲೇಖನ

ಮಾನವತಾವಾದಿ ಹೆಲೆನ್ ಕೆಲ್ಲರ್

By Updated:No Comments5 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು
ಸಂಶೋಧನ ಕೇಂದ್ರ
ಪುಣೆ

ಉದಯರಶ್ಮಿ ದಿನಪತ್ರಿಕೆ

ಹೆಲೆನ್ ಕೆಲ್ಲರ್ ಅಮೆರಿಕದ ಪ್ರಖ್ಯಾತ ಬರಹಗಾರ್ತಿ, ರಾಜಕೀಯ ಕಾರ್ಯಕರ್ತೆ, ಉಪನ್ಯಾಸಕಿ, ಸಾಮಾಜಿಕ ಕಾರ್ಯಕರ್ತೆ, ಅಂಗವಿಕಲರು ಮತ್ತು ಶೋಷಿತ ಜನರ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ ಮಾನವತಾವಾದಿ. ಇನ್ನೂ ಕೇವಲ 19 ತಿಂಗಳ ಹಸುಳೆಯಾಗಿದ್ದಾಗಲೇ ಅವರಿಗೆ ಕುರುಡುತನ ಮತ್ತು ಕಿವುಡುತನ ಎರಡೂ ಪ್ರಾಪ್ತವಾಯಿತು. ಹೀಗೆ ಯಾವುದೇ ಬದುಕಿನ ಅಡೆತಡೆಗಳಿದ್ದರೂ ಮನುಷ್ಯನಿಗೆ ಸಾಧ್ಯವಿಲ್ಲದ್ದು ಯಾವುದೂ ಇಲ್ಲ ಎಂದು ತಮ್ಮ ಬದುಕಿನಿಂದ ನಿರೂಪಿಸಿದ ಮಹಾನ್ ಚೇತನ ಹೆಲೆನ್ ಕೆಲ್ಲರ್.
ಬದುಕೆoಬುದಕ್ಕೆ ಅರ್ಥ ಇಷ್ಟೇ, ಒಂದೋ ಅದು ಧೈರ್ಯದಿಂದ ಎದುರಿಸಬೇಕಾದ ಸವಾಲು, ಇನ್ನೊಂದೋ ಅದು ಏನೂ ಅಲ್ಲ. ನಮಗೆ ಯಾವುದು ಬೇಕು ಅದನ್ನು ಆರಿಸಿಕೊಳ್ಳಬಹುದು. ಆಕೆಯ ಈ ಉದ್ಘೋಷ ಬಹಳಷ್ಟನ್ನು ಹೇಳುತ್ತದೆ.


ಹೆಲನ್ ಕೆಲ್ಲರ್ ಕಿವುಡು ಮತ್ತು ಅಂಧ ವ್ಯಕ್ತಿಯಾಗಿ ಕಲಾ ಪದವಿ ಪಡೆದ ಪ್ರಪ್ರಥಮರು. ಆನ್ ಸುಲ್ಲಿವನ್ ಮ್ಯಾಸಿ ಎಂಬಾಕೆ ಯಾವುದೇ ಉಪಯೋಗಕ್ಕೆ ಬಾರದೆ ಹೋಗಬಹುದಾಗಿದ್ದ ಈ ಅಂಧ ಮತ್ತು ಕಿವುಡು ಜೀವಿಯನ್ನು ವಿಶ್ವದ ಅದ್ಭುತ ಪ್ರತಿಭೆಯನ್ನಾಗಿಸುವಲ್ಲಿ ಮಾಡಿದ ಯಶಸ್ಸು ವಿಶ್ವ ಚರಿತ್ರೆಗಳಲ್ಲಿ ಮಹತ್ವಪೂರ್ಣದ್ದೆನಿಸಿದೆ.
ಈ ಅದ್ಭುತ ಸಾಧನೆಯು ಕಥಾನಕವಾಗಿ ” ದಿ ಮಿರಾಕಲ್ ವರ್ಕರ್ ” ಎಂಬ ರಂಗಕೃತಿಯಾಗಿ ಮತ್ತು ಚಲನಚಿತ್ರವಾಗಿ ಪ್ರಸಿದ್ಧಿ ಪಡೆದಿದೆ. ವಿದ್ವತ್ಪೂರ್ಣ ಬರಹಗಾರ್ತಿ, ಉತ್ತಮ ಪರಿವ್ರಾ ಜಕಿ, ಯುದ್ಧವಿರೋಧಿ, ಸ್ತ್ರೀಶೋಷಣೆ, ಕಾರ್ಮಿಕ ಶೋಷಣೆಗಳ ವಿರುದ್ಧ ಅಪ್ರತಿಮ ಹೋರಾಟಗಾರ್ತಿ, ಸಮಾಜದಲ್ಲಿ ಬದುಕಿನ ಸಮಾನತೆಯ ಪ್ರತಿಪಾದಕಿ, ದೃಷ್ಟಿ ಭಾಗ್ಯವಿಲ್ಲದ ತನ್ನಂತೆ ದೌರ್ಭಾಗ್ಯರಿಗಾಗಿ ಅಪರಿಮಿತ ಪರಿಶ್ರಮಿ, ಇವೆಲ್ಲವುಗಳೂ ಆಗಿ ಹೆಲೆನ್ ಕೆಲ್ಲರ್ ಅವರು ನಡೆಸಿದ ಜೀವನ ಮಹತ್ವಪೂರ್ಣವಾದದ್ದು.
ಹೆಲನ್ ಕೆಲ್ಲರ್ ಅವರು ಜೂನ್ 27 1980 ರ ವರ್ಷದಲ್ಲಿ ಅಮೆರಿಕದ ಅಲಬಾಮದ ಟುಸ್ಕುoಬಿಯಾ ಎಂಬಲ್ಲಿ ಜನಿಸಿದರು. ಅವರ ತಂದೆ ಅರ್ಥರ್.ಎಚ್. ಕೆಲ್ಲರ್. ಕೆಲಕಾಲ ಸೈನ್ಯದ ಅಧಿಕಾರಿಯಾಗಿಯೂ ಪತ್ರಕರ್ತರಾಗಿಯೂ ಕೆಲಸ ನಿರ್ವಹಿಸುತ್ತಿದ್ದರು. ಅವರ ತಾಯಿ ಕೇಟ್ ಆಡಮ್ಸ್. ಹೆಲೆನ್ ಕೆಲ್ಲರ್ ಹುಟ್ಟಿದಾಗ ಕಣ್ಣು ಮತ್ತು ಕಿವಿಗಳು ಸ್ವಾಭಾವಿಕವಾಗಿ ಚೆನ್ನಾಗಿಯೇ ಇದ್ದವು. ಮಗುವಿಗೆ 19 ತಿಂಗಳಾಗಿದ್ದಾಗ ಸ್ಕಾರ್ಲೆಟ್ ಫೀವರ್ ಅಥವಾ ಮೆನಿoಗಿಟಿ ಸ್ ಕಾಯಿಲೆಯ ಪರಿಣಾಮದಿಂದಾಗಿ ಕುರುಡು ಮತ್ತು ಕಿವುಡುತನಗಳು ಆಮೇಲೆ ಆವರಿಸಿದವು. ಆ ಸಮಯದಲ್ಲಿ ಆಕೆ ಅವರ ಮನೆಯಲ್ಲಿ ಅಡುಗೆ ಕೆಲಸದವಳ ಮಗಳಾಗಿದ್ದ ಮಾರ್ಥಾ ವಾಷಿಂಗ್ಟನ್ ಎಂಬ ಆರು ವರ್ಷದ ಹುಡುಗಿಯೊಡನೆ ಕೆಲವೊಂದು ಸನ್ನೆಗಳ ಮೂಲಕ ಸಂಭಾಷಿ ಸುತ್ತಿದ್ದರು. ಏಳು ವರ್ಷದವಳಾದಾಗ ಹೆಲನ್ ಕೆಲ್ಲರ್ ತನ್ನ ಕುಟುಂಬದವರೊಡನೆ ಸುಮಾರು 60 ರೀತಿಯ ಸoಜ್ಞೆ ಗಳಲ್ಲಿ ಸಂಭಾಷಿಸುತ್ತಿದ್ದಳು.
1886 ರ ವರ್ಷದಲ್ಲಿ ಕೆಲ್ಲರ್ ಅವರ ತಾಯಿ ಚಾರ್ಲ್ಸ್ ಡಿಕನ್ಸ ಅವರ ಅಮೆರಿಕನ್ ನೋಟ್ಸ್ ಬರಹದಲ್ಲಿ ಉಲ್ಲೇಖಿತಗೊಂಡಿರುವ ಲಾರಾ ಬ್ರಿಡ್ಜ ಮಾನ್ ಎಂಬಾಕೆಯ ಕುರಿತು ಉತ್ತೇಜಿತಗೊಂಡು ತಮ್ಮ ಮಗಳನ್ನು ಜುಲಿಯನ್ ಎಂಬ ವೈದ್ಯರ ಬಳಿಗೆ ಕಳಿಸಿಕೊಟ್ಟರು. ಚಿಸೋಲ್ಮ್ ಅವರು ಕೆಲ್ಲರ್ ಳನ್ನು ಅಂದಿನ ದಿನಗಳಲ್ಲಿ ಕಿವುಡು ಮಕ್ಕಳು ಕಾರ್ಯನಿರ್ವಹಿಸುತ್ತಿದ್ದ ಅಲೆಕ್ಸಾಂಡರ್ ಅವರ ಬಳಿ ಹೋಗಲು ತಿಳಿಸಿದರು. ಬೆಲ್ ಅವರು ಪೆರ್ಕಿನ್ಸ್ ಇನ್ಸ್ಟಿಟ್ಯೂಟ್ ಆಫ್ ದಿ ಬ್ಲೈಂಡ್ ಎಂಬಲ್ಲಿಗೆ ಮಾರ್ಗದರ್ಶನ ಮಾಡಿದರು. ಅಲ್ಲಿನ ನಿರ್ದೇಶಕರಾದ ಮೈಕಲ್ ಅಂಗಾನಾಸ್ ಅವರು ತಮ್ಮ ವಿದ್ಯಾರ್ಥಿಯಾಗಿದ್ದ 20 ವರ್ಷದ ಸ್ವಯಂ ಕಿವುಡುತನ ಅನುಭವಿಸುತ್ತಿದ್ದ ಆನ್ ಸುಲ್ಲಿವನ್ ಅವರನ್ನು ಹೆಲೆನ್ ಕೆಲರ್ ಅವರಿಗೆ ಮಾರ್ಗದರ್ಶನ ಮಾಡಬೇಕೆಂದು ಕೇಳಿಕೊಂಡರು. ಇದು 49 ವರ್ಷಗಳ ಸುಧೀರ್ಘ ಪಯಣ ಕ್ಕೆ ನಾಂದಿ ಹಾಡಿತು.
1888ರ ವರ್ಷದಿಂದ ಪ್ರಾರಂಭಗೊಂಡಂತೆ ಹೆಲನ್ ಕೆ ಲ್ಲರ್ ಪರ್ಕಿನ್ಸ್ ಇನ್ಸ್ಟಿಟ್ಯೂಟ್ ಫಾರ್ ದಿ ಬ್ಲೈಂಡ್ ಸೇರಿದಳು. 1894ರಲ್ಲಿ ಹೆಲೆನ್ ಕೆಲ್ಲರ್ ಮತ್ತು ಆನ್ ಸುಲ್ಲಿವನ್ ನ್ಯೂ ಯಾರ್ಕ ನ ಹುಮಾಸನ್ ಸ್ಕೂಲ್ ಫಾರ್ ದಿ ಡೆಫ್
ಸೇರಿದರು.1896 ರಲ್ಲಿ ಹೆಲೆನ್ ಕೆಲ್ಲರ್ ದಿ ಕೆಂಬ್ರಿಡ್ಜ ಸ್ಕೂಲ್ ಫಾರ್ ಯಂಗ್ ಲೇಡೀಸ್ ಶಾಲೆಯಲ್ಲಿ ಪ್ರವೇಶ ಪಡೆದರು. ಅವರು ರಾಡ್ ಕ್ಲಿಫ್ ಕಾಲೇಜಿಗೆ ಪ್ರವೇಶ ಪಡೆದು 1904ರ ವರ್ಷದಲ್ಲಿ ಕಲಾವಿಭಾಗದಲ್ಲಿ ಪದವಿ ಪಡೆದ ಪ್ರಥಮ ಕಿವುಡು ಅಂಧ ವಿದ್ಯಾರ್ಥಿ ಎಂಬ ಕೀರ್ತಿಗೆ ಪಾತ್ರರಾದರು. ಈ ಸಮಯದಲ್ಲಿ ಹೆಲನ್ ಕೆಲ್ಲರ್ ಅವರ ಅಭಿಮಾನಿಯಾಗಿದ್ದ ಪ್ರಖ್ಯಾತ ಬರಹಗಾರ ಮಾರ್ಕ್ ಟ್ವೈನ್ ಅವರು ಅವರನ್ನು ಒಬ್ಬ ಶ್ರೀಮಂತ ದಂಪತಿಗಳಿಗೆ ಪರಿಚಯಿಸಿದ್ದು ಆ ದಂಪತಿಗಳು ಅವರ ಶಿಕ್ಷಣದ ಖರ್ಚನ್ನು ವಹಿಸಿಕೊಂಡಿದ್ದರು. ಈ ದಿನಗಳಲ್ಲಿ ಹೆಲೆನ್ ಕೆಲ್ಲರ್ ಅವರು ಆಸ್ಟ್ರಿಯನ್ ತತ್ವಜ್ಞಾನಿಯಾಗಿದ್ದ ಪೆಡಗಾಗ್ ವಿಲ್ಹೆಲ್ಮ ಜೆರುಸಲೇಮ ಅವರೊಂದಿಗೆ ನಿರಂತರವಾಗಿ ಪತ್ರ ವ್ಯವಹಾರ ನಡೆಸುತ್ತಿದ್ದು, ಈ ಮಹನೀಯರು ಹೆಲೆನ್ ಕೆಲ್ಲರ ಅವರಲ್ಲಿ ಬರಹದಲ್ಲಿರುವ ಅಪಾರ ಶಕ್ತಿಯನ್ನು ಅಪಾರ ಶಕ್ತಿಯನ್ನು ಗುರುತಿಸಿದವರಲ್ಲಿ ಮೊದಲಿಗರಾಗಿದ್ದಾರೆ.
ಇತರರೊಂದಿಗೂ ಸಹಜವಾಗಿ ಸಂಭಾಷಿಸುವುದನ್ನು ಅಭ್ಯಾಸ ಮಾಡುವುದರ ಕುರಿತು ಅಪಾರ ಶ್ರದ್ಧೆ ಹೊಂದಿದ ಹೆಲನ್ ಕೆಲ್ಲರ್ ಮಾತನಾಡುವುದನ್ನು ಶ್ರಮವಹಿಸಿ ಕಲಿತು ತಮ್ಮ ಹೆಚ್ಚಿನ ಸಮಯವನ್ನು ಭಾಷಣ ಮಾಡುವುದಕ್ಕಾಗಿ ಮತ್ತು ಉಪನ್ಯಾಸ ಮಾಡುವುದಕ್ಕೆ ಉಪಯೋಗಿಸಿದರು. ಮತ್ತೊಬ್ಬರು ಮಾತನಾಡುವುದನ್ನು ಅವರ ತುಟಿಗಳ ಚಲನೆಯ ಮೇಲೆ ತನ್ನ ಕೈ ಸ್ಪರ್ಶದ ಮೂಲಕ ಅವರು ಗ್ರಹಿಸುತ್ತಿದ್ದರು. ಅವರ ಕೈಸ್ಪರ್ಶವೂ ಅತ್ಯಂತ ನವಿ ರಾಗಿಯೂ ಸೂಕ್ಷ್ಮಗ್ರಾಹಿಯೂ ಆಗಿತ್ತು. ಬ್ರೈಲ್ ಲಿಪಿಯನ್ನು ಉಪಯೋಗಿಸುವುದರಲ್ಲಿ ಮತ್ತು ಕೈಯನ್ನು ಉಪಯೋಗಿಸುವ ಸಂಜ್ನೆ ಭಾಷೆಯಲ್ಲಿ ಅವರು ಪ್ರಾವೀಣ್ಯತೆಯನ್ನು ಸಾಧಿಸಿದ್ದರು. ಸೋಲೆನರ್
ಎಂಬುವರ ಸಹಾಯದ ಮೂಲಕ ಮೇಜಿನ ಮೇಲಿನ ಹಿತಸ್ಪರ್ಶದ ಮೂಲಕ ಅವರು ಹತ್ತಿರದಲ್ಲಿ ನುಡಿಸುವ ಸಂಗೀತವನ್ನು ಕೂಡಾ ಆಸ್ವಾದಿಸುವುದನ್ನು ಅಭ್ಯಾಸ ಮಾಡಿದ್ದರು.
ಆನ್ ಸುಲ್ಲಿವನ್ ಅವರು ಹೆಲೆನ್ ಕೆಲ್ಲರ್ ಜೊತೆಗಾತಿಯಾಗಿ ಕಲಿಕೆಯ ನಂತರದ ದಿನಗಳಲ್ಲೂ ಅವರೊಂದಿಗೆ ಇದ್ದರು. 1905 ರ ವರ್ಷದಲ್ಲಿ ಆನ್ ಅವರು ಜಾನ್ ಮ್ಯಾಸಿ ಎಂಬುವರನ್ನು ವಿವಾಹವಾದರು.
1914ರ ವೇಳೆಗೆ ಅವರ ಆರೋಗ್ಯ ಕ್ಷೀಣಿಸತೊಡಗಿತ್ತು. ಪಾಲಿ ಥಾಮ್ಸನ ಅವರನ್ನು ಹೆಲೆನ್ ಕೆಲ್ಲರ್ ಅವರ ಮನೆಯ ಕೆಲಸಕ್ಕಾಗಿ ನೇಮಿಸಲಾಗಿತ್ತು. ಪಾಲಿ ಥಾ ಮ್ಸನ್ ಅವರಿಗೆ ಕಿವುಡು ಮತ್ತು ಕುರುಡರ ಜೊತೆ ಬದುಕುವುದಕ್ಕೆ ಯಾವುದೇ ಅನುಭವ ಇಲ್ಲದಿದ್ದಾಗ್ಯೂ ಕ್ರಮೇಣದಲ್ಲಿ
ಅವರು ಕಾರ್ಯದರ್ಶಿಯೂ ಆಗಿ ಬಹಳ ವರ್ಷಗಳ ಕಾಲದವರೆಗೆ ಅವರ ಒಡನಾಡಿಯಾಗಿದ್ದರು.
ಕೆಲ್ಲರ್ ಅವರು ಮುಂದೆ ಆನ್ ಕುಟುಂಬದೊಂದಿಗೆ ಕ್ವೀನ್ಸ ಪ್ರದೇಶದ ಫಾರೆಸ್ಟ್ ಹಿಲ್ಸ್ ಎಂಬಲ್ಲಿಗೆ ವಾಸ್ತವ್ಯ ಬದಲಾಯಿಸಿದರು. ಅದು ಮುಂದೆ ಅಮೆರಿಕನ್ ಫೌಂಡೇಶನ್ ಫಾರ್ ದ ಬ್ಲೈಂಡ್ ಚಟುವಟಿಕೆಗಳಿಗೆ ಬು ನಾದಿಯಾಯ ಕೇಂದ್ರವಾಯಿತು. 1936 ವರ್ಷದಲ್ಲಿ ಆನ್ ಸುಲ್ಲಿಮನ್ ಅವರು ನಿಧನರಾದರು. ಕೆಲ್ಲರ್
ಅವರು ಪಾಲಿ ಥಾಮ್ಸನ್ ಜೊತೆಗೆ ಕನೆಕ್ಟಿಕಟ್ ಪ್ರದೇಶಕ್ಕೆ ಬಂದರು. ಅವರು ವಿಶ್ವದಾದ್ಯಂತ ಸಂಚರಿಸಿ ಕುರುಡರ ಹಿತರಕ್ಷಣೆಗಾಗಿ ನಿಧಿ ಸಂಗ್ರಹಿಸಿದರು. 1960ರ ವರ್ಷದಲ್ಲಿ ಥಾಮ್ಸನ್ ಅವರು ನಿಧನರಾದರು. ಮುಂದೆ ವಿನ್ನಿ ಕೊರ್ಬಾಲಿ ಎಂಬ ನರ್ಸ್ ಒಬ್ಬರು ಕೆಲ್ಲರ ಅವರ ಜೀವನಪೂರ್ತಿ ಅವರಿಗೆ ಸಂಗಾತಿಯಾಗಿದ್ದರು.
ಹೆಲನ್ ಕೆಲ್ಲರ್ ಅವರು ವಿಶ್ವದ ಪ್ರಖ್ಯಾತ ಭಾಷಣಕಾರರೂ ಬರಗಾರ್ತಿಯೂ ಆದರು. ವಿವಿಧ ಕಾರಣಗಳಿಂದ ಅಂಗಹೀನತೆಗೊಳಗಾಗಿದ್ದವರ ಧ್ವನಿ ಎಂದು ಅವರನ್ನು ಇಡೀ ವಿಶ್ವ ಸ್ಮರಿಸುತ್ತಿದೆ . ರಾಜಕೀಯವಾಗಿ ಬದಲಾವಣೆಗಳನ್ನು ಬಯಸುವ ಸಮಾಜವಾದಿಯಾಗಿದ್ದ ಅವರು ವಿಲ್ಸನ್ ಅವರ ನೀತಿಗಳನ್ನು ವಿರೋಧಿಸಿದ್ದರು. ಸಮಾಜದಲ್ಲಿ ಜನರ ನಿಯಂತ್ರಣ ಕ್ರಮಗಳನ್ನು ಅವರು ಬೆಂಬಲಿಸಿದರು 1915 ರ ವರ್ಷದಲ್ಲಿ ಹೆಲೆನ್ ಕೆಲ್ಲರ್
ಇಂಟರ್ನ್ಯಾಷನಲ್ ಸಂಸ್ಥೆಯನ್ನು ಹುಟ್ಟು ಹಾಕಿದರು. ಈ ಸಂಸ್ಥೆ ದೃಷ್ಟಿ , ಆರೋಗ್ಯ ಮತ್ತು ಪೌಷ್ಟಿಕತೆಯ ಕುರಿತಾದ ಸಂಶೋಧನೆಗಳಿಗೆ ಮುಡಿಪಾಗಿತ್ತು. 1920ರ ವರ್ಷದಲ್ಲಿ ಅವರು ಅಮೆರಿಕನ್ ಸಿವಿಲ್ ಲಿಬರ್ಟಿಸ್ ಯೂನಿಯನ್ ಎಂಬ ಸಂಘಟನೆ ರೂಪುಗೊಳ್ಳಲು ಸಹಾಯ ಮಾಡಿದರು.
ಕೆಲ್ಲರ್ ಅವರು 40ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಭೇಟಿ ಕೊಟ್ಟಿದ್ದರು. ಜಪಾನ್ ದೇಶಕ್ಕೆ ಹಲವಾರು ಬಾರಿ ಭೇಟಿ ಕೊಟ್ಟಿದ್ದ ಅವರು ಜಪಾನಿಯರಿಗೆ ತುಂಬಾ ಪ್ರೀತಿ ಪಾತ್ರರಾಗಿದ್ದರು. ಅಮೆರಿಕದ ಅಧ್ಯಕ್ಷರುಗಳಾದ ಗ್ರೋವರ್ ಕ್ಲೆವರ್ ಲ್ಯಾಂಡ್ ಅವರಿಂದ ಮೊದಲ್ಕೊಂಡು ಲಿಂಡನ್.ಬಿ. ಜಾನ್ಸನ್ ವರೆಗೆ ಅವರು ಎಲ್ಲಾ ಅಧ್ಯಕ್ಷರುಗಳನ್ನು ಭೇಟಿ ಮಾಡಿದ್ದರು. ಅಲೆಕ್ಸಾಂಡರ್ ಗ್ರಾಹಂಬೆಲ್, ಚಾರ್ಲಿ ಚಾಪ್ಲಿನ್ ಮಾರ್ಕ್ ಟ್ವೈನ್
ಮುಂತಾದ ಅನೇಕ ಗಣ್ಯರೊಂದಿಗೆ ಅವರ ಸ್ನೇಹ ವ್ಯಾಪಿಸಿತ್ತು.ಅವರುಗಳು 20ನೇ ಶತಮಾನದ ಪ್ರಾರಂಭದ ಕ್ರಾಂತಿಕಾರಕ ಚಿಂತಕರು ಎಂದು ಹೆಸರಾಗಿದ್ದರು.
ಕೆಲ್ಲರ್ ಅವರು ಸೋಷಿಯಲಿಸ್ಟ್ ಪಾರ್ಟಿಯ ಸದಸ್ಯರಾಗಿದ್ದು, 1909 ರಿಂದ 1921ರ ಅವಧಿಯಲ್ಲಿ ಆ ಪಕ್ಷದ ಪರವಾಗಿ ಲೇಖನಗಳನ್ನು ಬರೆದದ್ದೇ ಅಲ್ಲದೆ, ಆ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯ ಪರವಾಗಿ ಚುನಾವಣಾ ಪ್ರಚಾರಗಳಲ್ಲೂ ಭಾಗವಹಿಸಿದ್ದರು.
ಕೆಲವರು 1912ರ ವರ್ಷದಲ್ಲಿ ಇಂಡಸ್ಟ್ರಿಯಲ್ ವರ್ಕರ್ಸ್ ಆಫ್ ದ ವರ್ಲ್ಡ್ ಸಂಘಟನೆಯನ್ನು ಸೇರಿ ಅದರ ಬೆಂಬಲವಾಗಿ ಹಲವಾರು ವರ್ಷಗಳ ಕಾಲ ಲೇಖನಗಳನ್ನೂ ಬರೆದರು. ಶ್ರೀಮಂತರ ಒಡೆತನದಲ್ಲಿ ಕಾರ್ಮಿಕರು ಅನುಭವಿಸುತ್ತಿದ್ದ ಬವಣೆಗಳು, ಬಡ ಕಾರ್ಮಿಕರು, ಅಸಹಾಯಕ ಸ್ತ್ರೀಯರು ಶೋಷಣೆಗೆ ಒಳಗಾಗುತ್ತಿದ್ದುದು ಬಡತನದಿಂದ ವೇಶ್ಯಾವೃತ್ತಿಗೆ ಇಳಿಯುತ್ತಿದ್ದ ಸ್ತ್ರೀಯರು ಮತ್ತು ಅನೇಕ ಕಾಯಿಲೆಗಳಿಗೆ ಒಳಗಾಗಿ ಅವರುಗಳು ಅಂಗ ದೌರ್ಬಲ್ಯಗಳಿಗೆ ಒಳಗಾಗಿ ಸಂಕಷ್ಟದಿಂದ ಬದುಕು ನಡೆಸಬೇಕಾಗುತ್ತಿದ್ದುದು ಇವುಗಳೆಲ್ಲದರ ಬಗ್ಗೆ ಅವರು ಸುಧೀರ್ಘ ಕಾಲದವರೆಗೆ ಬರಹಗಳನ್ನು ಮೂಡಿಸುವುದರ ಜೊತೆಗೆ ಕಾರ್ಮಿಕರ ಪರವಾಗಿ ಹೋರಾಟವನ್ನೂ ನಡೆಸಿದರು.
ಹೆಲೆನ್ ಕೆಲ್ಲರ್ ಅವರು ಪ್ರಕಟಿಸಿದ ಹನ್ನೆರಡು ಮಹತ್ವಪೂರ್ಣ ಗ್ರಂಥಗಳು ಮತ್ತು ನೂರಾರು ಲೇಖನಗಳು ವಿಶ್ವದಲ್ಲೆಡೆ ಎಲ್ಲ ವರ್ಗದ ಜನರ ಕಣ್ಣು ತೆರೆಸುವಂತಾಗಿದೆ. ಅವರು ಇನ್ನೂ ಹನ್ನೊಂದು ವರ್ಷದವರಾಗಿದ್ದಾಗ ರಚಿಸಿದ್ದು. ಮುಂದೆ ಆಧ್ಯಾತ್ಮಿಕ , ಆತ್ಮಕಥನ ಮುಂತಾದವು ಅವರ ಕೃತಿಗಳಲ್ಲಿ ಸೇರಿವೆ. ಹೆಲೆನ್ ಕೆಲ್ಲರ್ ಅವರು ಜೂನ್ 1, 1968ರಲ್ಲಿ ಈ ಲೋಕವನ್ನು ಅಗಲಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ

ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ

ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!

ಕ್ರಿಕೆಟ್ ಕ್ರೀಡಾಪಟುಗಳಿಗೆ ಪ್ರತ್ಯೇಕ ಕ್ರೀಡಾಂಗಣ ಕಲ್ಪಿಸಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ
    In (ರಾಜ್ಯ ) ಜಿಲ್ಲೆ
  • ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!
    In (ರಾಜ್ಯ ) ಜಿಲ್ಲೆ
  • ಕ್ರಿಕೆಟ್ ಕ್ರೀಡಾಪಟುಗಳಿಗೆ ಪ್ರತ್ಯೇಕ ಕ್ರೀಡಾಂಗಣ ಕಲ್ಪಿಸಿ
    In (ರಾಜ್ಯ ) ಜಿಲ್ಲೆ
  • ಆಶ್ರಯ ಕಾಲೊನಿ ನಿವಾಸಿಗಳಿಗೆ ಶೀಘ್ರ ಹಕ್ಕುಪತ್ರ ವಿತರಣೆ
    In (ರಾಜ್ಯ ) ಜಿಲ್ಲೆ
  • ಧರ್ಮಸ್ಥಳ ಸಂಘ ಕಾರ್ಯ ಶ್ಲಾಘನೀಯ :ಎಸಿ ಅನುರಾಧ
    In (ರಾಜ್ಯ ) ಜಿಲ್ಲೆ
  • ಮಹಿಳೆಯರ ಸ್ವಾವಲಂಬನೆಗೆ ಗ್ಯಾರಂಟಿ ಯೋಜನೆಗಳು ಸಹಕಾರಿ
    In (ರಾಜ್ಯ ) ಜಿಲ್ಲೆ
  • ವೈಜ್ಞಾನಿಕ ಮನೋಭಾವದ ಕೊರತೆಯಿಂದ ಮೌಢ್ಯಗಳ ಹೆಚ್ಚಳ
    In (ರಾಜ್ಯ ) ಜಿಲ್ಲೆ
  • ಕೊಂಡಗೂಳಿಗೆ ಸರ್ಕಾರಿ ಪ್ರೌಢಶಾಲೆ ಮಂಜೂರಿಗೆ ಆಗ್ರಹಿಸಿ ಸಚಿವರಿಗೆ ಮನವಿ
    In (ರಾಜ್ಯ ) ಜಿಲ್ಲೆ
  • ಬಸವ ಚೇತನ ಪ್ರಶಸ್ತಿಗೆ ಕೆ.ಎಸ್.ಕೋರಿ ಆಯ್ಕೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.