ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜಯಪುರ ಪೊಲೀಸ್ ಅಧೀಕ್ಷಕರ ವರದಿಯನ್ವಯ ತಿಕೋಟಾ ತಾಲೂಕಿನ ಲೋಗಾಂವದ ರಾಜುಗೌಡ ಸಿದ್ದಲಿಂಗಪ್ಪ ಬಿರಾದಾರ ಹಾಗೂ ಪಿಂಟು ಹೀರು ಲಮಾಣಿ ಇವರಿಗೆ ಆತ್ಮರಕ್ಷಣೆ ಸಲುವಾಗಿ ನೀಡಿರುವ ಆಯುಧ ಪರವಾನಿಗೆಯನ್ನು ದುರುಪಯೋಗ ಪಡಿಸಿಕೊಂಡಿರುವ ಕಾರಣದಿಂದಾಗಿ ಭಾರತೀಯ ಆಯುಧ ಕಾಯ್ದೆ ೧೯೫೯ರ ಕಲಂ ೧೭(೩)(ಬಿ ) ಮತ್ತು ೧೭(೩)(ಡಿ ) ಅನ್ವಯ ಇವರು ಹೊಂದಿರುವ ಆಯುಧ ಪರವಾನಿಗೆಯನ್ನು ಅಮಾನತ್ತುಗೊಳಿಸಿ ವಿಚಾರಣೆಗೆ ಕಾಯ್ದಿರಿಸಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಆದೇಶಿಸಿದ್ದಾರೆ.
ಸದರಿ ಪರವಾನಿಗೆದಾರು ತಾವು ಹೊಂದಿರುವ ಆಯುಧವನ್ನು ಕೂಡಲೇ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಜಮೆ ಮಾಡುವಂತೆಯೂ ಆದೇಶದಲ್ಲಿ ಅವರು ತಿಳಿಸಿದ್ದಾರೆ.
