ಆಲಮೇಲದ ಹೆಮ್ಮೆಯ ಹೈದ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸಹಾಯಕ ಕಮಾಂಡೆಂಟ್ ಆಗಿ ಉತ್ತಮ ಕಾರ್ಯನಿರ್ವಹಣೆಗೆ ಈ ಪುರಸ್ಕಾರ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪಟ್ಟಣದ ಪ್ರತಿಭಾವಂತ, ತನ್ನ ವೃತ್ತಿಯ ಮೂಲಕ ಉನ್ನತ ಮಟ್ಟದ ಹೆಸರು ಮಾಡಿರುವ ಶರಣಬಸು ಕೊಳಾರಿ ಅವರಿಗೆ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಉತ್ತಮವಾಗಿ ಸಹಾಯಕ ಕಮಾಂಡೆಂಟ್ ಆಗಿ ಕಾರ್ಯನಿರ್ವಹಿಸಿದ್ದಕ್ಕೆ ಮುಖ್ಯಮಂತ್ರಿಗಳಿಂದ ಕೊಡಮಾಡುವ ಉತ್ತಮ ಪೊಲೀಸ್ ಅಧಿಕಾರಿಯ ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಆಲಮೇಲದ ಪ್ರತಿಷ್ಠಿತ ಕೊಳಾರಿ ಮನೆತನದ ಮಹದೇವಪ್ಪ ಕೊಳಾರಿ ಅವರ ಮಗನಾದ ಶರಣಬಸು ಕೊಳಾರಿ ತಮ್ಮ ಕಷ್ಟದ ಜೀವನದೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ಇಂದು ರಾಜ್ಯದಲ್ಲಿ ಆಲಮೇಲ ತಾಲೂಕಿನ ಹೆಸರು ಬರುವಂತೆ ಮಾಡಿದ್ದಾರೆ.
ಆಲಮೇಲ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ ಕೊಳಾರಿ, ದಯಾನಂದ ಕೋಳಾರಿ, ಸ್ನೇಹಿತರಾದ ಆಲಮೇಲ ನಾಗರಿಕ ಸಮೀತಿ ಅಧ್ಯಕ್ಷ ರಮೇಶ ಬಂಟನೂರ್, ಪ್ರಭು ವಾಲಿಕರ, ಸುರೇಶ ಹಳ್ಳೂರ, ರಾಕೇಶ ಬಿರಾದಾರ, ಪಿಎಸ್ಐ, ಸುರೇಂದ್ರಕುಮಾರ ಮದಗುಣಕಿ, ಸಿದ್ರಾಮ ಯಾದವಾಡ, ಕಡಣಿಯ ಸಂತೋಷ ಕತ್ತಿ, ಬಸವರಾಜ ಪಡಶೆಟ್ಟಿ ಅವರು ಶರಣಬಸು ಅವರಿಗೆ ಅಭಿನಂದಿಸಿ ಹರುಷ ವ್ಯಕ್ತಪಡಿಸಿದ್ದಾರೆ.

ಶಾಸಕ ಅಶೋಕ ಮನಗೂಳಿ ಶುಭ ಹಾರೈಕೆ
ಸದ್ಯ ಕಲಬುರ್ಗಿಯ ಕೆ ಎಸ್ ಆರ್ ಪಿ. ಸಹಾಯಕ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸುತ್ತಿರುವ ಆಲಮೇಲದ ಶರಣಬಸು ಕೋಳಾರಿ ಅವರಿಗೆ ಶುಭವಾಗಲಿ, ಹೀಗೆ ಮುಂದಿನ ದಿನಗಳಲ್ಲಿ ಅವರಿಗೆ ಇನ್ನೂ ಹೆಚ್ಚಿನ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬರುವಂತಾಗಲಿ ಎಂದು ಶಾಸಕ ಅಶೋಕ ಮನಗೂಳಿ ಶುಭ ಹಾರೈಸಿದ್ದಾರೆ.

