ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲು ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಎಕ್ಸ್ಪರ್ಟ ಟ್ಯಾಲೆಂಟ್ ಅವಾರ್ಡ ಪರೀಕ್ಷೆಯನ್ನು ನಡೆಸುತ್ತಿದ್ದೇವೆ. ಪರೀಕ್ಷೆಯಲ್ಲಿ ಭಾಗವಹಿಸಿ ೧ ರಿಂದ ೫ ನೇ ರ್ಯಾಂಕ ಪಡೆಯುವ ವಿದ್ಯಾರ್ಥಿಗಳಿಗೆ ಆಕರ್ಷಕ ನಗದು ಬಹುಮಾನ ಮತ್ತು ಪ್ರತಿಭಾನ್ವಿತ ೨೦ ವಿದ್ಯಾರ್ಥಿಗಳಿಗೆ ೨ ವರ್ಷಗಳ ಕಾಲ ಉಚಿತ ಶಿಕ್ಷಣ ನೀಡಿ ಪ್ರೋತ್ಸಾಹಿಸುತ್ತಿದ್ದೇವೆ ಎಂದು ತಾಲೂಕಿನ ನಾಗರಬೆಟ್ಟ ಗ್ರಾಮದ ಹೆಸರಾಂತ ಎಕ್ಸ್ಫರ್ಟ ಪಿಯು ಸೈನ್ಸ್ ಕಾಲೇಜಿನ ಅಧ್ಯಕ್ಷ ಬಿ.ಜಿ.ಮಠ ಹೇಳಿದರು.
ಈ ಕುರಿತು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಎಸ್ಎಸ್ಎಲ್ಸಿ, ಸಿಬಿಎಸ್ಇ, ಐಸಿಎಸ್ಇ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆಯಬಹುದು. ಎ.೬ ರಂದು ಈ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಯಲ್ಲಿ ರ್ಯಾಂಕ್ ಬಂದವರಿಗೆ ಪ್ರಥಮ ಬಹುಮಾನವಾಗಿ ೨ಲಕ್ಷ ೨೫ ಸಾವಿರ ರೂಗಳ ಶಿಷ್ಯ ವೇತನ ಜೊತೆಗೆ ೨೫ಸಾವಿರ ರೂಪಾಯಿ ನಗದು, ದ್ವಿತೀಯ ಬಹುಮಾನವಾಗಿ ೨ಲಕ್ಷ ೨೫ ಸಾವಿರ ರೂಗಳ ಶಿಷ್ಯ ವೇತನ ಜೊತೆಗೆ ೨೦ಸಾವಿರ ರೂಪಾಯಿ ನಗದು, ತೃತೀಯ ಬಹುಮಾನವಾಗಿ ೨ಲಕ್ಷ ೨೫ ಸಾವಿರ ರೂಗಳ ಶಿಷ್ಯ ವೇತನ ಜೊತೆಗೆ ೧೫ಸಾವಿರ ರೂಪಾಯಿ ನಗದು, ನಾಲ್ಕನೇ ಬಹುಮಾನವಾಗಿ ೨ಲಕ್ಷ ೨೫ ರೂಗಳ ಶಿಷ್ಯ ವೇತನ ಜೊತೆಗೆ ೧೦ಸಾವಿರ ರೂಪಾಯಿ ನಗದು, ಐದನೇ ಬಹುಮಾನವಾಗಿ ೨ಲಕ್ಷ ೨೫ಸಾವಿರ ಶಿಷ್ಯ ವೇತನ ಜೊತೆಗೆ ೫ಸಾವಿರ ರೂಪಾಯಿ ನಗದು ಬಹುಮಾನ ನೀಡುತ್ತಿದ್ದೇವೆ. ಜೊತೆಗೆ ಪ್ರತಿಭಾನ್ವಿತ ೨೦ ವಿದ್ಯಾರ್ಥಿಗಳಿಗೆ ೨ ವರ್ಷಗಳ ಕಾಲ ಉಚಿತ ಶಿಕ್ಷಣ ನೀಡುತ್ತಿದ್ದೇವೆ. ಅಲ್ಲದೇ ಪರೀಕ್ಷೆ ಬರೆದು ಪ್ರವೇಶ ಪಡೆಯುವ ಎಲ್ಲ ವಿದ್ಯಾರ್ಥಿಗಳಿಗೆ ೫ಸಾವಿರ ರೂ ಸ್ಕಾಲರ್ಶಿಪ್ ನೀಡುತ್ತಿದ್ದೇವೆ ಮತ್ತು ಈ ಪರೀಕ್ಷೆಯನ್ನು ಪ್ರಥಮ ಪಿಯುಸಿ ಪ್ರವೇಶ ಎಂದು ಪರಿಣಿಸುತ್ತಿದ್ದೇವೆ. ಆಸಕ್ತ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ವೇಳೆ ಪ್ರಾಂಶುಪಾಲ ಐ.ಎ.ಬಾಗವಾನ ಮಾತನಾಡಿ ಪರೀಕ್ಷೆಗಳನ್ನು ಅಂದು ಬೆಳಿಗ್ಗೆ ೧೧ಗಂಟೆಗೆ ತಾಲೂಕಿನ ನಾಗರಬೆಟ್ಟ ಗ್ರಾಮದ ಬಸ್ ನಿಲ್ದಾಣದ ಬಳಿ ಇರುವ ಎಕ್ಸ್ಫರ್ಟ ಪಿ.ಯು.ಕಾಲೇಜಿನಲ್ಲಿ ತೆಗೆದುಕೊಳ್ಳಲಾಗುವದು. ಆಸಕ್ತ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗಿಯಾಗಿ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮೊ. ೭೦೧೯೨೫೧೯೨೩, ೯೬೮೬೯೦೬೧೦೧, ೮೦೯೫೧೯೧೬೧೪ ಮತ್ತು ೬೩೬೨೧೯೨೩೫೯ ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದರು.
ಈ ವೇಳೆ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಶಿಕ್ಷಕ ಶಿವಯ್ಯ ಹಿರೇಮಠ, ಕನ್ನಡ ಮಾಧ್ಯಮ ಪ್ರೌಢ ಶಾಲಾ ಶಿಕ್ಷಕ ಹೀರು ನಾಯಕ, ದೈಹಿಕ ಶಿಕ್ಷಕ ಎಲ್.ಎಚ್.ನಧಾಫ್ ಇದ್ದರು.

