ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ತಾಲ್ಲೂಕಿನ ಮುಳವಾಡ ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಾನಿಧ್ಯ ಮನಗೂಳಿ ಹಿರೇಮಠದ ಶ್ರೀ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿ ಮಾತನಾಡಿ ಮಕ್ಕಳಿಗೆ ಶಿಕ್ಷಣ ಜೋತೆಗೆ ಉತ್ತಮ ಸಂಸ್ಕಾರ ಕಲಿಸಿದರೆ ಆ ಮಗು ಸಮಾಜದಲ್ಲಿ ತಂದೆತಾಯಿಗಳಿಗೆ ಗುರುಹಿರಿಯರಿಗೆ ಸಮಾಜಕ್ಕೆ ಗ್ರಾಮಕ್ಕೆ ಒಳಿತನ್ನು ಬಯಸುವ ಉತ್ತಮ ಪ್ರಜೆಗಳಾಗಿ ದೇಶ ಕಟ್ಟುವ ಕೆಲಸದಲ್ಲಿ ಮುಂದೆ ಇರುವರು ಇಂತಹ ಮಕ್ಕಳನ್ನು ಈ ಶಾಲೆ ನೀಡಿದೆ ಎಂದು ನನಗೆ ಈ ಶಾಲೆ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದರು.
ಉಪನ್ಯಾಸಕಿಯಾಗಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಭಾರತಿ ಸಿದ್ದನಗೌಡ ಪಾಟೀಲ ಮಾತನಾಡಿ ನಾನು ಇದೆ ಶಾಲೆಯ ಹಳೆಯ ವಿದ್ಯಾರ್ಥಿ ಶಾಲೆಯಲ್ಲಿ ಮಹಾನ್ ಸಂತರ ಸತ್ಪುರುಷರ ನಡೆದಾಡಿದ ಭೂಮಿ ಇದಾಗಿದ್ದು ಈ ಶಾಲೆಯ ಹೆಸರು ಉಳಿಯ ಬೇಕಾದರೆ ನಾವು ಯಾವುದಾದರೊಂದು ಹುದ್ದೆಯಲ್ಲಿ ಇದ್ದರೆ ಮಾತ್ರ ನನ್ನ ಶಾಲೆ ಹೆಸರು ಬೆಳಕಿನಂತೆ ಹರಡುತ್ತದೆ ಆದ್ದರಿಂದ ಮಕ್ಕಳೆ ನೀವು ಚೆನ್ನಾಗಿ ಓದಿ ಊರು ಶಾಲೆ ಹೆಸರು ಬೆಳಕಿನಂತೆ ಹರಡುತ್ತದೆ ಎಂದು ತಿಳಿಸಿದರು.
ವಿಶೇಷತೆ ಊಟದಲ್ಲಿ: ಸರ್ಕಾರ ಶಾಲೆಯಲ್ಲಿ ಮಕ್ಕಳಿಗೆ ಶೆಂಗಾ ಹೋಳಿಗೆ ಹಸಿರುತರಕಾರಿ ಗಳಿಂದ ಪೌಷ್ಟಿಕ ಆಹಾರ ತಯಾರಿಸಿ ಮಕ್ಕಳಿಗೆ ಗಣ್ಯರಿಗೆ ಸಮತೋಲನ ಆಹಾರ ಅಗತ್ಯ ಕುರಿತು ತಿಳಿಸಿ ಆಹಾರ ಮೇಳ ದಂತೆ ಮಾಡಿ ಎಲ್ಲರೂ ಊಟ ಸವಿದರು.
ಕಾರ್ಯಕ್ರಮದಲ್ಲಿ ಅಣ್ಣುಗೌಡ ಬಿರಾದಾರ, ಸಂಗಮೇಶ ಬಿಜಾಪುರ, ರವಿ ಕೆಂಗನಾಳ ಹಾಗೂ ದಾನಿಗಳಾದ ನಿತೀಶ್ ಕುರುಹಿನಶೆಟ್ಟಿ, ಗಂಗಾಧರ ಹಾದಿಮನಿ, ನಜೀರ್ ಮುಲ್ಲಾ, ಬಸೀರಮ್ಮದ ಮುಲ್ಲಾ, ಸುರೇಶ ಗೊಳಸಂಗಿ, ನಂದಪ್ಪ ಗೊಳಸಂಗಿ, ಸಂಗೀತಾ ಬೀಳಗಿ ಸನ್ಮಾನಿಸಿ ಗೌರವಿಸಲಾಯಿತು.
ಅಧ್ಯಕ್ಷತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಣಮಂತ ಕಳಸಗೊಂಡ, ಉದ್ಘಾಟನೆ ನಿವೃತ್ತ ಶಿಕ್ಷಕ ಸಂಗನಗೌಡ ಬಿರಾದಾರ ಮತ್ತು ಕಿರಿಯ ಅಭಿಯಂತರರು ಜಿಲ್ಲಾ ಪಂಚಾಯಿತಿ ವಿಜಯಪುರ ಬಸಲಿಂಗಪ್ಪ ಪಾಲಾಯಿ, ಮುಖ್ಯ ಅತಿಥಿಗಳಾಗಿ ಉದಯಕುಮಾರ್ ಪೋಳ, ಗ್ರಾಂ ಪಂಚಾಯಿತಿ ಸದಸ್ಯರಾದ ಸದಾನಂದ ಮಮದಾಪೂರ, ನಾಗಪ್ಪ ಕಳಸಗೊಂಡ, ವಿನೋದ ಬಿರಾದಾರ, ಮಹೇಶ್ ಐಹೋಳೆ, ಮಲ್ಲಪ್ಪ ನಾಗನೂರ, ರಮೇಶ ಭಜಂತ್ರಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆ ಚಂದ್ರಶೇಖರ ಕೆಂಗನಾಳ, ಸ್ವಾಗತ ಉಮೇಶ ಪೂಜಾರಿ, ವರದಿವಾಚನ ಕೃಷ್ಣಾನಂದ ಬೀದಗೊಂಡ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಶ್ರೀಧರ್ ಪಾರಶೆಟ್ಟಿ, ಬಿ.ಡಿ.ಕುಂಬಾರ, ಆರ್ ಪ್ರತಾಪ್ ನಡೆಸಿಕೊಟ್ಟರು.

