ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದ ಎಸ್.ಕೆ.ಎಂ.ಟ್ರಸ್ಟ್ ಬೆಳ್ಳುಬ್ಬಿ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ನವಚೈತನ್ಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ಪಿಎಸ್ಐ ಎಮ್.ಬಿ.ಬಿರಾದಾರ ಮಾತನಾಡಿ ಮಗು ಹುಟ್ಟಿನಿಂದ ತನ್ನ ಬೆಳವಣಿಗೆಯಲ್ಲಿ ಪರಿಸರದ ಪರಿಣಾಮವಾಗಿ ಅಲ್ಪ ಮಾನವರಾಗಿ ಬಿಡುತ್ತಿದ್ದಾರೆ, ಆ ಮಗುವಿಗೆ ಉತ್ತಮ ಸಂಸ್ಕಾರ ಮತ್ತು ಶಿಕ್ಷಣ ನೀಡಿದರೆ ವಿಶ್ವಮಾನವನಾಗಿ ಗುರುತಿಸಿಕೊಳ್ಳುವಲ್ಲಿ ಶಿಕ್ಷಕರ ಪಾತ್ರ ಬಹಳ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ ಆದುದರಿಂದ ನಿಜವಾಗಿಯೂ ಶಾಲೆಗಳು ಜೀವಂತ ದೇವಾಲಯಗಳು ಇದ್ದಂತೆ ಎಂದು ತಿಳಿಸಿದರು.
ತಾಯಿಯು ಮಗುವಿನ ಬೆಳವಣಿಗೆ ನಿರ್ಲಕ್ಷ್ಯ ತೋರಬಾರದು ಏಕೆಂದರೆ ಮಗು ಆರು ವರ್ಷ ತಾಯಿ ತಂದೆ ಕಾರ್ಯಗಳನ್ನು ನೋಡಿ ಕಲಿಯುತ್ತದೆ ಆದ್ದರಿಂದ ತಾಯಿ ಮೊದಲ ಗುರು ಇದ್ದಂತೆ ಮಗುವಿಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸಿದರೆ ಸಮಾಜಕ್ಕೆ ಅದೇ ದೊಡ್ಡ ಕೊಡುಗೆ ಎಂದು ಹೇಳಿದರು.
ಉಪನ್ಯಾಸಕರಾಗಿ ನಿರ್ಮಲಾ ಶೀಲವಂತ ಮಾತನಾಡಿ ಮಕ್ಕಳಿಗೆ ಕುಟುಂಬ, ಸಮಾಜ, ಪರಿಸರ ಇವುಗಳ ಬಗ್ಗೆ ಸಂಪೂರ್ಣ ಜ್ಞಾನ ತಾಯಿ ಬಾಲ್ಯದಲ್ಲಿ ನೀಡಿದರೆ ಮಗು ಬಹಳ ಖುಷಿ ಸಂತೋಷ ಸಂಭ್ರಮ ದಿಂದ ಬೆಳೆದು ಉತ್ತಮ ಆರೋಗ್ಯವಂತ ಮಗುವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಹಾಗೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ಎಸ್ ಕೆ ಎಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಂಕರ ಕಲ್ಯಾಣಿ (ಬಣಜಿಗೇರ) ವಹಿಸಿದ್ದರು.
ಅತಿಥಿಗಳಾಗಿ ಸಮಾಜ ಚಿಂತಕರಾದ ಭಾರತಿ ಶಂಕರ ಬಣಜಿಗೇರ, ಪ್ರಾಚಾರ್ಯರು ಸಿದ್ದಗಂಗಾ ಪ್ರೌಢಶಾಲೆ, ವಿಜಯಪುರ ಅಂಬಿಕಾ ಬಿರಾದಾರ, ಮಂಜುನಾಥ ಮಟ್ಯಾಳ, ಬಸವರಾಜ ಅಪ್ಪನವರ,ಸಿದ್ದು ನಾಗರಾಳ ಪುಷ್ಪಾ ಪಾರಗೊಂಡ,ಸ್ಮಿತಾ ಬಾಗಿ, ಪಾರ್ವತಿ ತುಪ್ಪದ, ವಿದ್ಯಾಶ್ರೀ ಕೊಬ್ಬನವರ, ಕಲಾವತಿ ಶಿರೂರು, ಗೌರಮ್ಮ ಬಾಗಿ, ಅಶ್ವಿನಿ ಹಂಡಗಿ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

