ವಿಜಯಪುರ: ನಗರ ಮತಕ್ಷೇತ್ರದ ಶಾಸಕ ಬಸನಗೌಡ ರಾ ಪಾಟೀಲ ಯತ್ನಾಳ ರವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿರುವ, ಖಾಜಾ ಅಮೀನ್ ದರ್ಗಾದ ಹಾಲುಮತ ಸಮಾಜ ಬಾಂಧವರು ಬಿಜೆಪಿಗೆ ಬೆಂಬಲ ನೀಡಿ ಘೋಷಣಾ ಪತ್ರವನ್ನು ಯುವ ನಾಯಕ ರಾಮನಗೌಡ ಪಾಟೀಲ ಯತ್ನಾಳ ಅವರಿಗೆ ಶನಿವಾರ ನೀಡಿದರು.
ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿರುವ ನಗರ ಶಾಸಕರು, ಸಮುದಾಯ ಏಳಿಗೆಗಾಗಿ ಶ್ರಮಿಸಿದಲ್ಲದೇ, ಈಚೆಗೆ ನಡೆದ ಪಾಲಿಕೆ ಚುನಾವಣೆಯಲ್ಲಿ ಸಮಾಜದ ನಾಲ್ವರಿಗೆ ಬಿಜೆಪಿ ಟಿಕೆಟ್ ಕಲ್ಪಿಸಿದ್ದಾರೆ. ಅದರ ಫಲವಾಗಿ ಸಮಾಜದ ಇಬ್ಬರು ಪಾಲಿಕೆ ಸದಸ್ಯರಾಗಿ ಜನಸೇವೆ ಮಾಡುತ್ತಿದ್ದಾರೆ. ಖಾಜಾ ಅಮೀನ ದರ್ಗಾದಲ್ಲಿ ಕರಿ ಸಿದ್ದೇಶ್ವರ ದೇವಸ್ಥಾನಕ್ಕೆ ರೂ.25 ಲಕ್ಷ ಅನುದಾನ, ವಿಜಯಪುರ ನಗರದಲ್ಲಿ ಅಹಿಲ್ಯಾಬಾಯಿ ಹೊಳ್ಕರ್ ವೃತ್ತ ನಿರ್ಮಾಣ, ಖಾಜಾ ಅಮಿನ್ ದರ್ಗಾದಲ್ಲಿ ಸಂಗೋಳ್ಳಿ ರಾಯಣ್ಣ ವೃತ್ತ ನಿರ್ಮಾಣ, ಕನಕದಾಸ ವೃತ್ತ ನಿರ್ಮಾಣಕ್ಕೆ ಅನುದಾನ ಹೀಗೆ ಹಲವು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ. ಹೀಗಾಗಿ ವಾ.ನಂ.2ರ ಖಾಜಾ ಅಮಿನ್ ದರ್ಗಾದ ಹಾಲುಮತ ಸನಾಜ ಬಾಂಧವರು ಸಂಪೂರ್ಣ ಬೆಂಬಲ ಘೋಷಿಸಿರುವುದಾಗಿ ಸಂಘದ ಅಧ್ಯಕ್ಷ ಸಿ.ಎಸ್.ಯಾದವಾಡ ತಿಳಿಸಿದ್ದಾರೆ.
ಹಾಲುಮತ ಸಮಾಜದ ಮುಖಂಡರು, ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಮತ್ತಿತರರು ಇದ್ದರು.