ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ/ ಆಂಗ್ಲ ಮಾಧ್ಯಮ ಮುಸ್ಲಿಂ ವಸತಿ ಶಾಲೆ ಹಾಗೂ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಗಳ ೨೦೨೫-೨೬ನೇ ಸಾಲಿನ ಶೈಕ್ಷಣಿಕ ವರ್ಷದ ೬ನೇ ತರಗತಿ ಪ್ರವೇಶ ಪರೀಕ್ಷೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಏಪ್ರಿಲ್ ೧೦ರವರೆಗೆ ವಿಸ್ತರಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್ website: https://sevasindhuservices.karnataka.gov.inನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳ ಕಚೇರಿ, ಮೌಲಾನಾ ಆಝಾದ ಭವನ, ಜಿಲ್ಲಾ ಪಂಚಾಯತಿ ರಸ್ತೆ ಕನಕದಾಸ ಬಡಾವಣೆ ತಾಲೂಕ ವಿಸ್ತರಾಣಾಧಿಕಾರಿಗಳು, ಉಪ ವಿಭಾಗ ವಿಜಯಪುರ ಮತ್ತು ಇಂಡಿ ಇವರನ್ನು ಹಾಗೂ ಅರಕೇರಿಯ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಬಾಲಕಿಯರ ವಸತಿ ಶಾಲೆಯ ಪ್ರಾಂಶುಪಾಲ ರೇಖಾ ಬಾರ್ಕಿ (ಮೊಬೈಲ್ ಸಂಖ್ಯೆ: ೮೯೭೧೪೫೯೬೮೩), ಸಿಂದಗಿಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಸಿದ್ದಪ್ಪ ಕಾರಿಮುಂಗಿ (ಮೊ:೯೯೮೦೯೫೨೯೬೦), ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಚಡಚಣ ತಾಲೂಕಿನ ಹಾಲಹಳ್ಳಿಯ ಪ್ರಾಂಶುಪಾಲರಾದ ಮಲ್ಲಿಕಾರ್ಜುನ ಹೆಬ್ಬಳ್ಳಿ (ಮೊಬೈಲ್ ಸಂಖ್ಯೆ: ೯೬೨೦೮೨೮೧೮೫), ಸರ್ಕಾರಿ ಮುಸ್ಲಿಂ ವಸತಿ ಶಾಲೆ, ಅಫಜಲಪೂರ ಟಕ್ಕೆ ವಿಜಯಪುgದ ಪ್ರಾಂಶುಪಾಲರಾದ ಸಿದ್ರಾಮ್ ಎಂಟೆತ್ತ (ಮೊಬೈಲ್ ಸಂಖ್ಯೆ: ೮೩೧೦೮೩೦೪೦೭), ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಇಣಚಗಲ್ ಮುದ್ದೇಬಿಹಾಳ ನಂ-೧ ಪ್ರಾಂಶುಪಾಲರಾದ ರಮೇಶ (ಮೊಬೈಲ್ ಸಂಖ್ಯೆ :೯೮೪೪೪೯೩೩೦೬), ಇಂಡಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ರವಿಚಂದ್ರ ಕಾಂಬಳೆ (ಮೊಬೈಲ್ ಸಂಖ್ಯೆ: ೯೬೩೨೪೫೪೬೭೦) ಹಾಗೂ ಮುದ್ದೇಬಿಹಾಳ ನಂ.-೨ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಖೇಮು ರಾಠೋಡ (ಮೊಬೈಲ್ ಸಂಖ್ಯೆ: ೭೨೫೯೧೭೯೩೯೮) ಸಂಪರ್ಕಿಸಬಹುದಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
